ಸೆಟ್ಟಾಪ್ ಬಾಕ್ಸ್ ಗೆ ಎಷ್ಟು ಹಣ ಕೊಟ್ಟಿದ್ದೀರಿ?

ಎಲ್ಲಾ ಗ್ರಾಹಕರಿಂದ ನೋ ಯುವರ್ ಕಸ್ಟಮರ್ (ಕೆವೈಸಿ) ಅರ್ಜಿ ಪಡೆದುಕೊಳ್ಳಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊಸ ಆದೇಶ ಹೊರಡಿಸಿದೆ. ಇದರಿಂದ ಹೆಚ್ಚಿನ ಹಣಕ್ಕೆ ಸೆಟ್ಟಾಪ್ ಬಾಕ್ಸ್ ಮಾರಿದ ಕೇಬಲ್ ಆಪರೇಟರ್ ಗಳು ಸಂಕಷ್ಟ ಅನುಭವಿಸುವ ಜೊತೆಗೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೆವೈಸಿ ಅರ್ಜಿಯಲ್ಲಿ ಗ್ರಾಹಕರು ಸೆಟ್ಟಾಪ್ ಬಾಕ್ಸ್ ಪಡೆಯಲು ನೀಡಿದ ಮೊತ್ತ, ಮಾಸಿಕವಾಗಿ ಅವರು ಪಾವತಿಸುತ್ತಿರುವ ಬಿಲ್, ಪಡೆಯುತ್ತಿರುವ ಚಾನೆಲ್ ಗಳು ಮುಂತಾದವುಗಳ ಮಾಹಿತಿ ನೀಡಬೇಕು. ಈಗ ಗ್ರಾಹಕರು ಸೆಟ್ಟಾಪ್ ಬಾಕ್ಸ್ ಖರೀದಿಸಿದ ಹಣದ ಮೊತ್ತವನ್ನು ಅರ್ಜಿಯಲ್ಲಿ ತುಂಬಬೇಕಾಗಿದೆ. ಇದು ಕೇಬಲ್ ಆಪರೇಟರ್ ಗಳ ಭಯಕ್ಕೆ ಕಾರಣವಾಗಿದೆ.
ವಿಜಯನಗರದ ಮಂಜುನಾಥ್ ಎನ್ನುವವರು ಸೆಟ್ಟಾಪ್ ಬಾಕ್ಸ್ ಪಡೆಯಲು 1,800 ರೂ. ನೀಡಿದ್ದಾರೆ. ಸದ್ಯ ಕೆವೈಸಿ ಅರ್ಜಿ ಭರ್ತಿ ಮಾಡುವಾಗ, ಕೇಬಲ್ ಆಪರೇಟರ್ ಗಳು 1,200ರೂ. ಭರ್ತಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಸೆಟ್ಟಾಪ್ ಬಾಕ್ಸ್ ನೀಡುವಾಗ ಕೇಬಲ್ ಆಪರೇಟರ್ ಗಳು ಹೆಚ್ಚಿನ ಹಣ ಪಡೆದಿದ್ದಾರೆ. ಸದ್ಯ ಗ್ರಾಹಕರು ಕೆವೈಸಿ ಫಾರ್ಮ್ ನಲ್ಲಿ ಆಪರೇಟರ್ ಗಳು ಹೇಳಿದ ಮೊತ್ತ ತುಂಬಲು ನಿರಾಕರಿಸುತ್ತಿದ್ದಾರೆ.
ನೀವು ಹೇಳಿದ ಮೊತ್ತ ಭರ್ತಿ ಮಾಡಬೇಕಾದರೆ, ಹೆಚ್ಚಿನ ಹಣ ಪಡೆದಿದ್ದನ್ನು ವಾಪಸ್ ಮಾಡಿ ಎಂದು ಗ್ರಾಹಕರು ಆಪರೇಟರ್ ಗಳಿಗೆ ಒತ್ತಾಯಿಸುತ್ತಿದ್ದಾರೆ. ಹೊಸ ನಿಯಮದಿಂದಾಗಿ ಹೆಚ್ಚಿನ ಹಣ ಪಡೆದ ಆಪರೇಟರ್ ಗಳು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. (ಸೆಟ್ ಟಾಪ್ ಬಾಕ್ಸ್ ಸಹವಾಸ ಸಾಕಪ್ಪಾ ಸಾಕು)
ಹೊಸದಾಗಿ ಸೆಟ್ಟಾಪ್ ಬಾಕ್ಸ್ ಪಡೆಯುತ್ತಿರುವ ಗ್ರಾಹಕರು ಕೆವೈಸಿ ಅರ್ಜಿ ಭರ್ತಿ ಮಾಡುವುದು ಕಡ್ಡಾಯವಾಗಿದೆ. ಕೇಬಲ್ ಟಿವಿ ಪ್ರಸಾರದಲ್ಲಿ ಪಾದರ್ಶಕತೆ ಕಾಯ್ದಕೊಳ್ಳಲು ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ನಿಗದಿಗೊಳಿಸಿದ ಎಂಆರ್ ಪಿ ದರಕ್ಕಿಂತ ಹೆಚ್ಚಿನ ಹಣಕ್ಕೆ ಬಾಕ್ಸ್ ಮಾರಿದ ಆಪರೇಟರ್ ಗಳು ಇದರಿಂದಾಗಿ ಪರದಾಡುತ್ತಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications