ಬೆಳಗಾವಿ: ಬಿಲ್ ಕೇಳಿದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಪೊಲೀಸರ ದರ್ಷ
ಬೆಳಗಾವಿ, ಅಕ್ಟೋಬರ್ 30: ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ದರ್ಪ ತೋರಿದ ಘಟನೆ ನಡೆದಿದೆ.
ಖಾನಾಪುರ ಪಟ್ಟಣದ ಶಾಂತಿಸಾಗರ ಹೋಟೆಲ್ ಸಿಬ್ಬಂದಿ ಶರತ್ ಶೆಟ್ಟಿ, ತಿಂದಿರುವ ಬಿಲ್ ನೀಡುವಂತೆ ಪೊಲೀಸರಿಗೆ ಕೇಳಿದ್ದಾನೆ, ಇದರಿಂದ ಕೋಪಗೊಂಡ ಪೊಲೀಸರು ಹೋಟೆಲ್ ಶರತ್ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಪೊಲೀಸರು ಶರತ್ ಶೆಟ್ಟಿಯನ್ನು ಮನ ಬಂದಂತೆ ಥಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಖಾನಾಪುರ ಪೊಲೀಸರು ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ತಂದಿರುವ ಬಿಲ್ ಕೇಳಿದಕ್ಕೆ ಪೊಲೀಸರು ಈ ರೀತಿ ಮಾಡುವುದು ಎಷ್ಟು ಸರಿ ಎಂಬುವುದು ಸಾರ್ವಜನಿಕ ಪ್ರಶ್ನೆ.












Click it and Unblock the Notifications