ಕೆಎಂಎಫ್ ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ
ಬೆಂಗಳೂರು, ಮೇ27: ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮನೆ ಮಾತಾಗಿರುವ, ಮನೆ ಮನೆಗೂ ಹಾಲು ಹರಿಸುತ್ತಿರುವ ಕೆಎಂಎಫ್ ಸಂಸ್ಥೆಯು ಇದೀಗ ಮತ್ತೊಂದು ಜನಸ್ನೇಹಿ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದೆ.
ಕಳೆದ ವರ್ಷ 9,000 ಕೋಟಿ ರೂ ಆರ್ಥಿಕ ವಹಿವಾಟು ನಡೆಸಿರುವ KMF, ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ 'ನಂದಿನಿ' ಬ್ರ್ಯಾಂಡಿನಡಿ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ.
'ನಂದಿನಿ' ಬ್ರ್ಯಾಂಡ್ ಹೆಸರಿನಲ್ಲಿ ಹಾಲು, ಹಾಲುತ್ಪನ್ನ, ಸಿಹಿ ಪದಾರ್ಥಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ಬಿಟ್ಟಿರುವ ಕರ್ನಾಟಕ ಹಾಲು ಮಹಾಮಂಡಲವು ಸದ್ಯದಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ/ಸಹಕಾರಿ ಕುಡಿಯುವ ನೀರನ್ನು ಅಂದರೆ ಮಿನರಲ್ ವಾಟರ್ ಅನ್ನು ಇದೇ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ತರಲಿದೆ. ಸದ್ಯಕ್ಕೆ ನಂದಿನಿ ಬೂತ್ ಗಳಲ್ಲಿ ಮಾತ್ರ ಇವು ಲಭ್ಯವಾಗಲಿದೆ.

mineral drinking water ಮಾರಾಟದಲ್ಲಿ ಇದುವರೆಗೂ ಖಾಸಗಿ ಕಂಪನಿಗಳದ್ದೇ ಪಾರುಪತ್ಯ. ಇದು ಹೆಚ್ಚು ವಿವಾದಕ್ಕೂ/ ಕುಖ್ಯಾತಿಗೂ ಸಹ ಪಾತ್ರವಾಗಿದೆ. ಖಾಸಗಿ ಕಂಪನಿಗಳದ್ದು ನೂರೆಂಟು ನೀರು ಬ್ರ್ಯಾಂಡ್ ಗಳು ಇರುವಾಗ ಸರಕಾರದ ಕಡೆಯಿಂದ ಭಾರತೀಯ ರೈಲ್ವೆಯ ರೈಲ್ ನೀರ್ ಮತ್ತು ತಮಿಳುನಾಡಿನ 'ಅಮ್ಮಾ ಕುಡಿನೀರ್' ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ.
KMF ವ್ಯವಸ್ಥಾಪಕ ನಿರ್ದೇಶಕರಾದ ಎಎಸ್ ಪ್ರೇಮನಾಥ್ ಅವರು 'ಬೆಂಗಳೂರು ಮಿರರ್' ಆಂಗ್ಲ ಪತ್ರಿಕೆಗೆ ತಿಳಿಸಿರುವಂತೆ ಮಂಡಳಿಯು ಈ ಹಿಂದೆ ಬಳ್ಳಾರಿಯಲ್ಲಿ ನಂದಿನಿ ಮಿನರಲ್ ವಾಟರ್ ಉತ್ಪಾದಿಸಲು ಯತ್ನಿಸಿತು. ಆದರೆ ಅಲ್ಲಿ ನದಿ ನೀರನ್ನು ಸಂಸ್ಕರಿಸಲು ಸಾಧ್ಯವಾಗಿಲ್ಲ. ಇನ್ನು ಬೋರ್ ನೀರ್ ಬಳಸಿ, mineral water ತಯಾರಿಸುವುದು ಸಮಂಜಸವಲ್ಲವೆಂದು ಭಾವಿಸಿ, ಯೋಜನೆ ಕೈಬಿಡಲಾಗಿದೆ.
ಆದರೆ ಇದೀಗ ಬೇಡಿಕೆಗೆ ತಕ್ಕಂತೆ ಸಾಮರ್ಥ್ಯವುಳ್ಳ ಖಾಸಗಿ ಕಂಪನಿಯ ಜತೆ ಕೈಜೋಡಿಸಿ, KMF ಮಂಡಳಿಯು ತನ್ನದೇ ಬ್ರ್ಯಾಂಡಿನ mineral water ಅನ್ನು ಮಾರುಕಟ್ಟೆಗೆ ಬಿಡಲಿದೆ.
ಪಪ್ರಸ್ತುತ, ನಗರದಲ್ಲಿ ಒಂದು ಲೀಟರ್ ಮಿನರಲ್ ವಾಟರ್ ಬಾಟಲಿಗೆ 20 ರೂ ತೆರಬೇಕಿದೆ. ಅದೇ ರೀತಿ 2 ಲೀಟರ್ ಬಾಟಲಿಗೆ 38 ರೂ ಇದೆ. ಅಮ್ಮ ಕುಡಿನೀರ್ ಬೆಲೆ ಲೀಟರಿಗೆ 10 ರೂ ನಷ್ಟಿದೆ. 'ನಂದಿನಿ' ಮಿನರಲ್ ವಾಟರ್ ಬೆಲೆ ಇವುಗಳ ನಡುವೆ ಮಧ್ಯದ ಹಂತದಲ್ಲಿರುತ್ತದೆ ಎಂದು ಪ್ರೇಮನಾಥ್ ತಿಳಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications