ಮರಾಠಿಗರ ಮಹಾಮೇಳಾವದಲ್ಲಿ ಎಂಕ, ನೋಣ ಸೀನ
ಬೆಳಗಾವಿ, ಡಿ.9: ಅತ್ತ ಸುವರ್ಣ ವಿಧಾನಸೌಧದಲ್ಲಿ ಅಚ್ಚರಿಯೆಂಬಂತೆ ನೂರಕ್ಕೆ ನೂರು ಶಾಸಕರಿಂದ ತುಂಬಿದ್ದರೆ, ಇತ್ತ ಮರಾಠಿಗರ ಮಹಾಮೇಳಾವದಲ್ಲಿ ಎಂಕ ನೋಣ ಸೀನ ಎಂಬಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾಣಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು.
ಚಳಿಗಾಲ ಅಧಿವೇಶನ ಆರಂಭದ ದಿನದಲ್ಲೇ ಕೋಲಾ ಹಲದ ವಾತಾವರಣ ಪ್ರತಿಪಕ್ಷಗಳ ಧರಣಿ, ಬಿಜೆಪಿಯೇ ಬೆಚ್ಚಿಬೀಳುವಂತಿದ್ದ ರೇವಣ್ಣ-ಎಚ್ಡಿಕೆ ಸೋದರರ ಜುಗಲ್ ಬಂದಿ, ಭಜನೆ ಮಾಡುತ್ತಾ ಸದನಕ್ಕೆ ಬಂದ ಬಿಜೆಪಿ ಶಾಸಕ, ಮುಂದುವರೆದ ರೈತರ ಪ್ರತಿಭಟನೆ ಎಲ್ಲವೂ ಸದನ ಒಳಹೊರಗಿನ ಚಿತ್ರಣವಾಗಿತ್ತು.
ಸುವರ್ಣಸೌಧದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವಕ್ಕೆ ಮರಾಠಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗಾವಿ, ಖಾನಾಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನಿರೀಕ್ಷಿಸಿದ್ದ ಸಂಭಾಜಿ ಪಾಟೀಲ್ ಗೆ ತೀವ್ರಮುಖಭಂಗವಾಗಿದೆ. [ಶರಣ್ರೀ..ಮಹಾಮೇಳಾವ ಫ್ಲಾಶ್ ಬ್ಯಾಕ್ ಓದ್ರಲ್ಲಾ]

ಮರಾಠಿಗರನ್ನು ಆಕರ್ಷಿಸಲು ಮಹಾರಾಷ್ಟ್ರದಿಂದ ಯಾವೊಬ್ಬ ನಾಯಕರು ಬಂದಿರಲಿಲ್ಲ. ಬಾಳಾ ಠಾಕ್ರೆ, ಆರ್ ಆರ್ ಪಾಟೀಲ್ ಕಂಡಿದ್ದ ಜನತೆ ಈ ಬಾರಿ ಸಂಭಾಜಿ ಪಾಟೀಲ್ ಕರೆಗೆ ಓಗೊಡಲಿಲ್ಲ.
ಬೆಳಗ್ಗೆ ಅತ್ತ ಸದನ ಆರಂಭವಾಗುತ್ತಿದ್ದಂತೆ ಇತ್ತ 'ಉಠೆ ತಲ್ವಾರ್' ಎಂದು ಘರ್ಜಿಸಬೇಕಿದ್ದ ಮರಾಠಿಗರು ವೇದಿಕೆಯಲ್ಲಿ ಅತ್ತಿಂದಿತ್ತ ಶತಪಥ ಹಾಕಿದ್ದಷ್ಟೇ ಬಂತು. ಮಟಮಟ ಮಧ್ಯಾಹ್ನ ಮುಜುಗರದ ನಡುವೆಯೇ ಶಾಸಕ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಸಮ್ಮೇಳನ ಸ್ಥಳವಾದ ವ್ಯಾಕ್ಸೀನ್ ಡಿಪೋದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ನಾಲ್ಕು ಮಾತನಾಡಿ ಸಮಾರಂಭವನ್ನು ಮುಗಿಸುವ ಆತುರ ತೋರಿದರು.
ಕರವೇ ಪ್ರತಿಭಟನೆ:ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್ ಅವರ ನೇತೃತ್ವದ ಮಹಾಮೇಳವಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಪ್ರತಿಭಟನೆಯೇ ಜೋರಾಗಿತ್ತು.

ಕರವೇ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಚೆನ್ನಮ್ಮ ಸರ್ಕಲ್ ನ ಬಳಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು. [ಮೊದಲ ದಿನದ ಕಲಾಪದ ಮುಖ್ಯಾಂಶಗಳು]
2006 ರಿಂದ ಮಹಾಮೇಳಾವ ನಡೆಸುತ್ತಾ ಬಂದಿರುವ ಎಂಇಎಸ್ ಗೆ ಬಿಎಸ್ ಯಡಿಯೂರಪ್ಪ ಅವರು 2009ರಲ್ಲಿ ತಡೆಯೊಡ್ಡಿದ್ದರು. ಅದರೆ, ಈ ಬಾರಿ ಶಾಂತಿಯುತ ಸಮ್ಮೇಳನ ನಡೆಸುವುದಾಗಿ ಹೇಳಿ ಎಂಇಎಸ್ ಅನುಮತಿ ಪಡೆದುಕೊಂಡಿತ್ತು. ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ವಸಂತರಾವ್ ಪಾಟೀಲ್, ಮಾಜಿ ಶಾಸಕ ಮನೋಹರ್ ಕಿನೇಕರ್ ಮುಂತಾದವರು ಮೇಳಾವ್ ಯಶಸ್ಸಿಗಾಗಿ ಶ್ರಮಿಸಿದ್ದು ವ್ಯರ್ಥವಾಗಿದೆ.
ಆದರೂ ಛಲಬಿಡದ ಎಂಇಎಸ್ ತನ್ನ ಮುಂದಿನ ಯೋಜನೆಯಂತೆ ಸುವರ್ಣ ವಿಧಾನ ಸೌಧದ ಮುಂದೆ ಧರಣಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದೆ.
-
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications