ಸಾರ್ವಜನಿಕರ ಜಾಗೃತಿಗೆ ವಿಶಿಷ್ಟ ಹಾದಿ ತುಳಿದ ಬೆಂಗಳೂರು ಪೊಲೀಸ್
6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಬೆಂಗಳೂರು ಪೊಲೀಸರ ಟ್ವಿಟ್ಟರ್ ಖಾತೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ವಿಶಿಷ್ಠ ಭಿತ್ತಿ ಪತ್ರಗಳು ಮೂಡಿ ಬರುತ್ತಿದ್ದು ಜನರ ಮೆಚ್ಚುಗೆ ಗಳಿಸಿವೆ.
ಬೆಂಗಳೂರು, ಮೇ 4: ಸಾರ್ವಜನಿಕರಲ್ಲಿ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಸರಕಾರ ಹೆಣಗಾಡುತ್ತದೆ. ಅದರಲ್ಲೂ ಸೃಜನಶೀಲ ಹಾದಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಸರಕಾರಿ ಸಂಸ್ಥೆಗಳು ಇನ್ನೂ ಓಬಿರಾಯನ ಕಾಲದ ಪದ್ಧತಿಗಳನ್ನೇ ಅನುಸರಿಸುತ್ತವೆ.
ಆದರೆ ಬೆಂಗಳೂರು ಪೊಲೀಸರು ಇದಕ್ಕೆ ಅಪವಾದ. ಕಾರಣ ಬೆಂಗಳೂರು ನಗರ ಪೊಲೀಸರು ವಿಶಿಷ್ಠ ಮಾದರಿಯಲ್ಲಿ ಟ್ವಿಟ್ಟರ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸೃಜನಶೀಲ ಮೆಮೆಗಳನ್ನು ಸೃಷ್ಠಿಸಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಬೆಂಗಳೂರು ನಗರ ಪೊಲೀಸರ ಟ್ವಿಟ್ಟರ್ ಮೆಮೆ, ವಿಡಿಯೋ, ಭಿತ್ತಿಪತ್ರಗಳ ಸ್ಯಾಂಪಲ್ ಗಳು ಇಲ್ಲಿವೆ.
|
ವ್ಯಂಗ್ಯ, ಹಾಸ್ಯಗಳಲ್ಲೇ ಸಂದೇಶ
ಜನರಿಗೆ ಸಂದೇಶ ತಲುಪಿಸಲು ವ್ಯಂಗ್ಯ, ಹಾಸ್ಯದ ಮಾರ್ಗವನ್ನು ಪೊಲೀಸರು ಅನುಸರಿಸಿದ್ದಾರೆ. ಜತೆಗೆ ಸಿನಿಮಾದ ಸ್ಟಿಲ್ ಗಳನ್ನೆಲ್ಲಾ ಬಳಸಿಕೊಂಡು ಅತ್ಯುತ್ತಮ ರೀತಿಯಲ್ಲಿ ಪ್ರಚಾರ ಪರಿಕರಗಳನ್ನು ಸಿದ್ದಪಡಿಸುತ್ತಿದ್ದಾರೆ ಪೊಲೀಸರು.
|
ನೆಟಿಜನ್ ಮನಗೆದ್ದ ಪೊಲೀಸರು
ಕುಡಿದು ವಾಹನ ಚಾಲನೆ, ರಸ್ತೆ ಸುರಕ್ಷೆ, ಆನ್ ಲೈನ್ ವಂಚನೆ ಹೀಗೆ ಹಲವು ವಿಚಾರಗಳಿಗೆ ಸಂಬಮದಿಸಿದಂತೆ ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
|
ಗೇಮ್ ಆಫ್ ಥ್ರೋನ್ಸ್
ಗೇಮ್ ಆಫ್ ಥ್ರೋನ್ಸ್ ನಂಥ ಧಾರವಾಹಿ ಸರಣಿಗಳಿಂದ ಪ್ರೇರಣೆ ಪಡೆದ ಮೆಮೆಗಳನ್ನೂ ಪೊಲೀಸರು ರಚಿಸಿ ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ.
|
ಕರೆಗಳನ್ನು ನಿರ್ಲಕ್ಷಿಸಿ
ನಿಮ್ಮ ಒಟಿಪಿಯನ್ನು ಶೇರ್ ಮಾಡಬೇಡಿ ಎಂಬುದಕ್ಕೆ ಆಕರ್ಷಕ ಚಿತ್ರ ಹಾಗಿ ಗಮನ ಸೆಳೆದಿದ್ದಾರೆ ಬೆಂಗಳೂರು ಪೊಲೀಸರು. ಒಟಿಪಿ ನೀಡಿದರೆ ನಿಮ್ಮ ಹಣವನ್ನು ಕಳ್ಳರು ಕೊಳ್ಳೆ ಹೊಡೆಯುತ್ತಾರೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
|
ಪಕ್ಕಾ ಹಿಡಿಸ್ತೀವಿ ಸ್ಲೇಟು
ಇಂಥಹ ಆಕರ್ಷಕ ಸ್ಲೋಗನ್ ಗಳು ಕೂಡಾ ಈ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಜತೆಗೆ ಹಲವು ವೀಡಿಯೋಗಳನ್ನು ಮಾಡಿಯೂ ಜಾಗೃತಿ ಮೂಡಿಸುತ್ತಾರೆ ಪೊಲೀಸರು. ಹೀಗೆ ವಿಶಿಷ್ಟ ಕಾರಣಕ್ಕೆ ಬೆಂಗಳೂರು ಪೊಲೀಸರ ಟ್ವಿಟ್ಟರ್ ಸುದ್ದಿಗೆ ಗ್ರಾಸವಾಗಿದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications