ಅಪ್ರಾಪ್ತರ ಜತೆ ಸೆಕ್ಸ್ ಪ್ರಕರಣ, ಪೋಪ್ ಮೌನ?

ಮಕ್ಕಳೊಂದಿಗೆ ಲೈಂಗಿಕತೆ ಹೊಂದಿದ ಆರೋಪದಲ್ಲಿ ವ್ಯಾಟಿಕನ್ ನ ಡಾಮಿನಿಕ್ ರಿಪಬ್ಲಿಕ್ ರಾಯಭಾರಿಯನ್ನು ಪೋಪ್ ವಜಾಗೊಳಿಸಿದ ಬಳಿಕ ಈ ರೀತಿ ಟೀಕೆಗಳು ವ್ಯಕ್ತವಾಗಿವೆ.
'ತನ್ನ ಎಲ್ಲ ಪೂರ್ವಾಧಿಕಾರಿಗಳಂತೆ ಪೋಪ್ ಫ್ರಾನ್ಸಿಸ್ ತಡವಾಗಿ, ರಹಸ್ಯವಾಗಿ ಹಾಗೂ ನಿರ್ಲಕ್ಷದಿಂದ ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಅಮೆರಿಕದ 'ಧಾರ್ಮಿಕ ಗುರುಗಳಿಂದ ಶೋಷಣೆಗೊಳಗಾದವರ ಸಂತ್ರಸ್ತ ಸಂಘ'ದ ನಿರ್ದೇಶಕಿ ಬಾರ್ಬರಾ ಡೋರಿಸ್ ಹೇಳಿದರು.
'ಮಾಧ್ಯಮ ಒತ್ತಡ ಬಂದಾಗ ಮಾತ್ರ ಕ್ಯಾಥಲಿಕ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಾರೆ'' ಎಂದು ಆಕೆ ಹೇಳಿಕೆಯೊಂದರಲ್ಲಿ ಆರೋಪಿಸಿದ್ದಾರೆ. 'ಅವರು ಕ್ರಮ ತೆಗೆದುಕೊಳ್ಳುವಾಗ ರಹಸ್ಯ ಕಾಯ್ದುಕೊಳ್ಳುತ್ತಾರೆ. ಈ ಪ್ರಕರಣದಲ್ಲೂ ಆರೋಪಗಳು, ಅಮಾನತು ಅಥವಾ ಅಮಾನತಿಗೆ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ'' ಎಂದು ಬಾರ್ಬರಾ ಡೋರಿಸ್ ಹೇಳಿದ್ದಾರೆ.
ಕಳೆದ ಆಗಸ್ಟ್ 21 ರಂದು ಸ್ಯಾನ್ ಡೋಮನಿಕೋದ ಜೊಸೆಫ್ ವೆಸೊಲೊವೊಸ್ಕಿ ಅವರನ್ನು ಗುಪ್ತವಾಗಿ ಅಮಾನತುಗೊಳಿಸಲಾಗಿತ್ತು. ವ್ಯಾಟಿಕನ್ ಅನೇಕ ನಿರ್ಣಯಗಳನ್ನು ಬಹಿರಂಗಗೊಳಿಸಲು ಹೆದರುತ್ತಿದೆ. ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಾಟಿಕನ್ ನ ವಕ್ತಾರ ಫೆಡೆರಿಕೋ ಲೊಮ್ಬಾರ್ಡಿ,ಧರ್ಮ ರಾಯಭಾರಿಗಳು ಲೈಂಗಿಕ ಶೋಷಣೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇತ್ತೀಚಿಗೆ ಅಮಾನತು ಮಾಡಿದ ಅಧಿಕಾರಿಗಳಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ (76) ಅವರು ಮಾ. 13,2013ರ ರಾತ್ರಿ ಆಯ್ಕೆಯಾಗಿದ್ದರು. ವ್ಯಾಟಿಕನ್ ಸಿಟಿಯಲ್ಲಿ ನೆರೆದಿದ್ದ ಸಹಸ್ರಾರು ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ ಕ್ರೈಸ್ತ ಧರ್ಮೀಯರು 266ನೇ ಧರ್ಮಗುರುವನ್ನು ಸ್ವಾಗತಿಸಿದ್ದರು.
ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು ಗರ್ಭನಿರೋಧಕ ಬಳಕೆಯನ್ನು ತಾವು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು ಬಣ್ಣಿಸಿದ್ದರು.
ಹಸ್ತಮೈಥುನ ಎಂಬುದು ಅತಿ ಸೂಕ್ಷ್ಮದ ಮತ್ತು ಅತಿರೇಕದ ರೋಗಿಷ್ಠ ಲಕ್ಷಣ. ಇನ್ನು ಸಲಿಂಗಕಾಮ ಸಹ ಅತಿರೇಕದ ಕ್ರಿಯೆ. ಅದು ಪಾಪಪ್ರಕೃತಿ. ಪತಿತಾವಸ್ಥೆಯದ್ದು. ಕಡೆಕುತನದ್ದು. ನಡತೆಗೆಟ್ಟಿದ್ದು. ಅದಕ್ಕೆಲ್ಲ ಮದುವೆಯೇ ಪರಿಪಾರ. ಅದನ್ನು ಯಾವುದೇ ವ್ಯಕ್ತಿಯಿಂದ ನಾಶಪಡಿಸಲು ಸಾಧ್ಯವಿಲ್ಲ. ಸಾವೊಂದೇ ಅದಕ್ಕೆ ಪರಿಹಾರ ಎಂದು ವ್ಯಾಟಿಕನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications