ಘಟಪ್ರಭಾ ನದಿ ನೀರು ಇಳಿಕೆ: ನಿಟ್ಟುಸಿರು ಬಿಟ್ಟ ಗೋಕಾಕ್ ಜನತೆ

ಬೆಳಗಾವಿ, ಆಗಸ್ಟ್ 20: ಘಟಪ್ರಭಾ ನದಿಯ ಪ್ರವಾಹದ ಕರಾಳ ಛಾಯೆಯಿಂದ ಕಂಗೆಟ್ಟಿದ ಗೋಕಾಕ್ ತಾಲೂಕಿನ ಜನತೆ ಬುಧವಾರದಂದು ನಿಟ್ಟುಸಿರು ಬಿಟ್ಟಿದ್ದಾರೆ. ಗಡಿಭಾಗದ ಜಲಾಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಪ್ರವಾಹದಲ್ಲಿ ಇಳಿಮುಖವಾಗಿ ಸಂತ್ರಸ್ಥರಲ್ಲಿ ತುಸು ನೆಮ್ಮದಿ ಮೂಡಿದೆ.

ವರುಣ ಇಂದು ಮುಂಜಾನೆಯಿಂದ ಬಿಡುವನ್ನು ನೀಡಿದ್ದರೂ ಕೂಡಾ ಬುಧವಾರ ಮುಂಜಾನೆ ಹಿರಣ್ಯಕೇಶಿ, ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ ಘಟಪ್ರಭಾ ನದಿಗೆ ಸುಮಾರು 67 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದಿರಂದ ನೀರಿನ ಮಟ್ಟ ಕಡಿಮೆಯಾಗಿದೆ.

Belagavi: Ghataprabha River Flooding Decrease In Gokak Taluk

ಅಲ್ಲದೇ ಸಂಜೆ ವೇಳೆಗೆ ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ 68 ಸಾವಿರ ಕ್ಯೂಸೆಕ್ಸ ನದಿಗೆ ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿರುವುದರಿಂದ ಆತಂಕವನ್ನು ದೂರು ಮಾಡಿದೆ. ನಿನ್ನೆ ರಾತ್ರಿ ಚಿಕ್ಕೋಳಿ ಸೇತುವೆ ಮೇಲೆ ಇದ್ದು ನೀರು ಇಂದು ಇಳಿಕೆಯಾಗಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

Belagavi: Ghataprabha River Flooding Decrease In Gokak Taluk

ಗೋಕಾಕ್ ನಗರದ ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಹಾಳಬಾಗ ಗಲ್ಲಿ, ಹಳೆಯ ದನದ ಪೇಠೆ, ಮಟನ್ ಮಾರ್ಕೆಟ್, ದಾಳಂಬರಿ ತೋಟ ಸೇರಿದಂತೆ ಅನೇಕ ಗಲ್ಲಿಗಳಲ್ಲಿ ನೀರು ನುಗ್ಗಿತ್ತು, ನಿನ್ನೆಯ ದಿನಕ್ಕೆ ನೀರಿನ ಮಟ್ಟವನ್ನು ಅವಲೋಕಿಸಿದಾಗ ಇಂದು ಎಲ್ಲ ಗಲ್ಲಿಗಳಲ್ಲಿ ಸುಮಾರು 100 ಅಡಿಗಳಷ್ಟು ದೂರ ನೀರು ಸರಿದಿದೆ. ಅದೇ ರೀತಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡಾ ನೀರು ಕಡಿಮೆಯಾಗಿದೆ ಇದರಿಂದ ಸಂತ್ರಸ್ಥರಲ್ಲಿ ಸಂತೋಷವನ್ನುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+