Get Updates
Get notified of breaking news, exclusive insights, and must-see stories!

ಆಂಧ್ರ ಪ್ರದೇಶ; ಗುಂಟೂರಿನ ಜಿನ್ನಾ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ

ಅಮರಾವತಿ, ಫೆಬ್ರವರಿ 02; ಆಂಧ್ರ ಪ್ರದೇಶದ ಗುಂಟೂರಿನ ಜಿನ್ನಾ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ ಬಳಿಯಲಾಗಿದೆ. ಟವರ್ ಸಮೀಪ ಧ್ವಜಾರೋಹಣ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುವಾರ ಧ್ವಜಾರೋಹಣ ನಡೆಸಲಾಗುತ್ತದೆ.

ಜನವರಿ 26ರ ಗಣರಾಜ್ಯೋತ್ಸವದ ದಿನ ಜಿನ್ನಾ ಟವರ್ ಬಳಿ ಹಿಂದೂ ವಾಹಿನಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಾರಿಸಲು ಪಯತ್ನ ಪಟ್ಟಿದ್ದರು. ಆಗ ಗಲಾಟೆ ನಡೆದು ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಹಿಂದೂ ವಾಹಿನಿ ಕಾರ್ಯಕರ್ತರನ್ನು ಪೊಲೀಸರು ಅಡ್ಡಗಟ್ಟಿ ಬಂಧಿಸಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು ಜಿನ್ನಾ ಟವರ್ ಹೆಸರು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದರು.

Gunturs Jinnah Tower

ಬಳಿಕ ಪೊಲೀಸರು ಟವರ್ ಬಳಿ ಬ್ಯಾರಿಕೇಡ್ ಹಾಕಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು. ಮಂಗಳವಾರ ಸ್ಥಳೀಯ ವೈಎಸ್‌ಆರ್‌ಸಿಪಿ ಶಾಸಕ ಮೊಹಮ್ಮದ್ ಮುಸ್ತಾಫ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ ಬಳಿದಿದ್ದಾರೆ.

ವಿವಾದಕ್ಕೆ ಕಾರಣ; ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಜಿನ್ನಾ ಟವರ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಹೆಸರು ಭಾರತದಲ್ಲಿ ಟವರ್ ವೊಂದಕ್ಕೆ ಇಡಲಾಗಿದೆ. ಹೆಸರು ಬದಲಾವಣೆ ಮಾಡಿ, ನೀವು ಮಾಡಿಲ್ಲ ಎಂದರೆ ಅಧಿಕಾರಕ್ಕೆ ಬಂದ ಕೂಡಲೇ ನಾವು ಹೆಸರು ಬದಲಾಯಿಸುತ್ತೇವೆ. ಇಲ್ಲ ಟವರ್ ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಪೂರ್ವ ಗುಂಟೂರಿನಲ್ಲಿ ಟವರ್ ನಿರ್ಮಾಣ ಮಾಡಿ ಅದಕ್ಕೆ ಮಹದ್ಮದ್ ಅಲಿ ಜಿನ್ನಾ ಹೆಸರಿಡಲಾಗಿತ್ತು. ಬಿಜೆಪಿ ಈ ಹಿಂದೆಯೂ ಹಲವು ಬಾರಿ ಟವರ್ ಹೆಸರು ಬದಲಾವಣೆಗೆ ಆಗ್ರಹಿಸಿತ್ತು. ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಟವರ್‌ಗೆ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಹೆಸರಿಡಬೇಕು ಎಂದು ಆಗ್ರಹಿಸಿದ್ದರು.

ಈಗ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ ಬಳಿಯಲಾಗಿದ್ದು, ಟವರ್ ಸಮೀಪ ಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ಕಂಬ ನೆಡಲಾಗಿದೆ. ಟವರ್ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪೂರ್ವ ಗುಂಟೂರು ಕ್ಷೇತ್ರದ ಶಾಸಕ ಮೊಹಮ್ಮದ್ ಮುಸ್ತಾಫ ಈ ಕುರಿತು ಮಾತನಾಡಿದ್ದು, "ಹಲವು ಸಂಘಟನೆಗಳ ಮನವಿ ಹಿನ್ನಲೆಯಲ್ಲಿ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ ಬಳಿಯಲಾಗಿದೆ. ಟವರ್ ಸಮೀಪ ಧ್ವಜಾರೋಹಣ ಮಾಡಲು ಕಂಬ ಸಹ ಆಳವಡಿಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

"ಗುರುವಾರ ಜಿನ್ನಾ ಟವರ್ ಬಳಿಕ ತ್ರಿವರ್ಣ ಧ್ವಜಾರೋಹಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಮೊಹಮ್ಮದ್ ಮುಸ್ತಾಫ ತಿಳಿಸಿದ್ದಾರೆ.

ಗುಂಟೂರು ಮೇಯರ್ ಕವಟಿ ಮೋಹನ್ ಮತ್ತು ಶಾಸಕ ಮೊಹಮ್ಮದ್ ಮುಸ್ತಾಫ ಟವರ್ ಬಳಿಗೆ ಭೇಟಿ ನೀಡಿದ ಭದ್ರತೆ ಕುರಿತು ಪರಿಶೀಲನೆ ನಡೆಸಿದರು.

ಕಳೆದ ತಿಂಗಳು ಬಿಜೆಪಿ ನಾಯಕರು ಜಿನ್ನಾ ಟವರ್ ವಿಚಾರ ಎತ್ತಿದಾಗ ಪ್ರತಿಕ್ರಿಯೆ ನೀಡಿದ್ದ ಮೊಹಮ್ಮದ್ ಮುಸ್ತಾಫ, "ಬಿಜೆಪಿ ನಾಯಕರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಜನರನ್ನು ಸಮುದಾಯಗಳ ವಿಚಾರದಲ್ಲಿ ಕೆರಳಿಸಬಾರದು" ಎಂದು ಹೇಳಿದ್ದರು.

2021ರ ಡಿಸೆಂಬರ್ ತಿಂಗಳಿನಲ್ಲಿ ಆಂಧ್ರ ಪ್ರದೇಶದ ಬಿಜೆಪಿ ಘಟಕ ಗುಂಟೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಜಿನ್ನಾ ಟವರ್‌ ಹೆಸರನ್ನು ಅಬ್ದುಲ್ ಕಲಾಂ ಟವರ್ ಎಂದು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದ್ದರು. ಬಳಿಕ ಟವರ್ ಹೆಸರು ವಿವಾದಕ್ಕೆ ಕಾರಣವಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+