ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿಗಳು ಮತ್ತೊಮ್ಮೆ ಸೋಲುತ್ತಾರೆ!
ಬಳ್ಳಾರಿ, ಮೇ. 05: ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಹೂವಿನಹಡಗಲಿ. ಒಮ್ಮೆ ಗೆದ್ದವರು, ಮತ್ತೊಮ್ಮೆ ಸೋತ ಇತಿಹಾಸದ ಕ್ಷೇತ್ರ. ಗೆದ್ದವರು ಪಕ್ಷ ರಾಜ್ಯಭಾರ ಮಾಡುವ ವಿಶೇಷ ಕ್ಷೇತ್ರ. ಈ ಬಾರಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರರ ಮಧ್ಯೆ ತೀವ್ರ ಸ್ಪರ್ಧೆ ಇದೆ. ಹೊಸ ಇತಿಹಾಸ ನಿರ್ಮಾಣ ಆಗುವ ಲೆಕ್ಕಾಚಾರ ಕ್ಷೇತ್ರದ ಮತದಾರರದ್ದು.
ಕ್ಷೇತ್ರದಲ್ಲಿ ಒಟ್ಟು 216 ಮತಗಟ್ಟೆಗಳು, 1.82 ಲಕ್ಷ ಮತದಾರರಿದ್ದಾರೆ. ಹಗರಿಬೊಮ್ಮನಹಳ್ಳಿಯ ಹಂಪಸಾಗರ ಸೇರಿದಂತೆ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಎಂ.ಪಿ. ಪ್ರಕಾಶ, ಮ.ಮ. ಪಾಟೀಲ, ಅಂಗಡಿ ಚನ್ನಬಸಪ್ಪ, ಎನ್.ಎಂ.ಕೆ. ಸೋಗಿ, ಈಟಿ ಶಂಭುನಾಥ, ನಂದಿಹಳ್ಳಿ ಹಾಲಪ್ಪ ಅವರನ್ನು ಒಮ್ಮೆ ಗೆಲ್ಲಿಸಿ, ಮತ್ತೊಮ್ಮೆ ಸೋಲಿಸಿರುವ ಕ್ಷೇತ್ರದ ಮತದಾರ, ಪಿ.ಟಿ. ಪರಮೇಶ್ವರನಾಯಕ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾನೆ.
ಕಾಂಗ್ರೆಸ್ ಗೆದ್ದರೆ ಇತಿಹಾಸ ನಿರ್ಮಾಣ. ಬಿಜೆಪಿ ಗೆದ್ದರೆ ಇತಿಹಾಸ ಸಂಪ್ರದಾಯ. ಪಕ್ಷೇತರ ಗೆಲುವು ಸಾಧಿಸಿದಲ್ಲಿ ಕ್ಷೇತ್ರದ ಮತದಾರರ ಪ್ರಬುದ್ಧತೆ ಸಾಬೀತು. ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಂಇಪಿ, ಕೆಪಿಜೆಪಿ, ಪಕ್ಷೇತರ ಸೇರಿ 6 ಅಭ್ಯರ್ಥಿಗಳಿದ್ದಾರೆ.

ಬಿಜೆಪಿಯ ಬಿ. ಚಂದ್ರನಾಯ್ಕ, ಕಾಂಗ್ರೆಸ್ ನ ಪಿ.ಟಿ. ಪರಮೇಶ್ವರನಾಯ್ಕ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್ ನ ಪುತ್ರೇಶ, ಪಕ್ಷೇತರ ಓದೋ ಗಂಗಪ್ಪ ಉತ್ತಮ ಸ್ಪರ್ಧೆ ನೀಡಿದ್ದು, ಗೆಲುವಿನ ಕೇಕೆ ಹಾಕುವ ತವಕದಲ್ಲಿದ್ದಾರೆ. ಎಂಇಪಿಯಿಂದ ಎಲ್. ಕೃಷ್ಣನಾಯ್ಕ ಹಾಗೂ ಕೆಪಿಜೆಪಿಯ ಹರೀಶಕುಮಾರ್ ಕಣದಲ್ಲಿದ್ದಾರೆ.
ಬಿಜೆಪಿಯ ಚಂದ್ರನಾಯ್ಕ, ಸಿಂಗಟಾಲೂರು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿರುವುದು, ಕ್ಷೇತ್ರದಲ್ಲಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕುಡಿವ ನೀರಿನ ಯೋಜನೆ, ರಸ್ತೆ, 10 ಸಾವಿರ ಮನೆಗಳು ನಿರ್ಮಾಣ ಸೇರಿ ಅಭಿವೃದ್ಧಿಯನ್ನು ಪ್ರಸ್ತಾಪಿಸಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ನ ಪಿ.ಟಿ. ಪರಮೇಶ್ವರನಾಯ್ಕ, ರಸ್ತೆ, ಕುಡಿವ ನೀರು, ಸಿಸಿ ರಸ್ತ್ತೆ, ತುಂಗಭದ್ರಾ ನದಿಯಿಂದ ಕ್ಷೇತ್ರದ 23 ಕೆರೆಗಳಲ್ಲಿ ನೀರು ತುಂಬಿಸಿರುವುದು, ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಯ ಭರವಸೆ ನೀಡುವ ಮೂಲಕ ಮತದಾರರನ್ನು ತಲುಪುತ್ತಿದ್ದಾರೆ.
ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ, ಹಾಲಿ ಶಾಸಕ ಪರಮೇಶ್ವರನಾಯ್ಕರ ದೌರ್ಜನ್ಯ, ಭ್ರಷ್ಟಾಚಾರ, ಆಡಳಿತಾತ್ಮಕ ವೈಫಲ್ಯ, ಎಂ.ಪಿ. ಪ್ರಕಾಶ್ ಕುಟುಂಬಕ್ಕೆ - ಬೆಂಬಲಿಗರಿಗೆ ಮಾಡಿರುವ ವಂಚನೆ, ಪೊಲೀಸ್ ಅಧಿಕಾರಿ ಅನುಪಮ ಶಣೈ ವಿಷಯವನ್ನೇ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುತ್ರೇಶ, ತಮ್ಮ ಸ್ವಜಾತಿ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ.

ಈ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತರು 50ಸಾವಿರ, ಕುರುಬ 35ಸಾವಿರ, ವಾಲ್ಮೀಕಿ 18ಸಾವಿರ, ಮುಸ್ಲಿಂ 15ಸಾವಿರ, ಪ.ಜಾ ಎಡಗೈ, ಬಲಗೈ ಸೇರಿ 60ಸಾವಿರ, ಬ್ರಾಹ್ಮಣರು 2ಸಾವಿರ ಹಾಗೂ ಇತರ 5ಸಾವಿರ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ, ಕುರುಬ ಮತಗಳೇ ನಿರ್ಣಾಯಕ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications