Get Updates
Get notified of breaking news, exclusive insights, and must-see stories!

ಒಂದು ವಾರದಲ್ಲಿ ಕನ್ನಡಿಗರಲ್ಲಿ ಕಿಚ್ಚುಹೊತ್ತಿಸಿದ ಆ ಮೂರು ಟ್ವೀಟ್ ಗಳು..!

ಬೆಂಗಳೂರು, ಅಕ್ಟೋಬರ್ 05: ಕಳೆದ ಒಂದು ವಾರಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಮೂರು ಟ್ವೀಟ್ ಗಳು!

ಬಿಹಾರ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮಾಡಿದ ಟ್ವೀಟ್ , ಆ ನಂತರ ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಟ್ವೀಟ್ ಹಾಗೂ ಅದಕ್ಕೆ ಸಂಸದ ಡಿವಿ ಸದಾನಂದ ಗೌಡ ಅವರು ನೀಡಿದ ಪ್ರತಿಕ್ರಿಯೆ ಇವು ಸಾಮಾಜಿಕ ಜಾಲತಾಣಗಳಲ್ಲಿರುವ ಕನ್ನಡಿಗರಲ್ಲಿ ಕಿಚ್ಚುಹೊತ್ತಿಸಿತ್ತು.

ಕರ್ನಾಟಕದ ಜನರ ಆಕ್ರೋಶಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿತ್ತು.

ನರೇಂದ್ರ ಮೋದಿ ಟ್ವೀಟ್

ನರೇಂದ್ರ ಮೋದಿ ಟ್ವೀಟ್

"ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸಂತ್ರಸ್ಥರಿಗೆ ನೆರವು ನೀಡಲು ಸ್ಥಳೀಯ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ರಾಜ್ಯಕ್ಕೆ ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೂ ಅದನ್ನು ಮಾಡಲು ಕೇಮದ್ರ ಸಿದ್ಧವಿದೆ" ಎಂದು ಸೆಪ್ಟೆಂಬರ್ 30 ರಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

ಚಕ್ರವರ್ತಿ ಸೂಲಿಬೆಲೆ ಟ್ವೀಟ್

ಚಕ್ರವರ್ತಿ ಸೂಲಿಬೆಲೆ ಟ್ವೀಟ್

ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಹವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಬೇಸರ ತಂದಿದೆ. ಆದರೆ ಈಗಲೂ ಅವರ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ವಿಶ್ವಸಂಸ್ಥೆಯಲ್ಲಿ ಅವರ ಭಾಷಣ, ಟರ್ಕಿ ವಿಷಯವನ್ನು ಅವರು ನಿರ್ವಹಿಸಿದ ರೀತಿ, ಭಾರತಕ್ಕೆ ಹೂಡಿಕೆದಾರರನ್ನು ಕರೆತರಲು ಅವರು ಮಾಡಿದ ಪ್ರಯತ್ನ ಎಲ್ಲವೂ ಅಸಾಧಾರಣ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.

ಸದಾನಂದ ಗೌಡ ಟ್ವೀಟ್

ಸದಾನಂದ ಗೌಡ ಟ್ವೀಟ್

'ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಎಂದು ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು ಈ ರೀತಿ ಮಾಡುತ್ತಾರೆ. ಈ ಬಗೆಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರಾಂಡ್‌ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‌ಗಳಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಮತ್ತು ಜನರಿಂದ ಬಹಳ ನೋವಾಗಿದೆ' ಎಂದು ಡಿವಿ ಸದಾನಂದಗೌಡ ಟ್ವೀಟ್ ಮಾಡಿದ್ದರು

ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿತ್ತು...

ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿತ್ತು...

ಕನ್ನಡಿಗರಲ್ಲಿ ಈ ಮೂರು ಟ್ವೀಟ್ ಗಳು ಅದೆಷ್ಟು ಕಿಚ್ಚು ಹೊತ್ತಿಸಿದವು ಎಂದರೆ ನೆರೆ ಪರಿಹಾರದ ಸುತ್ತಮುತ್ತಲೇ ಬಂದ ಈ ಟ್ವೀಟ್ ಗಳು ಮೋದಿಯವರ ಅಭಿಮಾನಿಗಳಲ್ಲೇ ಅಸಮಾಧಾನ ಉಂಟುಮಾಡಿತ್ತು. ಬಿಜೆಪಿಯಲ್ಲೇ ಎರಡು ಪಂಗಡಗಳಾದವು. ಸೂಲಿಬೆಲೆ ಪರ ಕೆಲವರು ಬ್ಯಾಟ್ ಮಾಡಿದರೆ ಡಿವಿ ಸದಾನಂದ ಗೌಡ ಅವರ ಪರ ಮತ್ತಷ್ಟು ಜನ ಮಾತನಾಡಿದರು. ಇವರೆಲ್ಲರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+