ವಿಡಿಯೋ: ನಟ-ರಾಜಕಾರಣಿ ಬಾಲಕೃಷ್ಣರಿಂದ ಪತ್ರಕರ್ತನ ಮೇಲೆ ಹಲ್ಲೆ
ಹಿಂದೂಪುರ (ಆಂಧ್ರಪ್ರದೇಶ), ಮಾರ್ಚ್ 29: ನಟ- ತೆಲುಗು ದೇಶಂ ಪಕ್ಷದ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಹಲ್ಲೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮೋಜೋ ಟಿವಿಯ ಪತ್ರಕರ್ತನನ್ನು ಬೆದರಿಸುತ್ತಿರುವುದು ಹಾಗೂ ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಕೂಡ ಸೆರೆಯಾಗಿವೆ. ಬುಧವಾರದಂದು ಈ ಘಟನೆ ನಡೆದಿದೆ. ಹಿಂದೂಪುರ ಶಾಸಕರೂ ಆದ ಬಾಲಕೃಷ್ಣ ತಮ್ಮ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸುವಾಗ ಈ ಘಟನೆ ನಡೆದಿದೆ.
ಇದೀಗ ಆ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ ಹಾಗೂ ಷೇರ್ ಆಗುತ್ತಿದೆ. ಟಿಡಿಪಿಯ ಕಾರ್ಯಕರ್ತರು ಬಾಲಕೃಷ್ಣ ಅವರಿಗೆ ಹಾರ ಹಾಕಿದ್ದಾರೆ. ಆ ನಂತರ ಹಲವು ಮಕ್ಕಳು ಬಾಲಯ್ಯ ಬಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ವೈಯಕ್ತಿಕ ಭದ್ರತಾ ಸಿಬ್ಬಂದಿ ಆ ಮಕ್ಕಳನ್ನು ತಳ್ಳಿದ್ದಾರೆ. ಆ ದೃಶ್ಯವನ್ನು ವರದಿಗಾರ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ.

ಇದನ್ನು ಗಮನಿಸಿದ ಬಾಲಕೃಷ್ಣ ಪತ್ರಕರ್ತರ ಜತೆ ಜಗಳಕ್ಕೆ ಇಳಿದು, ಹಲ್ಲೆ ಮಾಡಿದ್ದಾರೆ. ಕೆಟ್ಟ ಮಾತುಗಳಲ್ಲಿ ಬಯ್ದು, ಕೊಲ್ಲುವುದಾಗಿ ಧಮಕಿ ಹಾಕಿದ್ದಾರೆ. ಮೊದಲು ಆ ವಿಡಿಯೋ ಡಿಲೀಟ್ ಮಾಡು ಎಂದು ಬಾಲಕೃಷ್ಣ ಬೆದರಿಸುವುದು ತುಂಬ ಸ್ಪಷ್ಟವಾಗಿ ಕೇಳಿಸುತ್ತದೆ. ನನಗೆ ಕತ್ತಿ ಬಳಸುವುದೂ ಗೊತ್ತಿದೆ, ಬಾಂಬ್ ಹಾಕುವುದೂ ಗೊತ್ತಿದೆ. ನಿನ್ನ ಪ್ರಾಣ ತೆಗೀತೀನಿ ಎಂದು ಬೆದರಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಅಗಿದೆ.
Actor and #TDP Hindupur MLA, #Balakrishna issuing death threats to journalists. #Elections2019 #YSRCP #nbk #Congress #BJP #JSP pic.twitter.com/MBWn5xCv5u
— Rahul Devulapalli (@rahulscribe) 27 March 2019
ಬಾಲಕೃಷ್ಣ ಸಾರ್ವಜನಿಕವಾಗಿ ಹೀಗೆ ನಡೆದುಕೊಳ್ಳುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ತನ್ನ ಅಭಿಮಾನಿಗಳು, ತಮ್ಮದೇ ಪಕ್ಷದ ಸದಸ್ಯರಿಗೆ ಹೊಡೆದ ಉದಾಹರಣೆಗಳಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications