'ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ' : ಕೆಜೆ ಜಾರ್ಜ್
ಬೆಂಗಳೂರು, ಜುಲೈ 18: ಮಂಗಳೂರಿನ ಡಿವೈಎಸ್ಪಿ ಎಂಕೆ ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಎಫ್ ಐಆರ್ ಹಾಕುವ ಭೀತಿಗೆ ಒಳಗಾಗಿರುವ ಸಚಿವ ಕೆಜೆ ಜಾರ್ಜ್ ಅವರು ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲ ಅವರು ಅಂಗೀಕರಿಸಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾರ್ಜ್ ಅವರು, 'ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ' ಎಂದಿದ್ದಾರೆ.
ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಮತ್ತು ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಮಡಿಕೇರಿ ಟೌನ್ ಪೊಲೀಸರಿಗೆ ಜೆಎಂಎಫ್ಸಿ ಕೋರ್ಟ್ ಆದೇಶ ನೀಡಿತ್ತು.[ಗಣಪತಿ ಆತ್ಮಹತ್ಯೆ ಕೇಸ್: ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ]
ಮಡಿಕೇರಿ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಸೋಮವಾರ ಮಧ್ಯಾಹ್ನ ಈ ಕುರಿತು ಆದೇಶ ನೀಡಿದ್ದಾರೆ. [ಕೆ.ಜೆ.ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು]
ಎಂ.ಕೆ.ಗಣಪತಿ
ಅವರ
ಪುತ್ರ
ನೇಹಾಲ್
ಅವರು
ಜುಲೈ
11ರಂದು
ಸಲ್ಲಿಸಿದ್ದ
ಖಾಸಗಿ
ದೂರನ್ನು
ಪರಿಗಣಿಸಿ
ಈ
ಆದೇಶ
ಹೊರಡಿಸಲಾಗಿದೆ.
ಶಾಸಕ
ಕೆಜೆ
ಜಾರ್ಜ್
ಸುದ್ದಿಗೋಷ್ಠಿ
ಮುಖ್ಯಾಂಶಗಳು
ಮುಂದಿದೆ.
[ಡಿವೈಎಸ್ಪಿ
ಗಣಪತಿ
ಸಾವಿನ
ಪ್ರಕರಣದ
Timeline]
ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ
*
ನಾನು
ಸ್ವ
ಇಚ್ಛೆಯಿಂದ
ರಾಜೀನಾಮೆ
ಪತ್ರವನ್ನು
ಸಿಎಂ
ಸಿದ್ದರಾಮಯ್ಯ
ಅವರಿಗೆ
ನೀಡಿದ್ದೇನೆ,
*
ನಿಷ್ಪಕ್ಷಪಾತವಾದ
ತನಿಖೆಯಾಗಬೇಕು
ಎಂಬ
ಉದ್ದೇಶದಿಂದ
ನಮ್ಮ
ಸರ್ಕಾರ,
ನ್ಯಾಯಾಂಗ
ತನಿಖೆಗೆ
ಪ್ರಕರಣವನ್ನು
ವಹಿಸಿದೆ.
*
ನನ್ನ
ಮೇಲಿನ
ಆರೋಪಗಳೆಲ್ಲವೂ
ಸುಳ್ಳು,
ಮುಂದಿನ
ಕಾನೂನು
ಹೋರಾಟದ
ಬಗ್ಗೆ
ತಜ್ಞರೊಡನೆ
ಸಮಾಲೋಚನೆ
ನಡೆಸಿ
ನಿರ್ಧಾರ
ಕೈಗೊಳ್ಳುತ್ತೇನೆ.
*
ನಾನು
ಎಲ್ಲಾ
ರೀತಿಯ
ತನಿಖೆಗೆ
ಸಹಕರಿಸುತ್ತೇನೆ.
ಅಧಿಕಾರ
ಶಾಶ್ವತವಲ್ಲ,
ನಾನು
ಅಧಿಕಾರಕ್ಕೆ
ಅಂಟಿಕೊಂಡಿಲ್ಲ
ಎಂದು
ಹೇಳಿದರು.
ಖಾಸಗಿ ಕಾರಿನಲ್ಲಿ ಮನೆಗೆ ತೆರಳಿದರು
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಮುಗಿದ ಬಳಿಕ ಖಾಸಗಿ ಕಾರಿನಲ್ಲಿ ಮನೆಗೆ ತೆರಳಿದರು. ಇದೇ ವೇಳೆಗೆ ಕೆಜೆ ಜಾರ್ಜ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲ ಅವರು ಅಂಗೀಕರಿಸಿದ ಸುದ್ದಿ ಎಲ್ಲಾ ಸುದ್ದಿವಾಹಿನಿಗಳಲ್ಲಿ ಫ್ಲಾಶ್ ನ್ಯೂಸ್ ಆಗಿ ಪ್ರಸಾರವಾಗುತ್ತಿತ್ತು. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿರುವುದಾಗಿ ಹೇಳಿದ ಜಾರ್ಜ್ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರುಗಳಿಂದ 'ಆರೋಪ ಮುಕ್ತರಾಗಿ ಬರುವಂತೆ ' ಶುಭ ಹಾರೈಕೆ.
ಹಲವೆಡೆ ಸಂಭ್ರಮಾಚರಣೆ
ಜಾರ್ಜ್ ಅವರು ರಾಜೀನಾಮೆ ನೀಡಿದ ಸುದ್ದಿ ತಿಳಿಯುತ್ತಿದ್ದಂತೆ ಮಡಿಕೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
|
ಆರೋಪಗಳನ್ನು ತಳ್ಳಿ ಹಾಕಿದ ಜಾರ್ಜ್
ಆರೋಪಗಳನ್ನು ತಳ್ಳಿ ಹಾಕಿದ ಜಾರ್ಜ್, ಯಾವುದೇ ತನಿಖೆಗೆ ಸಿದ್ದ ಎಂದು ಘೋಷಿಸಿದ್ದಾರೆ.