ಚಿತ್ರಗಳಲ್ಲಿ: ಡ್ಯಾನ್ಸಿಂಗ್ ಸ್ಟಾರ್ ತನ್ನದೇ ಪ್ರತಿಮೆ ಜತೆ
ಬೆಂಗಳೂರು, ಸೆ.3: ದಕ್ಷಿಣ ಭಾರತದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಗಿ ಹೆಸರು ಮಾಡಿದ್ದ ಮೂಗೂರು ಸುಂದರಂ ಅವರ ಪುತ್ರ ಪ್ರಭುದೇವ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಮೇಲೆ ನಿರ್ದೇಶಕನ ಕ್ಯಾಪ್ ಧರಿಸಿದರು. ತಮಿಳಿನಲ್ಲಿ ಕೆಲವು ಚಿತ್ರ ನಿರ್ದೇಶಿಸಿದ ಹಿನ್ನೆಲೆ ಹೊಂದಿದ್ದ ಪ್ರಭುದೇವ ಸದ್ಯಕ್ಕೆ ಬಾಲಿವುಡ್ ನಲ್ಲಿ ಯಶಸ್ವಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಪ್ರಭುದೇವ ಅವರ ಡ್ಯಾನ್ಸ್, ನಿರ್ದೇಶನದ ಚಿತ್ರಗಳ ಕ್ರೇಜ್ ಮುಂದುವರೆದಿದೆ. ಲೋನಾವಾಲದಲ್ಲಿ ನಟ, ನಿರ್ದೇಶಕ, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರ ಪ್ರತಿರೂಪದಂತಿರುವ ಮೇಣದ ಪ್ರತಿಮೆ ಜತೆ ಪ್ರಭುದೇವ ಅವರು ಪೋಸ್ ಕೊಟ್ಟ ಚಿತ್ರ ಇಲ್ಲಿದೆ ನೋಡಿ
ಉಳಿದಂತೆ, ಸ್ವಯಂ ಘೋಷಿತ ಅಸಾರಾಮ್ ಬಾಪು ಬಂಧನದಿಂದ ರೊಚ್ಚಿಗೆದ್ದಿರುವ ಅವರ ಅಭಿಮಾನಿಗಳ ಪ್ರತಿಭಟನೆ, ಕಡಪದಲ್ಲಿ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುಣ್ಯತಿಥಿ ಸ್ಮರಣೆ, ಮುಂಬೈ ಫ್ಯಾಷನ್ ಜಗತ್ತಿನ ಚಿತ್ರಗಳು, ನರ್ಮದಾ ಬಚಾವೋ ಆಂದೋಲನ, ಸೋಮನಾಥದಲ್ಲಿ ಪೂಜೆ ಸಲ್ಲಿಸಿದ ನರೇಂದ್ರ ಮೋದಿ ಸೇರಿದಂತೆ ಇನ್ನಷ್ಟು ಚಿತ್ರಗಳಿವೆ ನೋಡಿ...

ಪ್ರತಿಮೆ ಜತೆ ಪ್ರಭು
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರ ಪ್ರತಿರೂಪದಂತಿರುವ ಮೇಣದ ಪ್ರತಿಮೆ ಜತೆ ಪ್ರಭುದೇವ

ರಾಜಶೇಖರ ರೆಡ್ಡಿ ಸ್ಮರಣೆ
ಕಡಪದಲ್ಲಿ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ನಾಲ್ಕನೇ ಪುಣ್ಯತಿಥಿ ಸ್ಮರಣೆ ಕಾರ್ಯಕ್ರಮದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರಿ ಶರ್ಮಿಳಾ ಪಾಲ್ಗೊಂಡಿದ್ದರು.

ಕೊಚ್ಚಿಯಲ್ಲಿ
ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ದೈತ್ಯ ಯುದ್ಧ ಸಾರಿಗೆ ವಿಮಾನ
ಗಾಜಿಯಾಬಾದ್: ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ ಅವರು MoS ಜಿತೇಂದ್ರ ಕುಮಾರ್ ಅವರು ಯುದ್ಧ ವಿಮಾನ ಸಿ-17 ವಾಯುಪಡೆಗೆ ಸೇರ್ಪಡೆಗೊಂಡ ನಂತರ ಕಾಕ್ ಪಿಟ್ ನಲ್ಲಿ ಕಾಣಿಸಿಕೊಂಡರು.

ನರೇಂದ್ರ ಮೋದಿ ಪೂಜೆ
ಸೋಮನಾಥದಲ್ಲಿ ಪರಮಶಿವನಿಗೆ ಅಭಿಷೇಕ ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಮುಂಬೈನಲ್ಲಿ
ಬಾಲಿವುಡ್ ನಟಿ ಮಲೈಕಾ ಅರೋರಾ ಖಾನ್ ಅವರು ಚಾರಿಟಿ ಅಭಿಯಾನ 'ಥಿವಾನ್ ಎಕ್ಸಲೆನ್ಸ್ ಕೇರ್ಸ್ ಗಾಗಿ ಬೆಕ್ಕಿನ ನಡಿಗೆ ಇಟ್ಟರು

ಸಂಸತ್ ಬಳಿ
ನವದೆಹಲಿ: ಸಂಸತ್ ಬಳಿಯ ವಿಜಯ್ ಚೌಕದಲ್ಲಿ ನಿಂತಿದ್ದ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಸೋಮವಾರ ನಡೆಯಿತು. PTI Photo by Manvender Vashist

ಚೆನ್ನೈನಲ್ಲಿ
ಶಾಲಾ ಮಕ್ಕಳು ವಿಜ್ಞಾನ ಎಕ್ಸೋ 2013ರಲ್ಲಿ ಪಾಲ್ಗೊಂಡು ಪ್ರಾತ್ಯಕ್ಷಿಕೆ ನೀಡಿದರು.

ಚೆನ್ನೈನ ಹಕ್ಕಿಗಳು
ಚೆನ್ನೈ: Guindy ರಾಷ್ಟ್ರೀಯ ಉದ್ಯಾನವನದಲ್ಲಿ ಹಕ್ಕಿಗಳ ಕಲರವ

ಡಾರ್ಜಲಿಂಗ್ ನಲ್ಲಿ
ಗೋರ್ಖಾಲ್ಯಾಂಡ್ ಗಾಗಿ ಒತ್ತಾಯಿಸಿ ಕರೆಯಲಾಗಿದ್ದ ಬಂದ್ ಸಂದರ್ಭದಲ್ಲಿ ಕಂಡು ಬಂದ ದೃಶ್ಯ












Click it and Unblock the Notifications