ಆಪ್ತ ಸ್ನೇಹಿತೆ ಅಪಹರಣ: ಬೆಳಗಾವಿಯಲ್ಲಿ ಸಿನಿಮೀಯ ಘಟನೆ
ಪ್ರೇಮಿಗಳಿಬ್ಬರು ಸೇರಿ, ಹಣಕ್ಕಾಗಿ ಆಪ್ತ ಸ್ನೇಹಿತೆಯನ್ನೇ ಕಿಡ್ನ್ಯಾಪ್ ಮಾಡಿದ ಸಿನಿಮೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ, ಏಪ್ರಿಲ್ 20: ಕಿಡ್ನ್ಯಾಪ್ ಯೋಜನೆ ಫಲಿಸಿದರೆ ತಿರುಪತಿ ವೆಂಕಟರಮಣನಿಗೆ 70 ಲಕ್ಷ ರೂ. ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದ ಇಬ್ಬರು ಪ್ರೇಮಿಗಳನ್ನು ಬೆಳಗಾವಿಯ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ.
ಪ್ರೇಮಿಗಳಿಬ್ಬರು ಸೇರಿ, ಹಣಕ್ಕಾಗಿ ಆಪ್ತ ಸ್ನೇಹಿತೆಯನ್ನೇ ಕಿಡ್ನ್ಯಾಪ್ ಮಾಡಿದ ಸಿನಿಮೀಯ ಘಟನೆ ಇದು. ಬೆಳಗಾವಿಯ ಗೋಗ್ಟೆ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (GIT) ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಅರ್ಪಿತಾ ನಾಯ್ಕ್ ಅವರ ಮನೆಯವರು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಅಪಹರಣಗೊಂದಿದ್ದಾಳೆಂದು ದೂರು ನೀಡಿದ್ದರು.[ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ವಾಮಾಚಾರ!?]

ಈ ದೂರಿನನ್ವಯ ತನಿಖೆ ನಡೆಸಿ, ಅಪರಾಧ ಭೇದಿಸುವಲ್ಲಿ ಸಫಲರಾದ ಪೊಲೀಸರಿಗೆ ಅಚ್ಚರಿ ಕಾದಿತ್ತು! ಅರ್ಪಿತಾ ನಾಯ್ಕ್ ಅವರ ಸ್ನೇಹಿತೆ ದಿವ್ಯಾ, ತನ್ನ ಪ್ರೇಮಿ ಕೇದಾರ್ ಜೊತೆ ಸೇರಿ ಆಪ್ತ ಸ್ನೇಹಿತೆಯನ್ನೇ ಕಿಡ್ನ್ಯಾಪ್ ಮಾಡಿ, 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.[ಪ್ರವಾಸಕ್ಕೆ ತೆರಳಿದ್ದ ಬೆಳಗಾವಿಯ 8 ವಿದ್ಯಾರ್ಥಿಗಳು ನೀರುಪಾಲು]
ಘಟನೆಯ ವಿವರ
ಏಪ್ರಿಲ್ 17 ರಂದು ಇಲ್ಲಿನ ನಿಯಾಜ್ ಎಂಬ ಹೊಟೇಲ್ ಗೆ ರಾತ್ರಿ ಊಟಕ್ಕೆಂದು ದಿವ್ಯಾ ಮತ್ತು ಕೇದಾರ್ ಅರ್ಪಿತಾ ಅವರನ್ನು ಆಮಂತ್ರಿಸಿದ್ದರು. ಊಟದ ನಂತರ ಆಕೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಪಾನೀಯ ನೀಡಿ, ಆಕೆ ಪಾನೀಯ ಕುಡಿದ ನಂತರ ಮತ್ತೆ ಆಕೆಗೆ ಕ್ಲೋರೋಫಾರ್ಮ್ ಲೇಪಿಸಿ ಆಕೆ ಸಂಪೂರ್ಣ ನಿದ್ದೆಗೆ ಜಾರುವಂತೆ ಮಾಡಿದ್ದರು.[ನಿವೃತ್ತ ಡಿವೈಎಸ್ ಪಿ ಮೇಲೆ ಹಲ್ಲೆ, ಬೆಳಗಾವಿ ಮಾಜಿ ಮೇಯರ್ ಬಂಧನ]
ಆಕೆ ನಿದ್ರಿಸಿದ ನಂತರ ಕೇದಾರನ ಊರಾದ ಗದಗಕ್ಕೆ ಇಂಡಿಕಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇವರೊಂದಿಗೆ ಕಾರ್ ಚಾಲಕ ಕೂಡ ಶಾಮೀಲಾಗಿದ್ದ ಎನ್ನಲಾಗಿದೆ. ಈ ನಡುವೆ ಅರ್ಪಿತಾ ಮನೆಗೆ ಫೋನ್ ಮಾಡಿ 5 ಕೋಟಿ ರೂ. ಬೇಡಿಕೆಯನ್ನೂ ಇಟ್ಟಿದ್ದರು. ಇದರಿಂದ ಆತಂಕಗೊಂಡ ಅರ್ಪಿತಾ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ತಮಾಷೆಯ ಸಂಗತಿ ಎಂದರೆ, ಕಿಡ್ನ್ಯಾಪ್ ಯೋಜನೆ ಹಾಕಿದ ನಂತರ ಮೂರು ಬಾರಿ ತಿರುಪತಿಗೆ ಹೋಗಿದ್ದ ಈ ಪ್ರೇಮಿಗಳು, ತಮ್ಮ ಯೋಜನೆ ಫಲಿಸಿ, ತಮ್ಮ ಕೈಗೆ ಹಣ ಬಂದರೆ ತಿರುಪತಿ ವೆಂಕಟರಮಣನಿಗೆ 70 ಲಕ್ಷ ರೂ. ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದರಂತೆ! ಇಂಥ ಕುತಂತ್ರ ಮಾಡುವುದಕ್ಕೆ ದೇವರಿಗೆ ಹರಕೆ ಬೇರೆ!
ಇದೀಗ ತಿಲಕವಾಡಿ ಪೊಲೀಸರ ಅತಿಥಿಯಾಗಿರುವ ಈ ಪ್ರೇಮಿಗಳ ವಿರುದ್ಧ ತನಿಖೆ ನಡೆಯುತ್ತಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications