ಅನಿತಾ, ರಮ್ಯಾ ಭವಿಷ್ಯ ಹೇಳಿದ ಶಿವಾಜಿನಗರದ ಇಲಿ!
ಬೆಂಗಳೂರು, ಆಗಸ್ಟ್ 2: ಶಿವಾಜಿನಗರದಲ್ಲಿ ಜ್ಯೋತಿಷಿಯೊಬ್ಬರು ಜನರ ಭವಿಷ್ಯ ಹೇಳಲು ಇಲಿಯೊಂದನ್ನು ಸಾಕಿಕೊಂಡಿದ್ದಾರೆಂದೂ, ಜನ ಮುಗಿಬಿದ್ದು ಇಲಿ ಶಾಸ್ತ್ರ ಕೇಳುತ್ತಿದ್ದಾರೆಂದು 20 ದಿನಗಳ ಹಿಂದೆ ಓದಿ ತಿಳಿದುಕೊಂಡಿರಿ.
ಶಿವಾಜಿನಗರ ಬಿಟಿಎಸ್ ಬಸ್ ಸ್ಟಾಂಡ್ ಸಮೀಪ ಬೀದಿ ಬದಿ ತಮ್ಮ ಮೂಷಿಕನಿಗೆ ಕಡಲೆ ಚೆರ್ಪು ತಿನ್ನಿಸುತ್ತಾ ಭವಿಷ್ಯ ನುಡಿಯುವ 68 ವರ್ಷದ ಗೋವಿಂದರಾಜು ಅವರು ಹಾಲಿ ಲೋಕಸಭಾ ಉಪಚುನಾವಣೆಯ ಫಲಿತಾಂಶದ ಬಗ್ಗೆಯೂ ತಮ್ಮ 'ಗಣೇಶ'ನಿಂದ ಭವಿಷ್ಯ ಹೇಳಿಸಿದ್ದಾರೆ.
ಗಮನಿಸಿ- ಇದು ಮೂಷಿಕ ನುಡಿದಿರುವ ಭವಿಷ್ಯ. ಇದರ ಸತ್ಯಾಸತ್ಯತೆ ಆ ಗಣೇಶನಿಗೇ ಸಲ್ಲುತ್ತದೆ. ಅಧಿಕೃತ ಫಲಿತಾಂಶಕ್ಕಾಗಿ ನೀವು ಇನ್ನೂ 48 ಗಂಟೆ ಕಾಯಬೇಕು (ಶನಿವಾರದವರೆಗೂ).

ರಮ್ಯಾ, ಅನಿತಾ, ಸುರೇಶ್, ಪುಟ್ಟರಾಜು: ಬೆಟ್ಟಿಂಗ್ ಶುರು
ಚುನಾವಣೆ ಬಳಿಕ ಇದೀಗ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಭಾರಿ ಬೆಟ್ಟಿಂಗ್ ಶುರುವಾಗಿದೆ. ರಮ್ಯಾ, ಅನಿತಾ ಕುಮಾರಸ್ವಾಮಿ, ಡಿಕೆ ಸುರೇಶ್ ಮತ್ತು ಸಿಎಸ್ ಪುಟ್ಟರಾಜು ನಡುವಣ ನೇರ ಕದನ ಇದಾಗಿದೆ. ಹಾಗಾಗಿ ಇವರುಗಳ ಹೆಸರಿನಲ್ಲಿ ಜನ ಬಾಜಿ ಕಟ್ಟಿ ಅಧಿಕೃತ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಗೋವಿಂದರಾಜು 'ಗಣೇಶ' ನುಡಿದಿರುವ ಭವಿಷ್ಯ
ಇದೇ ವೇಳೆ, ನಿನ್ನೆ ಲೋಕಸಭಾ ಉಪಚುನಾವಣೆ ಮಗಿಯುತ್ತಿದ್ದಂತೆ ಜನಶ್ರೀ ನ್ಯೂಸ್ ಚಾನೆಲ್ಲಿನವರು ಸದರಿ ಮೂಷಿಕ ಮಹಾರಾಜನಿಂದ ಚುನಾವಣೆಯ ಫಲಿತಾಂಶವೇನು ಎಂದು ಕೇಳಿದ್ದಾರೆ. ಅದಕ್ಕೆ ಗೋವಿಂದರಾಜುವಿನ 'ಗಣೇಶ' ನುಡಿದಿರುವ ಭವಿಷ್ಯ ಹೀಗಿದೆ:

ಅನಿತಾ ಕುಮಾರಸ್ವಾಮಿಗೆ ಅಪಜಯ
ಅನಿತಾ ಕುಮಾರಸ್ವಾಮಿ ಅವರದ್ದು ಮೇಷ ರಾಶಿ. ಅವರ ಕುಂಡಲಿ ಪ್ರಭಾವ ವ್ಯತಿರಿಕ್ತವಾಗಿದೆ. ಆಕೆಗೆ ಗ್ರಹಗತಿ ಚೆನ್ನಾಗಿಲ್ಲ. ಹಾಗಾಗಿ ಅನಿತಾ ಕುಮಾರಸ್ವಾಮಿ ಸೋಲು ಖಚಿತ.

ದಿವ್ಯಸ್ಪಂದನಗೆ ದಿವ್ಯ ಗೆಲುವು
ರಮ್ಯಾದು ತುಲಾ ರಾಶಿ. ಆಕೆಯ ಗ್ರಹಗತಿಗಳು ಉತ್ತಮವಾಗಿವೆ. ಗುರು ಬಲಗಳು ಜೋರಾಗಿವೆ. ಹಾಗಾಗಿ ರಮ್ಯಾ ಗೆಲ್ಲುವುದು ಖಚಿತ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications