ಕಟ್ಟಡದಿಂದ ಕಟ್ಟಡಗಳಿಗೆ ಜಂಪ್ ಮಾಡುವ ಸಿರುಗುಪ್ಪದ ಸ್ಪೈಡರ್ಮ್ಯಾನ್
ವಿಜಯನಗರ, ಜೂನ್ 26: ಒಬ್ಬೊಬ್ಬರಲ್ಲಿ ಒಂದೊಂದು ಹವ್ಯಾಸ, ಕೌಶಲ ಇರುತ್ತದೆ. ಹಾಗೆಯೇ ವಿಜಯನಗರದ ಯುವಕ ಮಧು ಚೌವ್ಹಾಣ್ನಲ್ಲೂ ಒಂದು ವಿಶೇಷ ಕೌಶಲವಿದೆ. ಕಟ್ಟಡದಿಂದ ಕಟ್ಟಡಕ್ಕೆ ಸ್ಪೈಡರ್ ಮ್ಯಾನ್ನಂತೆ ಜಿಗಿಯುವ ಮಧು ಕಸರತ್ತು ನೋಡಿ ಆಶ್ಚರ್ಯ ಪಡದವರೇ ಇಲ್ಲ.
ಮಧು ಚೌವ್ಹಾಣ್ (31) ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಯುವಕ. 20 ವರ್ಷಗಳಿಂದಲೂ ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವುದನ್ನು ಕಲೆಯಂತೆ ರೂಢಿಸಿಕೊಂಡು ಬಂದಿದ್ದಾರೆ. ತಾವು 5 ವರ್ಷದವರಿದ್ದಾಗಲೇ ಹೀಗೆ "ಸ್ಪೈಡರ್ ಮ್ಯಾನ್"ನಂತೆ ಜಿಗಿಯುವ ತಾಲೀಮು ಶುರುವಿಟ್ಟುಕೊಂಡಿದ್ದರಂತೆ.
"ನ್ಯಾಷಿನಲ್ ಜಿಯೋಗ್ರಫಿ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದರಲ್ಲಿ ಬರುವ ರಾಯ್ ರಿಂಡ್ ಡಾಯ್ ಮತ್ತು ಡೆನಲ್ ಇನ್ ಬ್ಯಾರ್ ಜಂಪ್ ಮಾಡುವ ದೃಶ್ಯಗಳೇ ನನ್ನ ಮೇಲೆ ಪ್ರಭಾವ ಬೀರಿದವು. ಈ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಿದ್ದೆ" ಎಂದು ವಿವರಿಸುತ್ತಾರೆ ಮಧು. ಮಧು ಹವ್ಯಾಸಕ್ಕೆ ಇಡೀ ಕುಟುಂಬವೇ ಪ್ರೋತ್ಸಾಹ ನೀಡಿತು.

ಮಧು ಸಿರುಗುಪ್ಪದ ಜ್ಞಾನ ಭಾರತಿ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿದ್ದಾರೆ. ಒಂದು ಬಾರಿ ಸಿರುಗುಪ್ಪದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಗಿಯುವ ಸಂದರ್ಭ ಎರಡೂ ಕೈಗಳು ಫ್ರ್ಯಾಕ್ಚರ್ ಆಗಿದ್ದವು ಎಂದು ನೆನೆಸಿಕೊಳ್ಳುತ್ತಾರೆ ಮಧು.

ಇಂಗ್ಲೆಂಡಿನ ಜಾಕ್ ಕೋರಿಸ್ ಅವರ ಮಾರ್ಗದರ್ಶನದಲ್ಲಿ ಈ ವಿಶೇಷ ಕಲೆ ಕಲಿಯುತ್ತಿದ್ದೇನೆ. ಯಾವ ರೀತಿ ಬೀಳಬೇಕು? ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ನಮ್ಮ ಭಂಗಿಗಳು ಹೇಗಿರಬೇಕು, ಯಾವ ವ್ಯಾಯಾಮ ಮಾಡಬೇಕು, ಜಿಗಿಯುವುದು ಹೇಗೆ ಎಲ್ಲವನ್ನೂ ಅವರಿಂದಲೇ ಕಲಿತೆ ಎಂದು ಹೇಳುತ್ತಾರೆ ಮಧು.ಸ
ಮಧು ಕರಾಟೆಯಲ್ಲೂ ಮುಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಮೂರು ಬಾರಿ ಪದಕ ಗೆದ್ದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿ ಗೆಲುವು ಸಾಧಿಸಿರುವುದಾಗಿ ತಿಳಿಸಿದ್ದಾರೆ. ಇವರ ಸಾಧನೆ ಕಂಡ ವರ್ಲ್ಡ್ ಫ್ರೀ ರನ್ನಿಂಗ್ ಫಾರಕೊ ಫೆಡರೇಶನ್ ಸದಸ್ಯತ್ವ ನೀಡಿದೆ. ಸದ್ಯ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಇವರು.

"ನಾನು ಕಷ್ಟಪಟ್ಟು ಕಲಿತಿರುವ ವಿದ್ಯೆ ನನಗೇ ಕೊನೆಯಾಗಬಾರದು. ಮುಂದಿನ ಪೀಳಿಗೆಗೆ ಕಲಿಸಬೇಕೆನ್ನುವ ಮಹದಾಸೆಯಿದೆ" ಎಂದು ಹೇಳುತ್ತಾರೆ ಮಧು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications