ಗಣೇಶ ಉತ್ಸವ: ಪ್ರವೀಣ್ ಡಿ. ರಾವ್ ತಂಡದಿಂದ ಫ್ಯೂಷನ್ ಸಂಗೀತ
ಬೆಂಗಳೂರು, ಆಗಸ್ಟ್ 24: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ ಬೆಂಗಳೂರು ಗಣೇಶ ಉತ್ಸವ (ಬಿಜಿಯು), 58ನೇ ವರ್ಷದ ಬೆಂಗಳೂರು ಗಣೇಶ ಉತ್ಸವದ ಪ್ರಯುಕ್ತ 4ನೇ ದಿನದಂದು ಪ್ರವೀಣ್ ಡಿ ರಾವ್ ಚಕ್ರಫೋನಿಕ್ಸ್ ತಂಡ ದಿಂದ ಫ್ಯೂಷನ್ ಸಂಗೀತ ಸಂಜೆ ನಡೆಯಲಿದೆ.
Recommended Video
ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತ ಸಮ್ಮಿಶ್ರಣವನ್ನು ಸಂಗೀತ ರಸಿಕರಿಗೆ ಉಣಬಡಿಸಲು ಸಂಗೀತಗಾರ ಪ್ರವೀಣ್ ಡಿ. ರಾವ್ ನೇತೃತ್ವದ ಚಕ್ರಫೋನಿಕ್ಸ್ ತಂಡ ಸಜ್ಜಾಗಿದೆ. ಆಗಸ್ಟ್ 25 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದ ಮೂಲಕ ಸಂಗೀತಾಭಿಮಾನಿಗಳು ಸಂಗೀತ ಧಾರೆಯಲ್ಲಿ ಮಿಂದೇಳಬಹುದು.
ಚಕ್ರಫೋನಿಕ್ಸ್ ಫ್ಯೂಶನ್ ಸಂಗೀತ ಸಂಜೆಯಲ್ಲಿ ಅಜಯ್ ವಾರಿಯರ್, ವಾರಿಜಾ ಶ್ರೀ ವೇಣು ಗೋಪಾಲ್, ಪ್ರಮಥ್ ಕಿರಣ್ ಮುಂತಾದ ಗಾಯಕರು ಪಾಲ್ಗೊಂಡು ಪ್ರೇಕ್ಷಕರಿಗೆ ಸಂಗೀತ ಮನರಂಜನೆಯನ್ನು ಉಣಬಡಿಸಲಿದ್ದಾರೆ.

ಚಕ್ರಫೊನಿಕ್ಸ್ ವಿಶ್ವ ಸಂಗೀತದ ಸೇತುವೆಗಳೊಂದಿಗೆ ಸಂಪ್ರದಾಯಗಳ ಗಡಿಗಳನ್ನು ದಾಟುವ ದೃಷ್ಟಿ ಹೊಂದಿರುವ ಬಹುಮುಖ ಕಲಾವಿದರ ವಿಶಿಷ್ಟ ತಂಡವಾಗಿದೆ.ಚಕ್ರಫೊನಿಕ್ಸ್ ಭಾರತೀಯ ಶಾಸ್ತ್ರೀಯ ಸಂಗೀತ, ವಿಶ್ವ ಸಂಗೀತದಂತಹ ವಿಶಾಲ ಪ್ರಕಾರಗಳನ್ನು ಪೂರೈಸುತ್ತದೆ. ವಿವಿಧ ಪ್ರತಿಷ್ಠಿತ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ ಪ್ರದರ್ಶನ ನೀಡಿದ ಚಕ್ರಫೊನಿಕ್ಸ್, ಮಾಸ್ಟರ್ ಸಂಗೀತ ತರಗತಿಗಳು ಮತ್ತು ಕಾರ್ಯಾಗಾರಗಳಂತಹ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಭಾರತೀಯ ಶಾಸ್ತ್ರೀಯ ಸಂಗೀತ(ಗಾಯನ ಹಾಗೂ ವಾದ್ಯ), ಫ್ಯೂಷನ್, ಕನ್ನಡ ಭಾವಗೀತೆ ಗಾಯನ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಭಜನೆ, ಭಕ್ತಿಗೀತೆ ಗಾಯನ, ಗುಲಾಂ ಅಲಿ, ಜಗಜೀತ್ ಸಿಂಗ್, ಹರಿಹರನ್, ಮಧುರಾಣಿ ಮುಂತಾದವರ ಗಜಲ್ ಗಾಯಕ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಚಕ್ರಫೋನಿಕ್ಸ್ ನಿರತವಾಗಿದೆ.ಭಾರತೀಯ ಶಾಸ್ತ್ರೀಯ ಸಂಗೀತ, ಗಾಯನ, ವಾದ್ಯ ಸಂಯೋಜನೆ ಕುರಿತಂತೆ ಹಲವಾರು ವರ್ಕ್ ಶಾಪ್ ಗಳನ್ನು ಚಕ್ರ ಫೋನಿಕ್ಸ್ ನಡೆಸುತ್ತಾ ಬಂದಿದೆ. ಈಗ ಚಕ್ರಫೋನಿಕ್ಸ್ ತಂಡ ಆಗಸ್ಟ್ 25, 2020 ರಂದು ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನೀಡಲು ಮುಂದಾಗಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು










Click it and Unblock the Notifications