ಸಂಗೀತ ದಿಗ್ಗಜ ಕಿಶೋರ್ ಕುಮಾರ್ ಸಮರ್ಪಣೆ ವಿಶೇಷ
ಬೆಂಗಳೂರು, ಆಗಸ್ಟ್ 25: 58ನೇ ವರ್ಷದ ಬೆಂಗಳೂರು ಗಣೇಶ ಉತ್ಸವದ ಅಂಗವಾಗಿ 5ನೇ ದಿನದಂದು ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವಪೂರ್ಣ ಸಂಗೀತ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
Recommended Video
ಅರುಣ್ ಕುಮಾರ್ ಮುಂದಾಳತ್ವದಲ್ಲಿ ಆಗಸ್ಟ್ 26 , 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬರಲಿದೆ. ಮೋಹನ್ ಕೃಷ್ಣ, ಸುನೀತಾ ಮುರಳಿ, ಸಿದ್ದಾರ್ಥ್ ಬೆಳ್ಮಣ್ಣು, ಸಮನ್ವಿತ ಶರ್ಮಾ, ಗೋವಿಂದ್ ಕರ್ನೂಲ್ ಮತ್ತು ತಂಡವು ಸಂಗೀತ ಪ್ರೇಮಿಗಳ ಮನತಣಿಸಲು ಮುಂದಾಗಿದೆ.
ಕೀ ಬೋರ್ಡ್ ನಲ್ಲಿ ಶಬ್ಬೀರ್ ಅಹ್ಮದ್,ದೀಪಕ್,ಉಮೇಶ್ ಪಾಲ್ಗೊಳ್ಳಲಿದ್ದಾರೆ. ತಬಲಾದಲ್ಲಿ ಮಧುಸೂದನ, ಸತ್ಯ ಮೂರ್ತಿ ಹಾಗೂ ಸುದರ್ಶನ್ ಅವರ ಕೊಳಲುವಾದನದ ಮೋಡಿ ಜತೆಗೆ ಶ್ರೀನಿವಾಸ್ ಆಚಾರ್ ಅವರ ಗೀಟಾರ್ ವಾದನ ಮನಸೂರೆಗೊಳ್ಳಲಿದೆ.

1946ರಲ್ಲಿ, ಅಭಾಸ್ ಕುಮಾರ್ ಮುಂಬೈಗೆ ಬಂದು ತನ್ನ ಹೆಸರನ್ನುಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡರು ಮತ್ತು ಬಾಂಬೆ ಟಾಕೀಸ್ನಲ್ಲಿ ಕೋರಸ್ ಗಾಯಕನಾಗಿ ತಮ್ಮ ಸಿನೆಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರ ಸಹೋದರ ಅಶೋಕ್ ಕುಮಾರ್ ಕೆಲಸ ಮಾಡುತ್ತಿದ್ದರು. ಜಿಡ್ಡಿ (1948) ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಖೇಮಚಂದ್ ಪ್ರಕಾಶ್ ಕುಮಾರ್ ಅವರಿಗೆ "ಮಾರ್ನೆ ಕಿ ಡುಯೆನ್ ಕ್ಯೋನ್ ಮಂಗು" ಹಾಡಲು ಅವಕಾಶ ನೀಡಿದರು.
ಸಂಗೀತ ಲೋಕದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಕಿಶೋರ್ ಕುಮಾರ್ ಅವರು 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಿಶೋರ್ ಕುಮಾರ್ ಅವರು ನಟರಾಗಿ, ಗೀತರಚನೆಕಾರರಾಗಿ, ಮ್ಯೂಸಿಕ್ ಕಂಪೋಸರ್, ನಿರ್ಮಾಪಕ-ನಿರ್ದೇಶಕ ಹಾಗೂ ಸಂಕಲನಕಾರರಾಗಿ ಕೂಡ ಹೆಸರು ಮಾಡಿದವರು. ಆದರೆ ಬಾಲಿವುಡ್ ನಲ್ಲಿ ಇವರು ಗಾಯಕರಾಗಿಯೇ ಚಿರಪರಿಚಿತ. ಇವರ ಸಂಗೀತ, ಧ್ವನಿ ಮಾತ್ರ ಇಂದಿಗೂ ಅಮರ.

ಬರೀ ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೇ, ಕನ್ನಡ, ಬೆಂಗಾಲಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಉರ್ದು ಮುಂತಾದ ಭಾಷೆಗಳಿಗೆ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರು ಧ್ವನಿ ನೀಡಿದ್ದಾರೆ.ಅದ್ರಲ್ಲೂ ಕನ್ನಡದ 'ಕುಳ್ಳ ಏಜೆಂಟ್ 000' ಚಿತ್ರದ 'ಆಡು ಆಟ ಆಡು, ನೀ ಆಡು ಆಡು ಆಡಿ ನೋಡು'... ಅನ್ನೋ ಹಾಡು ಮಾತ್ರ ಎಂದಿಗೂ ಎವರ್ ಗ್ರೀನ್ ಆಗಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications