ಹೊಸ ರಸ್ತೆ ನಿರ್ಮಾಣ; ನೆಲಮಂಗಲ-ಬೆಂಗಳೂರು ವಿಮಾನ ನಿಲ್ದಾಣ
ಬೆಂಗಳೂರು, ಜೂನ್ 25 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಈಗ 39 ಕಿ. ಮೀ. ಮತ್ತೊಂದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
Recommended Video
ಯಾವುದೇ ಸಂಚಾರ ದಟ್ಟಣೆ ಇಲ್ಲದೇ ನೆಲಮಂಗಲ-ಮಧುರೆ-ರಾಜಾನಕುಂಟೆ ಮೂಲಕ ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. 39 ಕಿ. ಮೀ. ರಸ್ತೆ ನಿರ್ಮಾನ ಮಾಡುವುದಕ್ಕೆ 310 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಸಿಗ್ನಲ್ ಮುಕ್ತವಾಗಿರುವ ಈ 4 ಪಥದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬರುವ ಜನರು ಸುಲಭವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

ನೆಲಮಂಗಲದ ಮೂಲಕ ಈ ರಸ್ತೆ ದೇವನಹಳ್ಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ರಸ್ತೆ ನಿರ್ಮಾಣದಿಂದಾಗಿ ನೆಲಮಂಗಲದ, ರಾಜಾನಕುಂಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಸಹಕಾರಿಯಾಗಲಿದೆ. ಭೂಮಿ ಖರೀದಿಗೆ ಪೈಪೋಟಿ ನಡೆಯಲಿದೆ.
ಒಟ್ಟು 39 ಕಿ. ಮೀ. ರಸ್ತೆಯನ್ನು 310 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2.5 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನೆಲಮಂಗಲದಿಂದ ಮಧುರೆ (ಕೋಡಿಪಾಳ್ಯ) 15 ಕಿ. ಮೀ. ಮೊದಲ ಹಂತದಲ್ಲಿ ಪೂರ್ಣಗೊಳ್ಳಲಿದೆ.
ಮಧುರೆಯಿಂದ ರಾಜಾನಕುಂಟೆ 15 ಕಿ. ಮೀ ಮಾರ್ಗ 2ನೇ ಹಂತದಲ್ಲಿ ನಡೆಯಲಿದೆ. ನಾರಾಯಣಪುರ ಬಳಿ ರೈಲ್ವೆ ಮೇಲ್ಸೇತುವೆ, ರಾಜಾನಾಕುಂಟೆ ಬಳಿ ಇರುವ ಹಾಲಿ ಮೇಲ್ಸೇತುವೆ ವಿಸ್ತರಣೆ ಮತ್ತು ಮಧುರೆ ಕೆರೆ ಕೋಡಿ ವಿಸ್ತರಣೆ ಕಾಮಕಾರಿಯೂ ಇದರಲ್ಲಿ ಸೇರಿದೆ.












Click it and Unblock the Notifications