ಸಚಿವ ಸ್ಥಾನ ತಪ್ಪಿಸಲು ರಾಷ್ಟ್ರ ಮಟ್ಟದಲ್ಲಿ ಲಾಬಿ ನಡೆದಿದೆ: ಸತೀಶ ಜಾರಕಿ ಹೋಳಿ

ಬೆಳಗಾವಿ, ಜೂನ್.08: ಮೂರು ದಿನದೊಳಗೆ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಎಐಸಿಸಿ ಕಾರ್ಯದರ್ಶಿಯಾಗಿಯೂ ಸಚಿವ ಸ್ಥಾನ ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದ್ದೇನೆ.

ಮತ್ತು ಬೇರೆಯವರಿಗೆ ಕೊಡಿಸುವಲ್ಲಿಯೂ ವಿಫಲವಾಗಿದ್ದೇನೆ ಎಂದು ಶಾಸಕ ಸತೀಶ ಜಾರಕಿ ಹೋಳಿ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾನು ಕೂಡ ಒಬ್ಬ ಸಿಎಂ ಅಭ್ಯರ್ಥಿಯಾಗಿ ಬೆಳೆಯುತ್ತಿದ್ದೇನೆ.
ನನ್ನನ್ನು ಬೆಳೆಸದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಣದ ಕೈಗಳು ಆಟವಾಡಿವೆ.

Within three days, I will resign from the post of AICC Secretary.

ಸಚಿವ ಸ್ಥಾನ ತಪ್ಪಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಲಾಬಿ ನಡೆದಿದೆ. ಎಂ.ಬಿ. ಪಾಟೀಲ ಅವರನ್ನು ನಿನ್ನೆ ಭೇಟಿ ಮಾಡಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನರಿಗೆ ಅನ್ಯಾಯವಾಗಿದೆ. ನಮ್ಮ‌ ಶಾಸಕರು ಯಾರೂ ಬಿಜೆಪಿಗೆ ಹೋಗಲ್ಲ.

ಜಿಲ್ಲೆಯ 58 ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಗೊಂದಲಕ್ಕೆ ಒಂದು ವಾರದಲ್ಲಿ ತೆರೆ ಎಳೆಯಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+