ಹೊಂಗೆ ಮರದಡಿಯಲ್ಲಿ ನಮ್ಮ ನಿಮ್ಮ ಕಥೆಗಳ ಭೇಟಿ
ಬೆಂಗಳೂರು, ನ. 27: (3K) ಕನ್ನಡ , ಕವಿತೆ , ಕಥನ ಎಂಬ ಹೆಸರಿನಡಿ ಆರ್ಕುಟ್ ನಲ್ಲಿ ಸಣ್ಣದಾಗಿ ಆರಂಭಗೊಂಡು ನಂತರ ಫೇಸ್ಬುಕ್ ಗೆ ಎಂಟ್ರಿ ಕೊಟ್ಟ ಗುಂಪು ಈಗ ಪುಸ್ತಕ ಪ್ರಕಟನೆ ಮುಂದಾಗಿ ಯಶಸ್ವಿಯಾಗುತ್ತಿದೆ.
3K ಗುಂಪಿನ ರೂವಾರಿ ರೂಪ ಸತೀಶ್ ಅವರ ಯೋಜನೆಯಂತೆ ತಿಂಗಳುಗಳ ಹಿಂದೆ ಈ ಗುಂಪಿನ ವತಿಯಿಂದ ಆಯೋಜಿಸಿದ್ದ ಕಥನ ಮತ್ತು ಕವಿತೆಯ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪರ್ಧೆಗೆ ಕಥೆಗಳನ್ನು ಆಯ್ದು 3K ಕಥಾ ಸಂಕಲನ ಬಿಡುಗಡೆ ಮಾಡಲಾಗುತ್ತಿದೆ. ನ. 29ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಳಗ್ಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವಿರುತ್ತದೆ.
ಕಥೆ: ಈ ಸ್ಪರ್ಧೆಯ ಅಂಗಳವ ಹುಡುಕಿ ಬಂದಿದ್ದು ಒಟ್ಟು 68 ಕಥೆಗಳು ಅದರಲ್ಲಿ ಉತ್ತಮವೆನಿಸಿದ 26 ಕಥೆಗಳನ್ನು ತೀರ್ಪುಗಾರರದ ಮಂಜುನಾಥ ಕೊಳ್ಳೇಗಾಲ ರವರು ಆರಿಸಿದ್ದಾರೆ. ಹಿರಿಯ ಪತ್ರಕರ್ತ, ರಂಗ ತಜ್ಞರಾದ ಗೋಪಾಲ ವಾಜಪೇಯಿ ರವರು ಉದ್ಘಾಟಿಸಲಿದ್ದಾರೆ. ಪತ್ರಕರ್ತ, ಲೇಖಕ ಜೋಗಿ ಅಲಿಯಾಸ್ ಗಿರೀಶ್ ರಾವ್ ಹತ್ವಾರ್ ಅವರು ಕಥಾ ಸಂಕಲನ ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ತೀರ್ಪುಗಾರಲ್ಲಿ ಒಬ್ಬರಾದ ಮಂಜುನಾಥ ಕೊಳ್ಳೇಗಾಲ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈಗಾಗಲೇ ಭಾವ ಸಿಂಚನ ಮತ್ತು ಶತಮಾನಂ ಭವತಿ ಎಂಬ ಎರಡು ಕವನ ಸಂಕಲವನ್ನು ಹೊರತಂದಿರುವ ಈ ಬಳಗ ಮೂರನೆಯದಾಗಿ 3K ಕಥಾ ಸಂಕಲವನ್ನು ಹೊರತರುತ್ತಿದೆ.

ಫೇಸ್ಬುಕ್ ಎನ್ನುವುದು ಈಗಿನ ಬಹುತೇಕ ಮಂದಿಯ ದಿನಚರಿಯ ಒಂದು ಭಾಗ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಫೇಸ್ಬುಕ್ ಎಂಬ ಮಾಯಾಜಾಲದಲ್ಲಿ ಅದೆಷ್ಟೋ ಮಂದಿ ಬಂದು ಹೋಗುತ್ತಾರೆ, ಅದೆಷ್ಟೋ ಗುಂಪುಗಳು ಹುಟ್ಟಿ ಸಾಯುತ್ತವೆ. ಆದರೆ ನೆಲೆಯುರುವುದು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವುದು ಬೆರಳೆಣಿಕೆಯಷ್ಟೇ ಗುಂಪುಗಳು.
ಇತ್ತೀಚಿಗೆ ಈ ಮುಖಪುಸ್ತಕದ ಪುಟ ತೆರೆದಷ್ಟು ಕಾಣುವುದು ವಾದ, ವಿವಾದ, ಜಗಳ ದ್ವೇಷ ಇತ್ಯಾದಿಗಳ ನಡುವೆ ಕನ್ನಡ, ಕವಿತೆ, ಕಥನ, ಸ್ನೇಹ, ಪ್ರೀತಿ ಮತ್ತು ನಂಬಿಕೆಯನ್ನಷ್ಟೇ ಮೂಲ ಅಸ್ತ್ರವಾಗಿರಿಸಿಕೊಂಡು ಒಗ್ಗಟ್ಟಿನ ಮೂಲ ಮಂತ್ರ ಜಪಿಸುತ್ತ ಉದಯೋನ್ಮುಖ ಕವಿಗಳಿಗೆ, ಕತೆಗಾರರಿಗೆ ಒಂದು ಉಪಯುಕ್ತ ವೇದಿಕೆ ಕಲ್ಪಿಸಿಕೊಟ್ಟು ಕನ್ನಡದ ಸೇವೆಯಲ್ಲಿ ನಿರತರಾಗಿರುವ ಈ ಬಳಗಕ್ಕೆ ನಾವು ಅಭಿನಂದನೆ ಸಲ್ಲಿಸಲೇಬೇಕು.
ಈ ಬಳಗದಲ್ಲಿ ಈಗಷ್ಟೇ ಅಂಬೆಗಾಲು ಇಡುತ್ತಿರುವ ಸಾಹಿತಿಯಿಂದ ಪರಿಣಿತ ಸಾಹಿತಿಗಳವರೆಗೂ ಒಂದು ಬಹು ದೊಡ್ಡ ವರ್ಗ ನಿಮಗೆ ಕಾಣಸಿಗಲಿದೆ.

3K ಗುಂಪು: (3K) ಕನ್ನಡ , ಕವಿತೆ , ಕಥನ ಎಂಬ ಗುಂಪಿನಲ್ಲಿ ತಮ್ಮ ಮೂಲ ಉದ್ದೇಶಗಳಿಗೆ ಬದ್ಧರಾಗಿ ಅಂದಿಗೂ ಇಂದಿಗೂ ಅದೇ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಕನ್ನಡಾಭಿಮಾನಕ್ಕೆ, ಕನ್ನಡದ ಕಾರ್ಯಗಳಿಗೆ ಅನೇಕ ಕೈಗಳು ಜೊತೆಯಾಗಿವೆ. ದಿನವಿಡೀ ಈ ಗುಂಪಿನಲ್ಲಿ ಅನೇಕರು ತಮ್ಮ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಾರೆ, ಕೆಲವರು ಮಾರ್ಗದರ್ಶನ ನೀಡುತ್ತಾರೆ. ಈ ಗುಂಪು ಹೊಸತಲೆಮಾರಿನ ಕವಿಗಳಿಗೆ ಕಾವ್ಯ ಪಾಠ ಶಾಲೆಯೆಂದರೆ ತಪ್ಪಿಲ್ಲ. ಈ ಯಶಸ್ಸು ಆ ಗುಂಪಿನ ಪ್ರತಿಯೋರ್ವ ಸದಸ್ಯನ ಹೆಗ್ಗಳಿಕೆ.
ಕವನ: ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ರಾಜ್ಯೋತ್ಸವ ಕವಿತೆಯ ಸ್ಪರ್ಧೆಯನ್ನು ಹುಡುಕಿ ಬಂದ 100 ಕವಿತೆಗಳಲ್ಲಿ ಉತ್ತಮವೆನಿಸಿದ 6 ಕವಿತೆಗಳನ್ನು ತೀರ್ಪುಗಾರರದ ನಾಡಿನ ಹೆಸರಾಂತ ಕವಿ ಡಾ . ಜಯಂತ್ ಕಾಯ್ಕಿಣಿ ರವರು ಆರಿಸಿದ್ದಾರೆ ಮತ್ತು ಈ ಆಯ್ದ ಕವಿಗಳಿಗೆ ಬಹುಮಾನವನ್ನು 3K ಕಥನ ಸಂಕಲನದ ಸಮಾರಂಭದ ದಿನವೇ ನೀಡಿ ಗೌರವಿಸಲಾಗುವುದು.
ಇದೇ ರೀತಿ ಇನ್ನಷ್ಟು ಕನ್ನಡದ ಕಾರ್ಯಗಳು ಈ ಬಳಗದಿಂದಾಗಲಿ ಮತ್ತಷ್ಟು ಕವಿಗಳಿಗೆ ಉತ್ತೇಜನ ನೀಡಲಿ, ಕಥೆಗಾರರನ್ನು ಪ್ರೋತ್ಸಾಹಿಸಲಿ ನಿರಂತರ ಈ ಸೇವೆ ಸಾಗಲಿ ..
ನೀವು ಬನ್ನಿ ಹೊಂಗೆ ಮರದಡಿ ಕೂತು ನಮ್ಮ ನಿಮ್ಮ ಕವಿತೆಗಳನ್ನು ಆಲಿಸೋಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಹಾಗೇ ಕನ್ನಡದ ಕಾರ್ಯಗಳಿಗೆ ನಾವು ಕೂಡ ಕೈಜೋಡಿಸೋಣ .. 3K ಫೇಸ್ ಬುಕ್ ಕೊಂಡಿ ಇಲ್ಲಿದೆ ಕ್ಲಿಕ್ಕಿಸಿ
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications