ಅತೃಪ್ತ ಶಾಸಕ ಜಾಧವ್ ಒಲಿಸಿಕೊಳ್ಳಲು ಕೆಪಿಸಿಸಿ ಕಸರತ್ತು
ಬೆಳಗಾವಿ, ಫೆಬ್ರವರಿ 02: ಕಾಂಗ್ರೆಸ್ನ ಅತೃಪ್ತ ಶಾಸಕ ಉಮೇಶ್ ಜಾಧವ್ ಅವರನ್ನು ಒಲಿಸಿಕೊಳ್ಳಲು ಕೆಪಿಸಿಸಿ ತೀವ್ರ ಪ್ರಯತ್ನ ಮಾಡುತ್ತಿದೆ.
ಬಹು ದಿನಗಳಿಂದ ಕಣ್ಮರೆ ಆಗಿದ್ದ ಜಾದವ್ ಇತ್ತೀಚೆಗೆ ಕ್ಷೇತ್ರಕ್ಕೆ ಮರಳಿದ್ದರು. ಆದರೆ ಮತ್ತೆ ಕ್ಷೇತ್ರದಿಂದ ಕಾಲ್ಕಿತ್ತು ಮುಂಬೈಗೆ ಹೋಗಿದ್ದರು. ಇಂದು ಮತ್ತೆ ಕ್ಷೇತ್ರಕ್ಕೆ ಬಂದಿದ್ದು ಕೆಲವು ಕಾಂಗ್ರೆಸ್ ಮುಖಂಡರು ಅವರನ್ನು ಇಂದು ಭೇಟಿ ಮಾಡಲಿದ್ದಾರೆ.
ಜಾಧವ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದ್ದು, ಇಂದು ಪ್ರಿಯಾಂಕ್ ಖರ್ಗೆ ಅವರು ಜಾಧವ್ ಅವರನ್ನು ಭೇಟಿ ಮಾತನಾಡಲಿದ್ದಾರೆ.

ಜಾಧವ್ ಅವರು ಕಾಂಗ್ರೆಸ್ ಪಕ್ಷ ಚಿಂತನೆಯಲ್ಲಿದ್ದಾರೆ ಎನ್ನಲಾಗಿದ್ದು, ಕೆಪಿಸಿಸಿ ನೊಟೀಸ್ ಗೂ ಸೂಕ್ತ ಉತ್ತರ ನೀಡಿಲ್ಲ. ಪಕ್ಷದಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿರುವ ಅವರು ಯಾವಾಗ ಬೇಕಾದರೂ ಬಿಜೆಪಿ ಸೇರಿಬಿಡಬಹುದು ಎಂಬ ಆತಂಕ ಕಾಂಗ್ರೆಸ್ಸಿಗರಿಗೆ ಇದೆ.
ಜೇವರ್ಗಿ ಕಾಂಗ್ರೆಸ್ ಶಾಸಕ ಅಜೆಯ್ ಸಿಂಗ್ ಸಹ ಇಂದು ಜಾಧವ್ ಅವರನ್ನು ಭೇಟಿ ಆಗುವ ಸಂಭವ ಇದ್ದು, ಜಾಧವ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನಿಸಲಿದ್ದಾರೆ.












Click it and Unblock the Notifications