ಚಿತ್ರಗಳಲ್ಲಿ: ಬ್ರಾಹ್ಮಣರಿಗೆ ಉಪಾಕರ್ಮ ಸಂಭ್ರಮ
ಬೆಂಗಳೂರು, ಆ.20: ರಕ್ಷಾಬಂಧನ ಮತ್ತು ಉಪಾಕರ್ಮ ಎರಡು ಒಂದೇ ದಿನ ಬಂದಿದೆ, ಜತೆಗೆ ಋಗ್ ಹಾಗೂ ಯಜುರ್ವೇದ ಶಾಖೆಗಳ ಬ್ರಾಹ್ಮಣರು ಮಂಗಳವಾರ ಶ್ರದ್ಧಾ ಭಕ್ತಿಗಳಿಂದ ಉಪಾಕರ್ಮ ಆಚರಿಸಿ ಗಾಯತ್ರಿ ಮಂತ್ರ ಜಪಿಸಿದ್ದಾರೆ. ಉಪಾಕರ್ಮ ಆಚರಣೆ ಚಿತ್ರಗಳು ಇಲ್ಲಿವೆ. ಉಪಾಕರ್ಮ ಕುರಿತ ಇನ್ನಷ್ಟು ಮಾಹಿತಿ ಓದಿ
ಉತ್ತರ ಭಾರತದಲ್ಲಿ ಸೋಮವಾರದ ಶುಭದಿನದಂದು ಅಭಿಷೇಕ ಪ್ರಿಯ ಪರಮಶಿವನಿಗೆ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸಲಾಗಿದೆ. ಜೇಮ್ಶೆಡ್ ಪುರ, ಅಲಹಾಬಾದ್ ನಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಶ್ರಾವಣ ತಿಂಗಳ ಸೋಮವಾರ ಪೂಜೆ ಸಲ್ಲಿಸಿದ್ದಾರೆ.ಮಹಿಳೆ ತಾವು ತಂದಿದ್ದ ಶುದ್ಧ ಜಲ, ಕ್ಷೀರ ಎಲ್ಲವನ್ನು ಲಿಂಗರೂಪಿ ಶಿವನ ನೆತ್ತಿಯ ಮೇಲೆ ಸುರಿದು ಕೃತಾರ್ಥರಾಗಿದ್ದಾರೆ. ಶಿವ ಪೂಜೆಯ ಚಿತ್ರಗಳನ್ನು ತಪ್ಪದೇ ನೋಡಿ...
ಈರುಳ್ಳಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಈಗ ಯುಪಿಎ ನಾಯಕರ ವಿರುದ್ಧ ತಿರುಗಿದ್ದು,ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಭೋಪಾಲ್ ನ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.
ರೊಲ್ಸ್ ರಾಯ್ಸ್ ಹೊಸ ಕಾರು, ಗುವಾಹಟಿಯಲ್ಲಿ ಪ್ರಾಣಿ ಸಂಗ್ರಹಾಲಯದಲ್ಲಿ ಕಂಡ ಜಿಂಕೆ ಹಾಗೂ ಮರಿ, ಇಂಡಿಯನ್ ಬಾಡ್ಮಿಂಟನ್ ಲೀಗ್ ನಲ್ಲಿ ಸೈನಾ ನೆಹ್ವಾಲ್, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿ, ಬೆಂಗಳೂರಿನಲ್ಲಿ ಕುಸಿದ ಕಟ್ಟಡ, ಬಿಹಾರದ ರೈಲು ದುರಂತ, ಪ್ರಿಯಾಂಕಾ ಛೋಪ್ರಾ ಹೊಸ ಲುಕ್, ನ್ಯೂಯಾರ್ಕ್ ನಲ್ಲಿ ವಿದ್ಯಾ ಬಾಲನ್ ಮುಂತಾದ ಚಿತ್ರಗಳು ಇಲ್ಲಿವೆ ನೋಡಿ...

ಅಹಮದಾಬಾದಿನಲ್ಲಿ
ಇಲ್ಲಿನ ನಾರಾಯಣ ಘಟ್ಟದಲ್ಲಿ ಬ್ರಾಹ್ಮಣರು ಹೊಸ ಜನಿವಾರ ಧರಿಸಿ ಗಾಯತ್ರಿ ಮಂತ್ರ ಜಪಿಸಿ ಉಪಾಕರ್ಮ ಆಚರಿಸಿದರು.

ಕೊಯಮತ್ತೂರಿನಲ್ಲಿ
ಸಾಮೂಹಿಕ ಉಪಾಕರ್ಮ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯದವರು ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ಆಚರಿಸಿದರು.

ಜೇಮ್ಶೆಡ್ ಪುರ
ಮಹಿಳೆ ತಾವು ತಂದಿದ್ದ ಶುದ್ಧ ಜಲ, ಕ್ಷೀರ ಎಲ್ಲವನ್ನು ಲಿಂಗರೂಪಿ ಶಿವನ ನೆತ್ತಿಯ ಮೇಲೆ ಸುರಿದು ಕೃತಾರ್ಥರಾಗಿದ್ದಾರೆ

ಅಲಹಾಬಾದ್ ನಲ್ಲಿ
ಅಲಹಾಬಾದ್ ನಲ್ಲಿ ಹಿಂದೂ ಭಕ್ತರು ಪರಮ ಶಿವನಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ಭೋಪಾಲ್ ನಲ್ಲಿ
ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಈರುಳ್ಳಿ ಬೆಲೆ ಏರಿಕೆ ವಿರೋಧಿಸಿ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು,

ಹೊಸ ಕಾರು ನೋಡಿ
ನವದೆಹಲಿ: ರೋಲ್ಸ್ ರಾಯ್ಸ್ ನ ಹೊಸ ಕಾರು Wraith ಅನಾವರಣಗೊಳಿಸಿದ ರೋಲ್ಸ್ ರಾಯ್ಸ್ ಏಷ್ಯಾ ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕ ಹರ್ ಫ್ರೆಡ್ ಹಸೆನೊಹ್ರಲ್

ಅಮ್ಮ ಮಗು
ಗುವಾಹಟಿಯ ಅಸ್ಸಾಂ ರಾಜ್ಯ ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆ ತನ್ನ ಮಗುವಿಗೆ ಹಾಲುಣಿಸುತ್ತಿರುವ ದೃಶ್ಯ

ವೆಲ್ಲೂರು, ತಮಿಳುನಾಡು
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಲ್ಲೂರಿನ ಜೈಲಿನಲ್ಲಿರುವ ಪ್ರಮುಖ ಆರೋಪಿ ನಳಿನಿ ಅವರನ್ನು ಜೈಲಿನಿಂದ ಕೋರ್ಟಿಗೆ ಕರೆದೊಯ್ಯುವಾಗ ಸಿಕ್ಕ ಚಿತ್ರ

ಕೋಲ್ಕತ್ತಾದಲ್ಲಿ
ಮಳೆಗಾಲದಲ್ಲಿ ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಕೊಡೆಗಳ ನಡುವೆ ಜನರನ್ನು ಹುಡುಕುವುದು ಸಾಮಾನ್ಯ ದೃಶ್ಯ

ಎಂಎಸ್ ಧೋನಿ
ಎಂಎಸ್ ಧೋನಿ ಖಾಸಗಿ ಕಾರ್ಯಕ್ರಮವೊಂದರಲ್ಲಿ FITSOUL ಉತ್ಪನ್ನ ಪ್ರಚಾರದಲ್ಲಿ ತೊಡಗಿದ್ದಾರೆ.,

ನ್ಯೂಯಾರ್ಕ್ ನಲ್ಲಿ
ನ್ಯೂಯಾರ್ಕ್ ನಲ್ಲಿ ನಟಿ ವಿದ್ಯಾಬಾಲನ್ ಅವರು ಇತ್ತೀಚೆಗೆ ನಡೆದ ಭಾರತದ ಸ್ವಾತಂತ್ರೋತ್ಸವ ಪರೇಡ್ ನಲ್ಲಿ

ರೈಲಿಗೆ ಬೆಂಕಿ
ರಾಜ್ ರಾಣಿ ಎಕ್ಸ್ ಪ್ರೆಸ್ ದುರಂತದ ನಂತರ ರೈಲಿಗೆ ಬೆಂಕಿ

ರೈಲು ದುರಂತ
ರಾಜ್ ರಾಣಿ ಎಕ್ಸ್ ಪ್ರೆಸ್ ದುರಂತದಲ್ಲಿ ಬಲಿಯಾದವರ ಕುಟುಂಬದ ರೋದನ

ಕಟ್ಟಡ ಕುಸಿತ
ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಸೋಮವಾರ ಕುಸಿತಗೊಂಡಿತ್ತು

ಪ್ರಿಯಾಂಕಾ ಛೋಪ್ರ ಹೊಸ ಲುಕ್
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು "Our Girls Our Pride" ಅಭಿಯಾನದ ಅಂಗವಾಗಿ ಹೆಣ್ಣು ಶಿಶು ರಕ್ಷಣೆಗಾಗಿ ನಡೆದ ಕಾರ್ಯಕ್ರಮದಲ್ಲಿ ಕಂಡಿದ್ದು ಹೀಗೆ

ಮುಂಬೈನಲ್ಲಿ
ಇಂಡಿಯನ್ ಬಾಡ್ಮಿಂಟನ್ ಲೀಗ್ ನಲ್ಲಿ ಹೈದರಾಬ್ ಪರ ಆಡುತ್ತಿರುವ ಸೈನಾ ನೆಹ್ವಾಲ್ ಅವರು ಪುಣೆ ಪಿಸ್ಟನ್ಸ್ ವಿರುದ್ಧದ ಪಂದ್ಯದಲ್ಲಿ ಕಂಡು ಬಂದಿದ್ದು ಹೀಗೆ












Click it and Unblock the Notifications