ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?
ಬೆಂಗಳೂರು, ಫೆ.28: ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯ ಹೋಳಾಗಲಿದೆ ಎಂಬ ಕೊರಗಿನ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಹೊಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಹೊಸ ಬಗೆಯ ದೀರ್ಘಬಾಳಿಕಯ 'ಮಾರ್ಕ್ಸ್ ಕಾರ್ಡ್' ಗಳನ್ನು ವಿತರಿಸಲು ಮುಂದಾಗಿದೆ.
ಬೆಂಕಿಯಲ್ಲಿ ನಂದದ, ನೀರಿನಲ್ಲಿಟ್ಟರೂ ಕೊಳೆಯದ, ಕ್ರಿಮಿ ಕೀಟಗಳ ಬಾಧೆಯಿಂದ ಮುಕ್ತವಾದ ಸದೃಢವಾದ ಮಾರ್ಕ್ಸ್ ಕಾರ್ಡ್ ನೀಡಲು ಬೆಂಗಳೂರು ವಿಶ್ವವಿದ್ಯಾಲಯಗಳು ಯೋಜಿಸಿದೆ.
'ಮಲ್ಟಿ ಫ್ರೂಫ್ ಮಾರ್ಕ್ಸ್ ಕಾರ್ಡ್' ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಬಹು ಭೀತಿ ಸಂರಕ್ಷಿತ ಅಂಕ ಪಟ್ಟಿ ಸ್ವರೂಪ ಹೇಗಿರುತ್ತೆ ಎಂಬುದರ ಬಗ್ಗೆ ವಿಶ್ವ ವಿದ್ಯಾಲಯದ ಅಧಿಕಾರಿಗಳು ಸುಳಿವು ನೀಡಿಲ್ಲ. ಆದರೆ, ಈ ರೀತಿ ಮಾರ್ಕ್ಸ್ ಕಾರ್ಡ್ ನೀಡುತ್ತೇವೆ ನಿರೀಕ್ಷಿಸಿ ಎಂದಿದ್ದಾರೆ.

ಇಂಥದ್ದೊಂದು ಉತ್ತಮ ಅಂಕ ಪಟ್ಟಿ ತಯಾರಿಸಿಕೊಡಲು ಐಟಿ ಕಂಪನಿಗಳ ಜತೆ ವಿಶ್ವವಿದ್ಯಾಲಯ ಮಾತುಕತೆ ನಡೆಸುತ್ತಿದೆ. ಹೊಸ ಅಂಕ ಪಟ್ಟಿಯನ್ನು ಪ್ಲಾಸ್ಟಿಕ್, ಸಿಲ್ವರ್ ಫಾಯಿಲ್, ಬಿದಿರು ಹಾಗೂ ಅಗ್ನಿ ನಿರೋಧಕ ಕಚ್ಚಾವಸ್ತುಗಳಿಂದ ತಯಾರಿಸಲಾಗುತ್ತದೆ. ಈ ಅಂಕಪಟ್ಟಿಗೆ ನೀಡುವ ಶುಲ್ಕದ ಜತೆಗೆ ಹೊಸ ಅಂಕಪಟ್ಟಿಯ ಬೆಲೆ 15 ರು ಹೆಚ್ಚಳವಾಗಲಿದೆ. ಹೊಸ ಮಾದರಿ ಅಂಕಪಟ್ಟಿಯ ಕಾಗದ ಬೆಲೆ 3.50 ರು ನಷ್ಟಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈ ಹೊಸ ಪ್ರಯೋಗದಿಂದ ನಕಲಿ ಅಂಕಪಟ್ಟಿಯ ಹಾವಳಿಯನ್ನು ತಪ್ಪಿಸಬಹುದಾಗಿದೆ. ಪ್ರತಿ ಅಂಕಪಟ್ಟಿಯೂ ವಿಶಿಷ್ಟವಾಗಿದ್ದು, ಬಾರ್ ಕೋಡ್ ಹೊಂದಲಿದೆ. ವಿದ್ಯಾರ್ಥಿಗಳು ಒಮ್ಮೆ ಹೆಚ್ಚಿನ ಶುಲ್ಕ ನೀಡುವುದು ಅನಿವಾರ್ಯವಾದರೂ ಅದರ ಉಪಯೋಗ ಶಾಶ್ವತವಾಗಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್ ಕೆ ಸೋಮಶೇಖರ್ ಹೇಳಿದ್ದಾರೆ.
ಬಾರ್ ಕೋಡ್ ಹೊಂದಿರುವುದರಿಂದ ಅಂಕಪಟ್ಟಿಯ ನೈಜತೆ, ದೃಢತೆ ಇನ್ನಷ್ಟು ಹೆಚ್ಚಲಿದ್ದು, ಉನ್ನತ ವ್ಯಾಸಂಗಕ್ಕೆ ವಿದೇಶಿ ವಿವಿಗೆ ತೆರಳುವವರಿಗೆ ಕಂಪನಿಗೆ ಸೇರುವವರಿಗೆ ಅಂಕಪಟ್ಟಿ ಪರಿಶೀಲನೆ ಸುಲಭವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು.
-
NCERT 8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಕೇಂದ್ರ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 104 ಕೋಟಿ ರೂ. ವೆಚ್ಚದಲ್ಲಿ ಉಚಿತ ಶೂ, ಸಾಕ್ಸ್ ವಿತರಣೆಗೆ ಸರ್ಕಾರದ ಆದೇಶ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications