'ಕರ್ನಾಟಕದಲ್ಲಿರುವುದು ಸಿದ್ದರಾಮಯ್ಯ ಕಾಂಗ್ರೆಸ್'
ಬೆಳಗಾವಿ, ಅ. 19 : 'ಕರ್ನಾಟಕದಲ್ಲಿ ಇರುವುದು ಸಿದ್ದರಾಮಯ್ಯ ಕಾಂಗ್ರೆಸ್. ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ಗೆ ಅಸ್ತಿತ್ವೇ ಇಲ್ಲದಂತಾಗುತ್ತದೆ. ರಾಜ್ಯದ ಪಾಲಿಗೆ ಹೈಕಮಾಂಡ್ ಎನ್ನುವುದೇ ಇಲ್ಲದಂತಾಗಿದೆ' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಉತ್ತರ
ಕರ್ನಾಟಕ
ಪ್ರವಾಸದಲ್ಲಿರುವ
ಎಚ್.ಡಿ.ದೇವೇಗೌಡ
ಅವರು
ಶನಿವಾರ
ಬೆಳಗಾವಿಯಲ್ಲಿ
ಮಾಧ್ಯಮಗಳ
ಜೊತೆ
ಮಾತನಾಡಿದರು.
ಬಿಜೆಪಿ
ಅಧ್ಯಕ್ಷ
ಅಮಿತ್
ಶಾ
ರಾಜ್ಯಕ್ಕೆ
ಬಂದು
ಹೋದ
ಮೇಲೆ
ಬಿಜೆಪಿಯವರು
ಭ್ರಷ್ಟಾಚಾರದ
ಬಗ್ಗೆ
ಮಾತನಾಡುತ್ತಿದ್ದಾರೆ'
ಎಂದು
ಲೇವಡಿ
ಮಾಡಿದರು.
'ಭ್ರಷ್ಟಾಚಾರದ ಬಗ್ಗೆ ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತುಟಿ ಬಿಚ್ಚಿರಲಿಲ್ಲ. ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದರು. ಅಮಿತ್ ಶಾ ಬಂದು ಹೋದ ಮೇಲೆ ಪ್ರತಿಭಟನೆ ಆರಂಭಿಸಿದ್ದಾರೆ' ಎಂದು ಕುಟುಕಿದರು.
ದೇವೇಗೌಡರಿಂದ ಉತ್ತರ ಕರ್ನಾಟಕ ಪ್ರವಾಸ
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿಯ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದೇವೇಗೌಡರು, 'ಬಿಜೆಪಿ, ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಬ್ಬರು ಸೇರಿ ಜೆಡಿಎಸ್ ಮುಗಿಸಲು ಹೊರಟಿದ್ದಾರೆ' ಎಂದು ದೂರಿದರು.
ಮಹದಾಯಿ ವಿವಾದ ಬಗೆಹರಿಸಲು ಗೋವಾಕ್ಕೆ ಭೇಟಿ : ಬಿಎಸ್ವೈ
'ಯಡಿಯೂರಪ್ಪ ಅವರು ಮಾಡಿದ ಭ್ರಷ್ಟಾಚಾರದ ಬಗ್ಗೆ ತಿಳಿದಿದ್ದರೂ ಸಿದ್ದರಾಮಯ್ಯ ಮೌನವಾಗಿದ್ದರು. ಯಡಿಯೂರಪ್ಪ ಕೂಡಾ ಕಾಂಗ್ರೆಸ್ ಸರ್ಕಾರದ ಬಗ್ಗೆ ಧ್ವನಿ ಎತ್ತಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮಾತ್ರ ಎರಡೂ ಪಕ್ಷಗಳ ವಿರುದ್ಧ ಹೋರಾಟ ಮಾಡಿದರು' ಎಂದರು.