WHO ಮುಖ್ಯಸ್ಥ ಟೆಡ್ರೋಸ್ಗೆ ಗುಜರಾತಿ ಹೆಸರು ನಾಮಕರಣ ಮಾಡಿದ ಪ್ರಧಾನಿ ಮೋದಿ
ಜಾಮ್ನಗರ, ಏಪ್ರಿಲ್ 20: WHO ಮಹಾನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಅವರಿಗೆ 'ತುಳಸಿಭಾಯ್' ಎಂಬ ಗುಜರಾತಿ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಗುಜರಾತ್ನ ಜಾಮ್ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಯ್ಲುಎಚ್ಒ) ಜಾಗತಿಕ ಸಾಂಪ್ರದಾಯಿಕ ಔಷಧಗಳ ಕೇಂದ್ರಕ್ಕೆ (ಜಿಸಿಟಿಎಂ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾರಿಷಲ್ ಪ್ರಧಾನಿ ಪ್ರವಿಂದ ಕುಮಾರ್ ಜಗನ್ನಾಥ ಮತ್ತು ಡಬ್ಲ್ಯುಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಭಾಗಿಯಾಗಿದ್ದರು.
ಜಿಸಿಟಿಎಂ ಎಂಬುದು ಪಾರಂಪರಿಕ ಔಷಧಗಳ ಜ್ಞಾನ ಕೇಂದ್ರವಾಗಿದೆ. ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ಔಷಧಗಳ ಕೊಡುಗೆಯನ್ನು ಗರಿಷ್ಠಗೊಳಿಸಲು ಅಗತ್ಯವಾದ ಆವಿಷ್ಕಾರ ಮತ್ತು ತಂತ್ರಜ್ಞಾನ ಶೋಧ ಇದರ ಉದ್ದೇಶವಾಗಿದೆ. ಈ ಶಂಕುಸ್ಥಾಪನೆ ಸಮಾರಂಭದಲ್ಲಿ ಇದು ಸಂಭವಿಸಿದೆ.

ತಾನು ಪಕ್ಕಾ ಗುಜರಾತಿಯಾಗಿದ್ದೇನೆ ಎಂದು ಹೇಳಿದ ಡಾ ಟೆಡ್ರೋಸ್ಗೆ ಪ್ರಧಾನಿ ಮೋದಿ ತುಳಸಿಭಾಯ್ ಎಂಬ ಹೆಸರನ್ನು ನೀಡಿದ್ದಾರೆ. ಪಿಎಂ ಮೋದಿ ಹೇಳಿದರು, "ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ಅವರು ಇಂದು ಏನಾಗಿದ್ದರೂ ಅದಕ್ಕೆ ಭಾರತೀಯ ಶಿಕ್ಷಕರೇ ಕಾರಣ. ಜೊತೆಗೆ ಅವರು ಭಾರತದೊಂದಿಗೆ ಸಂಬಂಧ ಹೊಂದಿರುವುದಕ್ಕೆ ಹೆಮ್ಮೆಪಡುತ್ತೇನೆ,'' ಎಂದು ಹೇಳಿದರು.

ಇಂದು ಬೆಳಗ್ಗೆ ಅವರು ನನಗೆ ಹೇಳಿದರು: 'ನಾನು ಪಕ್ಕಾ ಗುಜರಾತಿ ಆಗಿದ್ದೇನೆ ಎಂದು. ನೀವು ನನಗೆ ಗುಜರಾತಿ ಹೆಸರನ್ನು ನೀಡುತ್ತೀರಾ?'' ಎಂದು ಡಬ್ಲ್ಯುಎಚ್ಒ ಮುಖ್ಯಸ್ಥರು ಮತ್ತು ಸಭಿಕರು ಪ್ರಧಾನಿ ಮೋದಿಯವರೊಂದಿಗೆ ನಕ್ಕಾಗ ಪ್ರಧಾನಿ ಮೋದಿ ಅವರು, "ಗುಜರಾತಿಯಾಗಿ ನಾನು ಕೂಡ ಅವರನ್ನು ತುಳಸಿ ಭಾಯ್ ಎಂದು ಕರೆಯುತ್ತೇನೆ" ಎಂದು ಘೋಷಿಸಿದರು.
From the land of Mahatma Gandhi, a Gujarati name has been given to my friend, @DrTedros. pic.twitter.com/jxWqZ9Ng6O
— Narendra Modi (@narendramodi) April 20, 2022
ಈ ಹೆಸರನ್ನು ಅವರಿಗೆ ಏಕೆ ಇಟ್ಟಿದ್ದೇನೆ ಎಂದು ಪ್ರಧಾನಿ ಮೋದಿ ವಿವರಿಸಿದರು. "ತುಳಸಿ ಎಂಬುದು ಆಧುನಿಕ ತಲೆಮಾರುಗಳಲ್ಲಿ ಮರೆಯುತ್ತಿರುವ ಸಸ್ಯವಾಗಿದೆ. ಆದರೆ ಇದನ್ನು ತಲೆಮಾರುಗಳಿಂದ ಪೂಜಿಸಲಾಗುತ್ತದೆ. ಇದನ್ನು ಮರೆಯಾಗದಂತೆ ಕಾಪಾಡಬೇಕಾಗಿದೆ. ಮದುವೆಯಲ್ಲಿ ತುಳಸಿ ಗಿಡವನ್ನು ಬಳಸಲಾಗುತ್ತದೆ. ತುಳಿಸಿ ಆಯುರ್ವೇದದೊಂದಿಗೆ ಸಂಬಂಧ ಹೊಂದಿದೆ" ಎಂದಿದ್ದಾರೆ.
Recommended Video
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications