ಬೆಂಗಳೂರಿನ ಶುದ್ಧ ಗಾಳಿಗಾಗಿ 140 ಕೋಟಿಯ 11 ಯೋಜನೆ
140 ಕೋಟಿ ರೂಪಾಯಿಗಳ 11 ಯೋಜನೆಗಳಿಗೆ 15ನೇ ಹಣಕಾಸು ಆಯೋಗದಿಂದ ಹಣ ನೀಡಲಾಗಿದ್ದು, ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಅನುಮತಿ ನೀಡಲಾಗಿದೆ.
ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನ ವಾಯು ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಸರ್ಕಾರವು 140 ಕೋಟಿ ರೂಪಾಯಿಗಳ 11 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಈ ಯೋಜನೆಗಳಿಗೆ 15ನೇ ಹಣಕಾಸು ಆಯೋಗದಿಂದ ಹಣ ನೀಡಲಾಗಿದ್ದು, ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಅನುಮತಿ ನೀಡಲಾಗಿದೆ. 11 ಕಾಮಗಾರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ತೋಟಗಾರಿಕೆ ಇಲಾಖೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ನಡುವೆ ವಿಂಗಡಿಸಲಾಗಿದೆ.
ಬಸ್ ಡಿಪೋಗಳನ್ನು ವಿದ್ಯುದೀಕರಣಗೊಳಿಸುವುದು (20 ಕೋಟಿ ರೂ.), ಐದು ಡಬಲ್ ಡೆಕ್ಕರ್ ಬಸ್ಗಳಿಗೆ (10 ಕೋಟಿ ರೂ.), ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು (ರೂ. 1 ಕೋಟಿ), ಮತ್ತು 100 ಎಲೆಕ್ಟ್ರಿಕ್ ಫೀಡರ್ ಬಸ್ಗಳನ್ನು ಒದಗಿಸುವುದು (ರೂ. 13 ಕೋಟಿ) ಸೇರಿದಂತೆ ವಿವಿಧ ಕೆಲಸಗಳನ್ನು ಬಿಎಂಟಿಸಿಗೆ ವಹಿಸಲಾಗಿದೆ.

ಬಿಬಿಎಂಪಿಗೆ ಬೀದಿ ಗುಡಿಸುವ ಮೆಕ್ಯಾನಿಕಲ್ ಯಂತ್ರಗಳನ್ನು (30 ಕೋಟಿ ರೂ.), ಸುಸಜ್ಜಿತ ಫುಟ್ಪಾತ್ಗಳನ್ನು ನಿರ್ಮಿಸಲು (ರೂ. 30 ಕೋಟಿ), ವರ್ಟಿಕಲ್ ಗಾರ್ಡನ್ಗಳನ್ನು ನಿರ್ಮಿಸಲು (ರೂ. 5 ಕೋಟಿ), ನಿರ್ಮಾಣ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲು (ರೂ. 20 ಕೋಟಿ) ಮತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು (5 ಕೋಟಿ ರೂ.) ಯೋಜನೆಗಳನ್ನು ನೀಡಲಾಗಿದೆ.
ಇದೇ ಯೋಜನೆಯಡಿ ಈ ಹಿಂದೆ 279 ಕೋಟಿ ರೂ.ಗಳನ್ನು ಒದಗಿಸಿದ್ದರೂ ಬಿಬಿಎಂಪಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಪಾಲಿಕೆಯು 42 ಟ್ರಾಫಿಕ್ ಇಂಟರ್ಸೆಕ್ಷನ್ಗಳಲ್ಲಿ ನೀರಿನ ಕಾರಂಜಿಗಳನ್ನು ಸ್ಥಾಪಿಸಲು, ಮೆಕ್ಯಾನಿಕಲ್ ಸ್ವೀಪರ್ ಯಂತ್ರಗಳನ್ನು ಖರೀದಿಸಲು, ಅಶುದ್ಧ ಗಾಳಿ ಹೊರಸೂಸುವಿಕೆಯನ್ನು ಅಳೆಯಲು ಸೆನ್ಸರ್ಗಳನ್ನು ಸ್ಥಾಪಿಸಲು ಮತ್ತು ಟೆಂಡರ್ಶುರ್ ರಸ್ತೆಗಳನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಆದರೆ, ಸದ್ಯಕ್ಕೆ ಈ ಯೋಜನೆಗಳು ಜಾರಿಯಾಗಿಲ್ಲ.
ನಗರವು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಈ ಹಣಕಾಸು ವರ್ಷಕ್ಕೆ 15ನೇ ಹಣಕಾಸು ಆಯೋಗದಿಂದ 140 ಕೋಟಿ ರೂಪಾಯಿಗಳ ಹೊಸ ಅನುದಾನವನ್ನು ಪಡೆದಿತ್ತು. ಇದು ಕಳೆದ ವರ್ಷ ಕೇಂದ್ರದಿಂದ ಬಿಡುಗಡೆಯಾದ 279 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವಾಗಿದೆ. ಪ್ರಮುಖವಾಗಿ ಬಿಎಂಟಿಸಿ ಮತ್ತು ಬಿಬಿಎಂಪಿಯಿಂದ ಅನುಷ್ಠಾನಗೊಳ್ಳಲಿರುವ ಹತ್ತು ಕಾಮಗಾರಿಗಳ ಕ್ರಿಯಾ ಯೋಜನೆಗೆ ಕಳೆದ ವಾರ ಸಭೆ ಸೇರಿದ್ದ ರಾಜ್ಯಮಟ್ಟದ ಅನುಷ್ಠಾನ ಮೇಲ್ವಿಚಾರಣಾ ಸಮಿತಿ (ಎಸ್ಎಲ್ಎಂಐಸಿ) ಅನುಮೋದನೆ ನೀಡಿತ್ತು.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications