ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ್ರೆ ಏನಾಗುತ್ತೆ? ಚಿತ್ರ ನೋಡಿ
ವ್ಯಕ್ತಿಯೊಬ್ಬ ಕಾರಿನ ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ ಕಾರಣ ಕಾರು ಆಯತಪ್ಪಿ ಕಚೇರಿಯ ಕಾಂಪೌಂಡಿನ ಒಳಗೆ ಬಿದ್ದ ಘಟನೆ ನಡೆದಿದೆ.
ಬೆಂಗಳೂರು, ಮಾರ್ಚ್ 03: ಜಯನಗರದ ಒನ್ಇಂಡಿಯಾ ಕಚೇರಿ ಮುಂದೆ ಶುಕ್ರವಾರ ಸಂಜೆ ವ್ಯಕ್ತಿಯೊಬ್ಬ ಕಾರಿನ ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿದ ಕಾರಣ ಕಾರು ಆಯತಪ್ಪಿ ಕಚೇರಿಯ ಕಾಂಪೌಂಡಿನ ಒಳಗೆ ಬಿದ್ದ ಘಟನೆ ನಡೆದಿದೆ.

ಜಖಂಗೊಂಡಿರುವ ಮಹಿಂದ್ರಾ ರೇವಾ ಇಲೆಕ್ಟ್ರಿಕ್ ಕಾರು ಇಲ್ಲಿನ ಅಪೋಲೋ ಆಸ್ಪತ್ರೆಗೆಂದು ಬಂದಿದ್ದ ಮಧುಶ್ರೀ ಎಂಬುವವರದ್ದು. ಇವರ ಕಾರನ್ನು ಪಾರ್ಕಿಂಗಿನಿಂದ ಕೊಂಡೊಯ್ಯುತ್ತಿದ್ದ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಆದರೆ, ಶೀರ್ಷಾಸನ ಹಾಕಿದ ರೀತಿಯಲ್ಲಿ ಕಾರು ವಿಭಿನ್ನವಾಗಿ ಪಾರ್ಕಿಂಗ್ ನೋಡಲು ಜನ ಮುಗಿಬೀಳುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರನ್ನು ಓಡಿಸುತ್ತಿದ್ದ ವ್ಯಕ್ತಿ, ನಿಮ್ಮ ಕಾರಿಗೆ ಸಣ್ಣ ಅಪಘಾತವಾಗಿದೆ, ಸಣ್ಣಪುಟ್ಟ ತರಚಿದ ಗಾಯವಾಗಿದೆ ಎಂದು ಫೋನ್ ಮಾಡಿದ್ದಾರೆ. ಆದರೆ, ಬಂದು ನೋಡಿದಾಗ ಮಾಲಿಕರು ಮೂರ್ಛೆ ಬೀಳುವುದು ಬಾಕಿಯಿತ್ತು.
ಈ ಘಟನೆ ನಡೆದ ನಂತರ ವ್ಯಾಲೆಟ್ ಪಾರ್ಕಿಂಗ್ ಮಾಡುವಾಗ ಜನರು ಮತ್ತೊಮ್ಮೆ ವಿಚಾರ ಮಾಡುವಂತಾಗಿದೆ. ಇಂಥ ದೊಡ್ಡ ಅಪಘಾತವಾದರೆ ಯಾರು ಜವಾಬ್ದಾರರು. ಅದೃಷ್ಟವಶಾತ್ ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಗಳು ಆ ಸ್ಥಳದಲ್ಲಿ ಅಲ್ಲಿ ನಿಂತಿರಲಿಲ್ಲ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications