ಯಡಿಯೂರಪ್ಪ ಅವರ ಶಾದಿ ಹಟದ ಗುಟ್ಟೇನು..?
ಬೆಳಗಾವಿ, ನ. 27 : ಯಾಕೆ ಬೇಕು ಅಂದ್ರು ಹೋರಾಟ ನೋಡಿ.. ಅಲ್ಲದೇ ಯಡಿಯೂರಪ್ಪ ಅವರು ಹೋರಾಟಗಾರ ಅಂತಾ ಬೇರೆ ಕರೆಸಿಕೊಂಡವರು. ಅದೊಂದೆ ಕಾರಣಕ್ಕೆ ಏನೋ ಯಡಿಯೂರಪ್ಪ ಅವರು ಶಾದಿ ಭಾಗ್ಯ ವಿಸ್ತರಣೆಗಾಗಿ ಸದನದ ಬಾವಿಯಲ್ಲಿ ಧರಣಿ ಕುಳಿತಿದ್ದಾರೆ. ಕುಳಿತಿದ್ದು ಎಷ್ಟೋ ಹೊತ್ತೋ ಅಷ್ಟೇ ಹೊತ್ತು ಯಡಿಯೂರಪ್ಪ ನಿಂತಿದ್ದು ಉಂಟು, ರಾತ್ರಿ ಮಲಗಿದ್ದು ಇದೆ ಬಿಡಿ.
ಅದು ಹಾಗಿರಲಿ ಯಡಿಯೂರಪ್ಪ ಯಾರಿಗೂ ಜಗ್ಗಲ್ಲ ಬಗ್ಗಲ್ಲ ಅಂದ್ರೂ, ಅವರ ಮಂಡಿ ಕೇಳಬೇಕಲ್ರಿ.. ಅದಕ್ಕೆ ಏನೋ ನಿಮಗೆ ಗೊತ್ತಿರಲಿ ಬಿಎಸ್ವೈ ಒಂದು ಹಂತದಲ್ಲಿ ಶಾದಿ ಭಾಗ್ಯ ಹೋರಾಟಕ್ಕೆ ವಿರಾಮ ಕೊಟ್ಟು ಸದನದ ಚರ್ಚೆಯಲ್ಲಿ ಭಾಗವಹಿಸೋ ಮನಸ್ಸು ಮಾಡಿದ್ರು.. ಆದ್ರೆ ಮೆಡಮ್ ಬಿಡ್ತಿಲ್ವಂತೆ.. ಶಾದಿ ಭಾಗ್ಯ ಧರಣಿ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಆರಂಭದಿಂದಲೂ ಪ್ರತಿಯೊಂದಕ್ಕೂ ಸಲಹೆ ನೀಡಿದವರು ಶೋಭಾ ಕರಂದ್ಲಾಜೆ ಅವರಂತೆ.

ಯಾವ ಸಿಎಂ ವಿರುದ್ಧ ಯಡಿಯೂರಪ್ಪ ಅವರು ಗುಡುಗುತ್ತಿದ್ರೋ, ಅದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ಧರಣಿ ಹಿಂತೆಗೆದುಕೊಳ್ಳಲು ಮನವಿ ಮಾಡಿದ್ರು.. ಎಲ್ಲೋ ಒಂದು ಕಡೆ ಯಡಿಯೂರಪ್ಪ ಅವರು ಕೂಡಾ ಧರಣಿಯಿಂದ ಹಿಂದೆ ಸರಿಯಲು ಮನಸ್ಸು ಮಾಡಿದ್ರಂತೆ.. ಆದ್ರೆ ಶೋಭಾ ಮೆಡಮ್ ಮಾತ್ರ ಬಿಡ್ತಿಲ್ವಂತೆ.
ಧರಣಿ ಹಿಂತೆಗೆದುಕೊಳ್ಳಲಿಕ್ಕೆ ಸದನದ ಬಾವಿ ಹಾರುವ ಮುನ್ನವೆ ಯಡಿಯೂರಪ್ಪ ಯೋಚನೆ ಮಾಡಿದ್ರಂತೆ. ಮಾಧ್ಯಮದವರ ಮುಂದೆ ಬೆಳಗಾವಿಯಲ್ಲಿ ಧರಣಿ ಮಾಡ್ತೇನೆ ಅಂದು ಬಿಟ್ಟಿದ್ರು.. ಹೀಗಾಗಿ ಬಿಎಸ್ವೈ ಸದನದ ಬಾವಿಗೆ ಹಾರೋ ಪರಿಸ್ಥಿತಿ ಬಂತಂತೆ. ವಿಧಾನ ಸಭೆಯಲ್ಲೂ ಎಲ್ಲಾ ಗುಡುಗಿದ ಮೇಲೆ ಸ್ಪೀಕರ್ ಸಿಎಂ ಮನವೊಲಿಸಿದ್ರು. ಆಗ ಧರಣಿಗೆ ವಿರಾಮ ಇಡುವ ಯೋಚನೆ ಮಾಡಿದ್ರು.
ಅಲ್ಲದೇ ಸದನದಲ್ಲಿ ಕಬ್ಬು ಬೆಳಗಾರರ ಬಗ್ಗೆ ಚರ್ಚೆ ನಡೆದಾಗ ಯಡಿಯೂರಪ್ಪ ಅವರಿಗೂ ರೈತರ ಪರ ಮಾತಾಡಿ ಸುದ್ದಿ ಮಾಡಬೇಕು ಅನ್ನೋ ಆಸೆ ಕಾಡ್ತಿತ್ತು.. ಕುಮಾರಸ್ವಾಮಿ ಅವರು ಕಬ್ಬು ಬೆಳಗಾರರ ವಿಚಾರದಲ್ಲಿ ಮಾತನಾಡ್ತಿದ್ದಾಗ ಬಾವಿಯೊಳಗೆ ಎದ್ದು ನಿಂತು ನೋಟ್ ಮಾಡಿಕೊಳ್ತಿದ್ದ ಯಡಿಯೂರಪ್ಪ, ಚೇ ನಮ್ಮ ವಿರೋಧ ಪಕ್ಷದ ನಾಯಕರು ಈ ವಿಷಯ ಬಿಡ್ತಿದ್ದಾರಲ್ಲ ನಾನಿದ್ದಿದ್ರೆ ಅಂತಾ ಮನಸ್ಸಲ್ಲೆ ಅಂದುಕೊಳ್ತಿದ್ರು. ಆದ್ರೆ ಧರಣಿಯಲ್ಲಿ ನಿರತರಾದ ಮೇಲೆ ಮಾತಡೋಹಾಗಿಲ್ವೇ..
ಮಂಡಿ ನೋವಿನ ನಡುವೆಯೂ ಬಿಎಸ್ವೈ ಎರಡನೇ ದಿನ ಧರಣಿ ಮುಂದುವರಿಸ್ತಿದ್ದಾರೆ ಅಂದ್ರೆ ಅವರಿಗೊಂದು ನಂಬಿಕೆ ಇತ್ತು.. ಮಾರ್ಷೆಲ್ ಮೂಲಕ ನನ್ನನ್ನ ಬಾವಿಯಿಂದ ಹೊರಹಾಕಿಸ್ತಾರೆ ಅಂತಾ.. ಆದ್ರೆ ಎರಡನೇ ದಿನ ಸದನ ಆರಂಭ ಆಗ್ತಿದ್ದ ಹಾಗೇ ಸಿಎಂ ಸ್ಪಷ್ಟವಾಗಿ ಹೇಳಿಬಿಟ್ರು ನಾವು ಇನ್ನ ಯಡಿಯೂರಪ್ಪ ಅವರ ಮನವೊಲಿಸಲ್ಲ ಅಂತಾ. ಕೊನೆಗೆ ಬಿಎಸ್ ವೈ ಒಂದು ಪ್ಲಾನ್ ಕೂಡಾ ಮಾಡಿದ್ರು. ಮಾಧ್ಯಮದವರಿಗೆ ಹೇಳಿ ನನ್ನನ್ನ ಇಲ್ಲಿಂದ ಹೊರ ಹಾಕಿಸಲಿಕ್ಕೆ ನೀವು ಸ್ಪೀಕರ್ ಗೆ ಸಲಹೆ ನೀಡಿ.
ಇಲ್ಲಿ ಒಬ್ಬನೆ ಕುಳಿತು ಮಂಡಿ ನೋವು ಸಾಕಾಗಿದೆ ಅಂತಾ.. ಇದೇನಾದ್ರು ವರ್ಕ್ ಆದ್ರೆ ಬಿಎಸ್ವೈ ಸದನದ ಒಳಗಿನ ಹೋರಾಟಕ್ಕೆ ವಿರಾಮ ಸಿಗಬಹುದೇನೋ.. ಆದ್ರೆ ಕಬ್ಬು ಬೆಳೆಗಾರರ ಜೊತೆ ಹೋಗಿ ಯಡಿಯೂರಪ್ಪ ಧರಣಿ ಕುಳಿತು ಬಿಟ್ಟರೇ ಅನ್ನೋ ಚಿಂತೆ ಕೂಡಾ ಸರ್ಕಾರಕ್ಕಿದೆ.. ಆದ್ರೂ ನೋಡಿ ಯಡಿಯೂರಪ್ಪ ಹೋರಾಟಗಾರ.. ಬಟ್ ಅವರ ಜೊತೆಯವರು ಯಾಕೆ ಹಿಂಗೆ ಮಾಡ್ತಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications