ಮಾರ್ಚ್ 3ರಿಂದ ಬೆಂಗಳೂರು-ಬಳ್ಳಾರಿ ವಿಮಾನ ಸೇವೆ, ದರಪಟ್ಟಿ
ಬಳ್ಳಾರಿ, ಫೆಬ್ರವರಿ 27: ವಿಜಯನಗರದ ತೋರಣಗಲ್ ವಿಮಾನ ನಿಲ್ದಾಣದಿಂದ ಮತ್ತೆ ವಿಮಾನ ಸೇವೆ ಆರಂಭವಾಗಲಿದೆ. ಜಿಂದಾಲ್ ಕಂಪನಿಗೆ ಸೇರಿರುವ ಈ ವಿಮಾನ ನಿಲ್ದಾಣ ಬಳ್ಳಾರಿ ಮತ್ತು ವಿಜಯನಗರವನ್ನು ವಿವಿಧ ನಗರದ ಜೊತೆ ಬೆಸೆಯುವ ವಿಮಾನ ನಿಲ್ದಾಣವಾಗಿದೆ. ಮಾರ್ಚ್ 3ರಿಂದ ಅಲಯನ್ಸ್ ಏರ್ ವಿಮಾನಯಾನ ಸಂಸ್ಥೆ ಎರಡು ನಗರಕ್ಕೆ ವಿಮಾನ ಸಂಚಾರ ಆರಂಭಿಸಲಿದ್ದು, ಬಳ್ಳಾರಿ ಭಾಗದ ಜನರು ವಿಮಾನದ ಮೂಲಕ ಬೆಂಗಳೂರು ನಗರಕ್ಕೆ ತಲುಪಬಹುದು.
ಅಲಯನ್ಸ್ ಏರ್ ವಿದ್ಯಾನಗರ- ಬೆಂಗಳೂರು ಮತ್ತು ಹೈದರಾಬಾದ್-ವಿದ್ಯಾ ನಗರ ನಡುವೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಎರಡು ನಗರದ ನಡುವೆ ನೇರ ವಿಮಾನ ಸೇವೆ ಮಾರ್ಚ್ 3ರಂದು ಆರಂಭಗೊಳ್ಳಲಿದ್ದು, ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ವೇಳಾಪಟ್ಟಿ, ದರ: ಹೈದರಾಬಾದ್-ವಿದ್ಯಾ ನಗರ ನಡುವೆ ಮಾರ್ಚ್ 3, 2025ರಿಂದ ವಿಮಾನ ಸೇವೆ ಆರಂಭ. ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ವಿಮಾನಗಳು ಸಂಚಾರವನ್ನು ನಡೆಸಲಿದೆ ಎಂದು ಅಲಯನ್ಸ್ ಏರ್ ಹೇಳಿದೆ.
ಹೈದರಾಬಾದ್-ವಿದ್ಯಾನಗರ ನಡುವಿನ ವಿಮಾನ 9.35ಕ್ಕೆ ಹೊರಡಲಿದ್ದು, 10.55ಕ್ಕೆ ವಿದ್ಯಾನಗರ ತಲುಪಲಿದೆ. ವಿದ್ಯಾನಗರ-ಹೈದರಾಬಾದ್ ನಡುವಿನ ವಿಮಾನ 14.20ಕ್ಕೆ ಹೊರಡಲಿದ್ದು, 15.35ಕ್ಕೆ ಆಗಮಿಸಲಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಮಾರ್ಗದ ಪ್ರಯಾಣ ದರ 3604 ರೂ.ಗಳಿಂದ ಆರಂಭಗೊಳ್ಳಲಿದೆ.
ವಿದ್ಯಾನಗರ-ಬೆಂಗಳೂರು ನಡುವೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ವಿಮಾನಗಳು ಹಾರಾಟವನ್ನು ನಡೆಸಲಿವೆ. ಈ ಮಾರ್ಗದ ಪ್ರಯಾಣ ದರ 3342 ರೂ.ಗಳಿಂದ ಪ್ರಾರಂಭವಾಗಲಿದೆ.
ವಿದ್ಯಾನಗರ-ಬೆಂಗಳೂರು ನಡುವಿನ ವಿಮಾನ 11.20ಕ್ಕೆ ಹೊರಡಲಿದ್ದು, 12.20ಕ್ಕೆ ತಲುಪಲಿದೆ. ಬೆಂಗಳೂರು-ವಿದ್ಯಾನಗರ ನಡುವಿನ ವಿಮಾನ 12.50ಕ್ಕೆ ಹೊರಡಲಿದ್ದು, 13.55ಕ್ಕೆ ತಲುಪಲಿದೆ. ಎರಡೂ ಮಾರ್ಗದ ಟಿಕೆಟ್ ಬುಕ್ಕಿಂಗ್ಗಾಗಿ ಅಲಯನ್ಸ್ ಏರ್ ವೆಬ್ಸೈಟ್ಗೆ ಭೇಟಿ ನೀಡಬಹುದು.
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಸುಮಾರು 13 ವರ್ಷಗಳು ಕಳೆದರೂ ಸಹ ಇನ್ನೂ ಶ್ರೀ ಕೃಷ್ಣದೇವರಾಯ ವಿಮಾನ ನಿಲ್ದಾಣ ಕೆಲಸಗಳು ಅಂತಿಮಗೊಳ್ಳುತ್ತಿಲ್ಲ. ಟೆಂಡರ್ ಪಡೆದವರ ವಿಳಂಬದ ಕಾರಣ ಕಾಮಗಾರಿ ವೇಗ ಪಡೆದುಕೊಂಡಿಲ್ಲ.
2024ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸಲು ಯೋಜನೆ ರೂಪಿಸಿತು. ಮೂರು ಹಂತದಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿತ್ತು. ಏರ್ಬಸ್ 320 ಮಾದರಿಯ ವಿಮಾನ ಇಳಿಯುವ ಸೌಲಭ್ಯ ಹೊಂದಿರುವಂತೆ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ.
ಬಳ್ಳಾರಿ ಮತ್ತು ವಿಜಯನಗರ ಪ್ರತ್ಯೇಕ ಜಿಲ್ಲೆಯಾಗುವ ಮೊದಲು ಚಾಗನೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚೆನ್ನೈ ಮೂಲದ 'ಮಾರ್ಗ್' ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕಾಮಗಾರಿ ಆರಂಭವಾಗದ ಕಾರಣ ಒಪ್ಪಂದವನ್ನು ರದ್ದುಗೊಳಿಸಿತು, ಕಂಪನಿ ನೀಡಿದ್ದ ಭದ್ರತೆಯ 4 ಕೋಟಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.
2024ರಲ್ಲಿ ಫೇಸ್-1 ರಿಂದ ಫೇಸ್-3 ಎಂದು ಮೂರು ಭಾಗವಾಗಿ ಮಾಡಿ ಕಾಮಗಾರಿಯನ್ನು ಪುನಃ ಆರಂಭಿಸಲಾಗುತ್ತದೆ ಎಂದ ಸರ್ಕಾರ ಹೇಳಿತ್ತು. ಆದರೆ ಕಾಮಗಾರಿ ಎಷ್ಟು ಮುಗಿದಿದೆ?, ಯಾವಾಗ ವಿಮಾನ ನಿಲ್ದಾಣ ಪೂರ್ಣಗೊಳ್ಳಲಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ಕೊಡಬೇಕಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications