ಬಳ್ಳಾರಿಯಲ್ಲಿ ನವೆಂಬರ್ 17ಕ್ಕೆ 'ಕನ್ನಡ ಜಾತ್ರೆ'ಗೆ ನಾನಾ ಕಾರ್ಯಕ್ರಮ
ಬಳ್ಳಾರಿ, ನವೆಂಬರ್ 16: ನಿಮಗಾಗಿ ನಾವು ಸಂಸ್ಥೆಯಿಂದ ನವೆಂಬರ್ 17ರ ಶನಿವಾರ ಬೆಳಗ್ಗೆ 9.30ರಿಂದ ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ವಿವರ ಇಂತಿದೆ.
ಉದ್ಘಾಟನೆ: ಪ್ರೊ ಅಬ್ದುಲ್ ಮುತಾಲಿಬ್
ಅಧ್ಯಕ್ಷತೆ: ಡಾ.ಎ.ಎನ್.ಸಿದ್ದೇಶ್ವರಿ
ಮುಖ್ಯ ಅತಿಥಿಗಳು: ಡಾ.ಪಿ.ರಾಧಾಕೃಷ್ಣ, ವಿದುಷಿ ವನಮಾಲಾ ಕುಲಕರ್ಣಿ, ಶ್ರೀಧರನ್, ಬಿ.ನಾಗರಾಜ.
ಕನ್ನಡ ಕಣ್ಮಣಿ ಪ್ರಶಸ್ತಿ: ನಾಡೋಜ ಬೆಳಗಲ್ಲು ವೀರಣ್ಣ

ವಿಶೇಷ ಆಹ್ವಾನಿತರು: ಪ್ರಸನ್ನ ಭೋಜಶೆಟ್ಟರ್
ಕನ್ನಡ-ನಾಡು-ನುಡಿ-ಮಾತು: ನಿಷ್ಠಿ ರುದ್ರಪ್ಪ
ಪ್ರೌಢಶಾಲೆ/ಪದವಿಪೂರ್ವ/ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳು
ಸಾರ್ವಜನಿಕರಿಗಾಗಿ ಸ್ಪರ್ಧೆಗಳು
ಇದೇ ಸಂದರ್ಭದಲ್ಲಿ ವಾಹನಗಳಿಗೆ ಕನ್ನಡ ನಾಮಫಲಕ ಅಳವಡಿಕೆ, ಉಚಿತವಾಗಿ ಕನ್ನಡದ ಅಕ್ಷರದಲ್ಲಿ ಪೇಂಟ್ ಮಾಡಿಕೊಡಲಾಗುತ್ತದೆ.
ಆಂಡ್ರಾಯ್ಡ್ ಸ್ಮಾರ್ಟ್ ಫೋನಿಗೆ ಕನ್ನಡ ಬಳಸಲು ಇಚ್ಛಿಸುವವರಿಗೆ 'ಜಸ್ಟ್ ಕನ್ನಡ' ಹಾಕಿಕೊಟ್ಟು, ಬಳಕೆ ಬಗ್ಗೆ ಹೇಳಿಕೊಡಲಾಗುತ್ತದೆ.
ಸಮಾರೋಪ ಸಮಾರಂಭ: ಸಂಜೆ 5.45ಕ್ಕೆ












Click it and Unblock the Notifications