'ಮಹಾದಾಯಿ ವಿವಾದ ಬಗೆಹರಿಸಲು ದೇವೇಗೌಡರಂತೆ ಇಚ್ಛಾಶಕ್ತಿ ಬೇಕು'
ಬೆಳಗಾವಿ, ನವೆಂಬರ್ 23 : ವಿಧಾನಪರಿಷತ್ ಕಲಾಪದಲ್ಲಿ ನಡೆದ ಮಹದಾಯಿ ವಿವಾದ ಮೇಲಿನ ಚರ್ಚೆ ವೇಳೆ ಜೆಡಿಎಸ್ ನ ವೈ.ಎಸ್.ವಿ ದತ್ತ ಅವರು ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಕ್ಕೆ ಸರಿಯಾಗಿ ಛಾಟಿ ಬೀಸಿದರು.
ಮಹದಾಯಿ ವಿವಾದದಲ್ಲಿ ಕೆಂದ್ರ ಹಾಗೂ ರಾಜ್ಯ ಸರ್ಕಾರ ಎರಡರದ್ದೂ ಜವಾಬ್ದಾರಿ ಹೀನ ನಡೆ ಎಂದು ಟೀಕಿಸಿದ ವೈ.ಎಸ್.ವಿ.ದತ್ತ. ತಮಿಳುನಾಡು ರಾಜ್ಯದ ತೀರ್ವ ವಿರೋಧದ ನಡುವೆಯೂ ಕಾವೇರಿ ನೀರಿನ ವಿಷಯದಲ್ಲಿ ದೇವೆಗೌಡರು ತಳೆದಿದ್ದ ದಿಟ್ಟ ನಿರ್ಧಾರವನ್ನು ಸದನದ ನೆನಪಿಗೆ ತಂದರು.

ಕಾವೇರಿ ನಾಲ್ಕನೇ ಹಂತಕ್ಕೆ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಒಪ್ಪಿಗೆ ನೀಡಿರಲಿಲ್ಲ. ಈಗ ಮೋದಿ ಮಾಡುತ್ತಿರುವಂತೆಯೇ ಪಿ.ವಿ. ನರಸಿಂಹರಾಯರೂ ಸಹ ವ್ಯಾಜ್ಯ ನ್ಯಾಯಾಧೀಕರಣದಲ್ಲಿದೆ ಅನ್ನುವ ಕಾರಣ ಕೊಟ್ಟಿದ್ದರು ಆದರೆ ಅಂತಹಾ ವಿಷಮ ಪರಿಸ್ಥಿತಿಯಲ್ಲಿಯೂ ದೇವೇಗೌಡರು ಬೆಂಗಳೂರಿಗೆ ಕಾವೇರಿ ನೀರು ಹರಿಸುವ ದಿಟ್ಟ ನಿರ್ಧಾರ ಕೈಗೊಂಡರು ಎಂದು ಎಂದು ದೇವೇಗೌಡ ಅವರ ದಿಟ್ಟತನವನ್ನು ನೆನಪಿಗೆ ತಂದುಕೊಂಡರು.
ದಿಟ್ಟ ಆದೇಶ ಹೊರಡಿಸಿದ್ದ ದೇವೇಗೌಡ ಅವರು ಆದೇಶ ಪ್ರತಿಯಲ್ಲಿ 'ಸದ್ಯಕ್ಕೆ ಕಾವೇರಿ ನಾಲ್ಕನೇ ಹಂತದಿಂದ ನೀರು ಪಡೆಯುತ್ತೇವೆ ನ್ಯಾಯಾಧಿಕರಣದ ತೀರ್ಪು ಬಂದ ಮೇಲೆ ನಮ್ಮ ಪಾಲಿನ ನೀರಿನಲ್ಲಿ ಅದನ್ನು ಕಡಿತ ಮಾಡಿಕೊಳ್ಳಿ ಎಂದು ದೇವೇಗೌಡರು ಆದೇಶದಲ್ಲಿ ಹೇಳಿದ್ದರು' ಎಂದು ಹಳೆಯ ದಿನಗಳನ್ನು ನೆನೆದರು.
ಆನಂತರ ಜೂನ್ 1, 1996 ರಲ್ಲಿ ದೇವೇಗೌಡರು ಪ್ರಧಾನಿಯಾದರು. ಪ್ರಧಾನಿಯಾದ ಎಂಟೇ ತಿಂಗಳಲ್ಲೇ ದೇವೇಗೌಡರು ಕಾವೇರಿ ನಾಲ್ಕನೇ ಹಂತಕ್ಕೆ ಒಪ್ಪಿಗೆ ನೀಡಿದರು, ಇದರಿಂದ ಬೆಂಗಳೂರಿಗೆ ಕಾವೇರಿ ನೀರು ನಿಗುವಂತಾಯಿತು ಎಂದು ಹೇಳಿದರು. ಪಿ.ವಿ.ನರಸಿಂಹರಾವ್ ಅವರಿಗೆ ಆ ಇಚ್ಛಾಶಕ್ತಿ ಇರಲಿಲ್ಲ. ಆದರೆ ದೇವೇಗೌಡರಿಗೆ ಇತ್ತು ಎಂದು ತಮ್ಮ ನಾಯಕರ ನಡೆಯನ್ನು ಹೊಗಳಿದರು.
ಆದರೆ ಈಗಿನ ಕೇಂದ್ರ ಸರ್ಕಾರಕ್ಕೆ ಮಹದಾಯಿ ವಿವಾದ ಬಗೆಹರಿಸಬೇಕೆಂಬ ಹಪಹಪಿ ಇಲ್ಲ, ರಾಜ್ಯ ಸರ್ಕಾರಕ್ಕೆ ಅಚಲ ಇಚ್ಛಾಶಕ್ತಿ ಇಲ್ಲ ಹಾಗಾಗಿಯೇ ಮಹದಾಯಿ ವಿವಾದ ದೊಡ್ಡದಾಗಿ ಕೂತಿದೆ ಎಂದರು.
ಆಗ ದೇವೇಗೌಡ ಅವರು ಮಾಡಿದ ಆದೇಶದ ಪ್ರತಿಯನ್ನು ಸ್ಪೀಕರ್ ಸೇರಿದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸದಸ್ಯರಿಗೆ ದತ್ತ ಅವರು ಹಂಚಿದರು. 'ಆದೇಶದ ಪ್ರತಿಯನ್ನು ಕೇಂದ್ರಕ್ಕೆ ಕಳಿಸಿಕೊಡಿ' ಎಂದು ಬಿಜೆಪಿ ಅವರಲ್ಲಿ ವಿನಂತಿಸಿಕೊಂಡ ದತ್ತ ಅವರು ಪ್ರಧಾನಿ ಮನಸು ಮಾಡಿದ್ರೆ ಮಹದಾಯಿ ವಿವಾದ ಬಗೆಹರಿಸುವುದು 5 ನಿಮಿಷದ ಕೆಲಸ, ತಡ ಮಾಡಿದರೆ ನಮಗೆ ಮಾಡುವ ದ್ರೋಹ ಅಂತಲೇ ಅರ್ಥ ಮಾಡಿಕೊಳ್ಳಬೇಕಾಗುತ್ತೆ ಕೂಡಲೇ ಕೇಂದ್ರದ ಮೇಲೆ ಒತ್ತಡ ಹಾಕಿ' ಬಿಜೆಪಿ ಶಾಸಕರಿಗೆ ಮನವಿ ಮಾಡಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications