ಆಂಧ್ರಪ್ರದೇಶ; ಸರ್ಕಾರಿ ಕಚೇರಿಗಳ ಸ್ಥಳಾಂತರಕ್ಕೆ ಚಾಲನೆ

ಅಮರಾವತಿ, ಫೆಬ್ರವರಿ 02: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಈಗ ಮತ್ತೊಂದು ತೀರ್ಮಾನ ಕೈಗೊಂಡಿದೆ. ಅಮರಾವತಿಯಿಂದ ಮೂರು ಕಚೇರಿಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ವಿಚಾರಣಾ ಆಯುಕ್ತರು ಸೇರಿದಂತೆ ಮೂರು ಕಚೇರಿಗಳನ್ನು ಕರ್ನೂಲ್‌ಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಆಡಳಿತದ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಮರಾವತಿ ಜೊತೆಗೆ ವಿಶಾಖಪಟ್ಣಣಂ ಹಾಗೂ ಕರ್ನೂಲ್ ಕೂಡಾ ಅಧಿಕೃತ ರಾಜಧಾನಿಯಾಗಿರುತ್ತವೆ ಎಂದು ಘೋಷಣೆ ಮಾಡಿದ್ದರು. ಕರ್ನೂಲ್‌ಗೆ ಬೇರೆ ಕಚೇರಿಗಳನ್ನು ಸ್ಥಳಾಂತರ ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

Andhra Pradesh Govt Decided To Shift Offices

ಹೊಸ ರಾಜಧಾನಿಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು ಎಂಬ ವಿಚಾರ ನ್ಯಾಯಾಲಯದ ಮುಂದಿದೆ. ಹೊಸ ರಾಜಧಾನಿಗಳಿಗೆ ಸರ್ಕಾರಿ ಕಚೇರಿ ಸ್ಥಳಾಂತರ ಮಾಡಬಾರದು ಎಂದು ನ್ಯಾಯಾಲಯ ಹೇಳಿದ್ದು, ಫೆಬ್ರವರಿ 26ಕ್ಕೆ ವಿಚಾರಣೆ ಮುಂದೂಡಿದೆ.

ಹೊಸ ರಾಜಧಾನಿಗಳ ಸ್ಥಾಪನೆ ರಾಜ್ಯದಲ್ಲಿ ವಿರೋಧ ಸಹ ವ್ಯಕ್ತವಾಗಿದೆ. ತೆಲಗು ದೇಶಂ ಪಾರ್ಟಿ ಬೆಂಬಲಿತ ರೈತರು, ಆಟೋ ಚಾಲಕರು ರಾಜಧಾನಿ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೂ ಸಹ ರಾಜಧಾನಿ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+