ಬುಡಮೇಲಾದ ಸ್ಟೀಲ್ ಫ್ಲೈಓವರ್ ವಿರೋಧಿಗಳ ಹೋರಾಟ!
ಬೆಂಗಳೂರು, ಅಕ್ಟೋಬರ್ 21 : ಸಾವಿರದೆಂಟುನೂರು ಕೋಟಿ ರುಪಾಯಿ ಸುರಿದು ಸ್ಟೀಲ್ ಮೇಲ್ಸೇತುವೆ ನಿರ್ಮಿಸುತ್ತೇನೆಂದು ಪಟ್ಟುಹಿಡಿದಿರುವ ಸರಕಾರದ ಹಠದ ಮುಂದೆ, 'ಸ್ಟೀಲ್ ಫ್ಲೈಓವರ್ ಬೇಡ' ಅಂತ ಎಂಟು ಸಾವಿರ ಪರಿಸರ ಪ್ರೇಮಿಗಳು ನಡೆಸಿದ ಹೋರಾಟ, ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಬುಡಮೇಲಾದ ಮರದಂತೆ ಮಕಾಡೆ ಮಲಗಿದೆ!
ನವದೆಹಲಿಯ ಸಂಸತ್ತನ್ನೂ ತಲುಪುವಂತೆ ಬೆಂಗಳೂರಿನ ಜನತೆಯ ಒಕ್ಕೊರಲಿನಿಂದ ಕೂಗಿದ್ದು ಹಿತ್ತಾಳೆಯ ಕಿವಿಯ ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬಿದ್ದಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ ನಿರ್ಮಿಸುತ್ತಿರುವ 6.7 ಕಿ.ಮೀ. ಉದ್ದದ ಉಕ್ಕಿನ ಮೇಲ್ಸೇತುವೆಗೆ ಅದರ ಬೋರ್ಡ್ ಮೀಟಿಂಗ್ ನಲ್ಲಿ ಅನುಮತಿ ದಕ್ಕಿದೆ. [ಸ್ಟೀಲ್ ಫ್ಲೈಓವರ್ ಬೇಡ ಅನ್ನುವವರಿಗೆ ಹಿನ್ನಡೆ, ಮುಂದೇನು?]

ಬಿಡಿಎದ ಠಸ್ಸೆ ಸಿಕ್ಕಿದ್ದರಿಂದ, ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ನಿರ್ಮಾಣವಾಗಲಿರುವ ದಾರಿಗುಂಟ ಇರುವ 812 ಮರಗಳು ಕೊನೆಯುಸಿರೆಳೆಯಲಿವೆ, ಹಾಗೆಯೆ ಬೆಂಗಳೂರಿನ ಜನತೆ ಉಸಿರುಗಟ್ಟಿಸುವಂತೆಯೂ ಮಾಡಲಿವೆ. ಕೆಲ ಪಾರಂಪರಿಕ ಕಟ್ಟಡಗಳು ಧರಾಶಾಯಿಯಾಗಲಿವೆ, ಅಂದದ ಗೋಲ್ಫ್ ಕ್ಲಬ್ ಅಂಗಾಂಗ ಕಳೆದುಕೊಳ್ಳಲಿದೆ.
ಇನ್ನಷ್ಟು ಜನರನ್ನು ಸೇರಿಸಿಕೊಂಡು ಬೃಹತ್ ಮೆರವಣಿಗೆ ಆಯೋಜಿಸಬೇಕು, ಜನಾಭಿಪ್ರಾಯ ಸಂಗ್ರಹಿಸಬೇಕು, ಬೆಂಗಳೂರಿನ ಅಂದ ಕಾಪಾಡುವ ಬಗ್ಗೆ ಚರ್ಚೆ ನಡೆಸಬೇಕು, ಕೊಡಲಿಯೇಟು ಬೀಳದಂತೆ ಹಗಲುರಾತ್ರಿ ಮರಗಳನ್ನು ಕಾಪಾಡಬೇಕು, ಸೆಲ್ಫಿ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂಬಿತ್ಯಾದಿ ಕಾರ್ಯಕ್ರಮ ಹಾಕಿಕೊಂಡಿದ್ದ ಹೋರಾಟಗಾರ ಹುಮ್ಮಸ್ಸನ್ನು ಸರಕಾರ ಪಂಚರ್ ಮಾಡಿದೆ. [ಸಂಶಯ ಬಿಡಿ, ಉಕ್ಕು ಸೇತುವೆ ಯೋಜನೆ ಪಾರದರ್ಶಕ]
ಈ ಮಹತ್ವಾಕಾಂಕ್ಷೆಯ, ಜನರ ಪ್ರಯಾಣದ ಏಳು ನಿಮಿಷ ಉಳಿಸುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣದ ಹೊಣೆ ಹೊತ್ತಿರುವ ಕಾಂಟ್ರಾಕ್ಟರಿಗೆ ಅನುಮತಿ ಪತ್ರ ಇನ್ನೇನು ದೊರೆಯಲಿದೆ. ನವೆಂಬರ್ 1ರಂದು ಕನ್ನಡ ಬಾವುಟ ಹಾರುತ್ತಿದ್ದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಭೇದದ 812 ಮರಗಳು ಧರೆಗುರುಳಲಿವೆ, ಹಾದಿಯಲ್ಲಿರುವ ಕಟ್ಟಡಗಳು ನೆಲಸಮವಾಗಲಿವೆ.
ಈ ಪ್ರಾಜೆಕ್ಟಿಗೆ ಆದಷ್ಟು ಬೇಗನೆ ಅನುಮತಿ ದೊರೆಯಬೇಕೆಂದು ಸ್ವತಃ ಸಿದ್ದರಾಮಯ್ಯನವರು ಕೋರಿದ್ದರು. ಬಿಡಿಎ ನಿರ್ದೇಶಕರೂ, ಯಶವಂತಪುರದ ಶಾಸಕರೂ ಆಗಿರುವ ಸನ್ಮಾನ್ಯ ಎಸ್ ಟಿ ಸೋಮಶೇಖರ ಅವರು, ಸಾರ್ವಜನಿಕರ ಗೊಂದಲಗಳೇನೇ ಇದ್ದರೂ ಅವನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. [ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ದುಡ್ಡೆಲ್ಲಿಂದ ಬಂತು? ಎಚ್ಡಿಕೆ ಪ್ರಶ್ನೆ]
812 ಮರಗಳ ಬದಲಿಗೆ 60 ಸಾವಿರ ಮರಗಳನ್ನು ನೆಡುವುದಾಗಿ ಬಿಡಿಎ ವಾಗ್ದಾನ ನೀಡಿದೆ. ನಗರದ ಸೌಂದರ್ಯಕ್ಕೆ ಎಳ್ಳಷ್ಟೂ ಕುಂದುಕೊರತೆಯಾಗದಂತೆ, ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗದಂತೆ, ಸಂಚಾರಕ್ಕೆ ಎಳ್ಳಷ್ಟೂ ತೊಡಕಾಗದಂತೆ, ಜನಸಾಮಾನ್ಯರೂ ಬಳಸು ಅನುಕೂಲವಾಗುವಂತೆ ಸ್ಟೀಟ್ ಫ್ಲೈಓವರ್ ನಿರ್ಮಿಸುವುದಾಗಿ ಬಿಡಿಎ ಭಾಷೆ ನೀಡಿದೆ.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications