Get Updates
Get notified of breaking news, exclusive insights, and must-see stories!

ತೌಕ್ತೆ ಚಂಡಮಾರುತ ದುರಂತ: ನಾಪತ್ತೆಯಾಗಿದ್ದ ತಗ್‌ಬೋಟ್‌ನ 7 ಸಿಬ್ಬಂದಿಯ ಶವ ಪತ್ತೆ

ಅಹಮದಾಬಾದ್, ಮೇ 23: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ತಗ್‌ಬೋಟ್‌ನ ಕ್ಯಾಪ್ಟನ್ ನಾಗೇಂದ್ರ ಕುಮಾರ್ ಸಹಿತ ಏಳು ಜನರ ಮೃತದೇಹ ಪತ್ತೆಯಾಗಿದೆ. ಗುಜರಾತ್‌ನ ವಲ್ಸದ್ ಪ್ರದೇಶದಲ್ಲಿ ಈ ಮೃತದೇಹಗಳು ಭಾನುವಾರ ದೊರೆತಿದೆ. ವರಪ್ರದಾ ಹೆಸರಿನ ತಗ್‌ಬೋಟ್‌ನಲ್ಲಿದ್ದ 11 ಮಂದಿ ಚಂಡಮಾರುತದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದರು.

ತೌಕ್ತೆ ಚಂಡಮಾರುತಕ್ಕೆ ಸಿಲುಕಿ P305 ಬಾರ್ಜ್ ಮುಳುಗಡೆಯಾಗಿತ್ತು. ಈ ಬೃಹತ್ ಬಾರ್ಜ್‌ಅನ್ನು ಎಳೆಯುತ್ತಿದ್ದ ವರಪ್ರದಾ ತಗ್‌ಬೋಟ್‌ನಲ್ಲಿದ್ದ 11 ಜನರು ಕೂಡ ಮುಂಬೈನ ಕರಾವಳಿ ಭಾಗದಿಂದ ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇದರಲ್ಲಿ ಏಳು ಮಂದಿ ಈಗ ಶವವಾಗಿ ಪತ್ತೆಯಾಗಿದ್ದಾರೆ.

ಮುಂಬೈ ಪೊಲೀಸರ ಜೊತೆಗೆ ವಲ್ಸದ್ ಪೊಲೀಸರು ಸಂಪರ್ಕದಲ್ಲಿದ್ದಾರೆ. ಶನಿವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದರೆ ಭಾನುವಾರ ಮೂರು ಮೃತದೇಹಗಳು ದೊರೆತಿವೆ. ಇನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ವಿವಿಧ ಭಾಗದಲ್ಲಿ 8 ಅಪರಿಚಿತ ಮೃತದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

Cyclone Tauktae: Captain of Tugboat and Other 6 Bodies Found in Valsad, Gujarat

ಕಳೆದ ಸೋಮವಾರ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿದ್ದ ಪಿ 305 ಬಾರ್ಜ್ ಇರುವ ಸ್ಥಳವನ್ನು ಶನಿವಾರ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರರು ಈ ಮೊದಲು ಮಾಹಿತಿಯನ್ನು ನೀಡಿದ್ದಾರೆ.

ಬಾರ್ಜ್ ಮುಳುಗಡೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 66ಕ್ಕೆ ಏರಿಕೆಯಾಗಿದ್ದು 9 ಮಂದಿಯ ಸುಳಿವು ಇನ್ನೂ ದೊರೆತಿಲ್ಲ. ಘಟನೆ ನಡೆದ ಸಂದರ್ಭದಲ್ಲಿ 261 ಜನರು ಬಾರ್ಜ್‌ನಲ್ಲಿದ್ದರು ಎಂದು ನೌಕಾಪಡೆ ಮಾಹಿತಿ ನೀಡಿದೆ. ಇದರಲ್ಲಿ 186 ಜನರನ್ನು ರಕ್ಷಣೆ ಮಾಡಲಾಗಿದೆ. ಬಾರ್ಜ್ P305ನಲ್ಲಿ ನಾಪತ್ತೆಯಾಗಿದ್ದ 9 ಜನರ ಜೊತೆಗೆ ವರಪ್ರದಾ ತಗ್ ಬೋಟ್‌ನಲ್ಲಿದ್ದ 11 ಜನರಿಗಾಗಿ ನೌಕಾಪಡೆ ಹಾಗೂ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಹುಡುಕಾಟವನ್ನು ನಡೆಸುತ್ತಿದ್ದರು. ವರಪ್ರದಾ ತಗ್‌ಬೋಟ್‌ನಲ್ಲಿ 13 ಜನರಿದ್ದು ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+