ಅಸಾರಾಂ ರೇಪ್ ಖಂಡಿಸಿ ಮರ್ಮಾಂಗ ಕತ್ತರಿಸಿಕೊಂಡ ಸಾಧು

ಸ್ವಯಂಘೋಚಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಬಾಲಕಿಯೊಬ್ಬಳು ರೇಪ್ ಕೇಸ್ ಹಾಕಿರುವುದನ್ನು ಅರಿತ ಬಾಬಾ ಪ್ರೇಮದಾಸ ಎಂಬ ಸದರಿ ಹಿಂದೂ ಸಂತ ಅಸಾರಾಮನ ಕುಕೃತ್ಯ ಅಕ್ಷಮ್ಯ. ಇದನ್ನು ನಾನು ತೀವ್ರವಾಗಿ ಖಂಡಿಸಿ/ ಪ್ರತಿಭಟಿಸುತ್ತೇನೆ ಎಂದು ಆವೇಶದಿಂದ ಕೂಗಾಡುತ್ತಾ ಆ ವೃದ್ಧ ಮಹಾಶಯ ತನ್ನ ಮರ್ಮಾಂಗಕ್ಕೆ ಕತ್ತರಿ ಇರುಕಿಸಿಯೇ ಬಿಟ್ಟರು.
ಅಮೇಠಿ ಜಿಲ್ಲೆಯ ಮಾಧೋಪುರ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ತೀವ್ರ ರಕ್ತಸ್ರಾವಕ್ಕೀಡಾದ ಬಾಬಾ ಪ್ರೇಮದಾಸ ಅವರನ್ನು ತಕ್ಷಣ ಅಮೇಠಿ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು/ಪೊಲೀಸರು ಹೇಳಿದ್ದಾರೆ.












Click it and Unblock the Notifications