ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ವಿಬ್ಗಯಾರ್ ಶಾಲೆ
ಬೆಂಗಳೂರು, ಜು.23: ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಬ್ಗಯಾರ್ ಶಾಲೆಯ ಒಂದೊಂದೆ ಅಕ್ರಮ ಇದೀಗ ಬೆಳಕಿಗೆ ಬರತೊಡಗಿದೆ.
ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್ಇ) ಶಿಕ್ಷಣ ಕ್ರಮದಲ್ಲಿ ಪಾಠ ಮಾಡಲು ವಿಬ್ಗಯಾರ್ ಸಂಸ್ಥೆಗೆ ಕಳೆದ ವರ್ಷ ಪ್ರಮಾಣ ಪತ್ರ ಸಿಕ್ಕಿದ್ದು, ಏಳು ವರ್ಷದಿಂದ ಪೋಷಕರಿಗೆ ಸುಳ್ಳು ಐಸಿಎಸ್ಇ ಮಾನ್ಯತೆಯ ಪ್ರಮಾಣಪತ್ರ ತೋರಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆದರೆ ಐಸಿಎಸ್ಇ ಪಠ್ಯದಲ್ಲಿ ಪಾಠಮಾಡಲು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೆಷನ್(ಸಿಐಎಸ್ಸಿಇ) ನೀಡುವ ಪ್ರಮಾಣ ಪತ್ರ ಅಗತ್ಯವಾಗಿದ್ದು, ಈ ಪ್ರಮಾಣ ಪತ್ರವನ್ನು ಸಿಐಎಸ್ಸಿಇ ನೀಡಿದ ಮುಂದಿನ ವರ್ಷದಿಂದ ಪ್ರಮಾಣ ಪತ್ರ ಪಡೆದ ಶಾಲೆ ಐಸಿಎಸ್ಇ ಪಠ್ಯಕ್ರಮದಲ್ಲಿ ಬೋಧನೆ ಮಾಡಬೇಕಾಗುತ್ತದೆ.
ಆದರೆ ವಿಬ್ಗಯಾರ್ ಶಾಲೆಗೆ ಅಕ್ಟೋಬರ್ 9, 2013ರಂದು ಸಿಐಎಸ್ಸಿಇ ಪ್ರಮಾಣ ಪತ್ರ ನೀಡಿದೆ. ಈ ಪ್ರಮಾಣ ಪತ್ರ ದೊರೆತ ಒಂದು ವರ್ಷದ ಬಳಿಕ, ಅಂದರೆ 2014ರಲ್ಲಿ ಐಸಿಎಸ್ಇ ಪಠ್ಯಕ್ರಮದಲ್ಲಿ ಶಿಕ್ಷಣ ಆರಂಭಿಸಿಬೇಕಿದ್ದ ವಿಬ್ಗಯಾರ್ 2007ರಿಂದಲೇ ಸುಳ್ಳು ದಾಖಲೆ ಹೇಳಿ ಪೋಷಕರಿಗೆ ಮೋಸ ಮಾಡಿದೆ ಎಂದು ವರದಿಯಲ್ಲಿ ತಿಳಿಸಿದೆ.
ವಿಬ್ಗಯಾರ್ ಸಿಐಸಿಎಸ್ಇ ನಿಮಯವನ್ನು ಉಲ್ಲಂಘಿಸಿದೆ. ಸಿಐಸಿಎಸ್ಇ ಪ್ರಮಾಣ ಪತ್ರವಿಲ್ಲದೇ ಯಾವುದೇ ಶಾಲೆ ಐಸ್ಎಸ್ಇ ಪಠ್ಯ ಕ್ರಮದಲ್ಲಿ ಬೋಧಿಸುವ ಹಾಗಿಲ್ಲ ಎಂದು ಸಿಐಸಿಎಸ್ಇ ಮುಖ್ಯಸ್ಥ, ಡಾ. ಜೋಸ್ ಐಕರ ಪ್ರತಿಕ್ರಿಯೆ ನೀಡಿದ್ದಾರೆ.[ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]
ಸಿಐಎಸ್ಸಿಇ ನಿಮಮವನ್ನು ಉಲ್ಲಂಘಿಸಿದ ಜೊತೆಗೆ ವಿಬ್ಗಯಾರ್ ಶಾಲೆ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮವನ್ನು ಸಹ ಉಲ್ಲಂಘಿಸಿದೆ.
2006-07ರಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಶಾಲೆಯಲ್ಲಿ ಕನ್ನಡ ಮಾಧ್ಯಮಲ್ಲಿ ಶಿಕ್ಷಣ ನೀಡುತ್ತೇವೆ ಎಂದು ಬಿಇಒರಿಂದ ಅನುಮತಿ ಪಡೆದಿದ್ದ ಆಡಳಿತ ಮಂಡಳಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡದೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಶಾಲೆ ನೋಂದಣಿಯಾಗಿದ್ದರೂ ಕನ್ನಡವನ್ನು ಮಾಧ್ಯಮ ಬಿಡಿ ಕನ್ನಡ ಭಾಷೆಯನ್ನು ಬೋಧನೆಯಲ್ಲಿ ಸೇರಿಸದೇ ನಿಯಮವನ್ನು ಉಲ್ಲಂಘನೆ ಮಾಡಿರುವ ಅಂಶವು ಇದೀಗ ಬೆಳಕಿಗೆ ಬಂದಿದೆ.
ಶಾಲೆಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಕವಿತಾ ಸಾಹಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಲೆ 2007ರಿಂದ ಬೆಂಗಳೂರಿನಲ್ಲಿ ಕಾರ್ಯಾರಂಭಗೊಂಡಿದ್ದು, ಮೂರು ಅಥವಾ ನಾಲ್ಕು ವರ್ಷದ ಹಿಂದೆ ಐಸಿಎಸ್ಇ ಸದಸ್ಯತ್ವವನ್ನು ಪಡೆದಿದ್ದೇವೆ ಎಂದು ಹೇಳಿದ್ದಾರೆ.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಇಂದಿನಿಂದ SSLC ಪರೀಕ್ಷೆ: 8.66 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಹಾರೈಕೆ; ಆತಂಕಬೇಡ ಎಂದ ಸರ್ಕಾರ -
ಉನ್ನತ ಶಿಕ್ಷಣದಲ್ಲಿ 'ಕೇಂದ್ರೀಕರಣ'ದ ಆತಂಕ: ಉದ್ದೇಶಿತ VBSA ಮಸೂದೆ 2025ರ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ -
ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: 1-8ನೇ ತರಗತಿಗೆ ಹೊಸ ಪಠ್ಯಪುಸ್ತಕ ಬಿಡುಗಡೆ ಮಾಡಿದ NCERT -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ












Click it and Unblock the Notifications