ವಿರೋಧದ ನಡುವೆಯೇ ಎಸ್ಮಾ ಕಾಯ್ದೆಗೆ ಒಪ್ಪಿಗೆ
ಬೆಳಗಾವಿ, ಡಿ. 4 : ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೋ ಚಳಿಗಾಲದ ಅಧಿವೇಶನದ ಎಂಟನೇ ದಿನವಾದ ಬುಧವಾರ ಅತ್ಯವಶ್ಯಕ ಸೇವೆ ನಿರ್ವಹಣಾ ವಿಧೇಯಕ (ಎಸ್ಮಾ ಕಾಯ್ದೆ)2013 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧೇಯಕ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಲು ಯಶಸ್ವಿಯಾಗಿದ್ದಾರೆ.
ವಿಧೇಯಕ
ಮಂಡಿಸಿದ
ಸಚಿವ
ರಾಮಲಿಂಗಾ
ರೆಡ್ಡಿ,
ಕಾನೂನು
ಬಾಹೀರ
ಪ್ರತಿಭಟನೆಯನ್ನು
ಹತ್ತಿಕ್ಕಲು,
ವಾರೆಂಟ್
ಇಲ್ಲದೆ
ಬಂಧಿಸಲು
ಪೊಲೀಸರಿಗೆ
ಈ
ಕಾಯ್ದೆ
ಅವಕಾಶ
ನೀಡಲಿದೆ
ಎಂದರು.
ಕಾನೂನು
ಉಲ್ಲಂಘಿಸಿ,
ಪ್ರತಿಭಟನೆ
ನಡೆಸುವುದು
ಮತ್ತು
ಅವರಿಗೆ
ಹಣಕಾಸು
ಸಹಾಯ
ನೀಡುವ
ಜನರಿಗೂ
ಈ
ಕಾಯ್ದೆಯ
ಅನ್ವಯ
1
ವರ್ಷ
ಜೈಲು
ಹಾಗೂ
5
ಸಾವಿರ
ರೂ
ದಂಡ
ವಿಧಿಸಲಾಗುತ್ತದೆ
ಎಂದು
ಮಾಹಿತಿ
ನೀಡಿದರು.
ಎಸ್ಮಾ ಕಾಯ್ದೆ ಅನ್ವಯ ಸಾರಿಗೆ, ವಿದ್ಯುತ್, ಆರೋಗ್ಯ ಸೇರಿದಂತೆ ಅತ್ಯವಶ್ಯಕ ಸೇವೆ ಒದಗಿಸುವ ಸರ್ಕಾರಿ ಇಲಾಖೆಗಳ ನೌಕರರು ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಪ್ರತಿಭಟನೆ ನಡೆಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. (ಬುಧವಾರ ಸದನದಲ್ಲಿ ಏನಾಯ್ತು?)
ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು, ಎಸ್ಮಾ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ, ಕಾರ್ಮಿಕ ಸಂಘಟನೆಗಳು ನಡೆಸುವ ಹೋರಾಟಕ್ಕೆ ಕಡಿವಾಣ ಹಾಕಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದವು. ಈ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಪೊಲೀಸರು ಈ ಕಾಯ್ದೆಯನ್ನು ರಾಜಕೀಯವಾಗಿ ದುರ್ಬಳಕೆಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಟಿ.ಬಿ.ಜಯಚಂದ್ರ ಪ್ರತಿಕ್ರಿಯೆ : ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ, ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದು ಈ ಕಾಯ್ದೆ ರೂಪಿಸಲಾಗಿದೆ. ಕಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸುವ ಹುನ್ನಾರ ಇದರಲ್ಲಿ ಅಡಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಯಾವುದೇ ಸಂಘಟನೆ ಜನಸಾಮಾನ್ಯರಿಗೆ ತೊಂದರೆಯಾಗುವ ರೀತಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್ಮಾ ಕಾಯ್ದೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಜಯಚಂದ್ರ ಸದನಕ್ಕೆ ತಿಳಿಸಿದರು. ಸಚಿವರ ಹೇಳಿಕೆಯಿಂದ ತೃಪ್ತರಾಗದ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ವಿಶೇಷವೆಂದರೆ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.