ಸೋಧಿಗೆ ಖೇಲ್ ರತ್ನ, ಕೊಹ್ಲಿಗೆ ಅರ್ಜುನ ಪ್ರಶಸ್ತಿ?
ನವದೆಹಲಿ, ಆ.13: ವಿಶ್ವಕಪ್ ಶೂಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶೂಟರ್ ರೊಂಜನ್ ಸೋಧಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಗೆ ಅರ್ಜುನ ಪ್ರಶಸ್ತಿ ಸೇರಿದಂತೆ ಕ್ರೀಡಾಕ್ಷೇತ್ರದ 14 ಜನರನ್ನು ಆಯ್ಕೆ ಸಮಿತಿ ಪ್ರಶಸ್ತಿಗೆ ಹೆಸರಿಸಿದೆ.
ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚುಗಳಿಸಿರುವ ಭಾರತದ ಪ್ರಥಮ ಆಟಗಾರ್ತಿ ಬ್ಯಾಡ್ಮಿಂಟನ್ ನ ಉದಯೋನ್ಮುಖ ತಾರೆ ಪಿ.ವಿ.ಸಿಂಧು ಕೂಡ ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2010ರ ಕಾಮನ್ ವೆಲ್ತ್ ಕ್ರೀಡಾಕೂಟ ಪದಕ ವಿಜೇತೆ ರೆಂಜೀತ್ ಮಹೇಶ್ವರಿ, ಗಂಗ್ ಜೀತ್ ಭುಲ್ಲರ್ ಅವರು ಕೂಡ 2012 ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶೇಷವೆಂದರೆ ಖೇಲ್ ರತ್ನ ಪ್ರಶಸ್ತಿ ಮೂರು ಬಾರಿಯೂ ಶೂಟರ್ ಗಳಿಗೆ ಸಂದಿದೆ. 2011ರ ಪ್ರಶಸ್ತಿ ಗಗನ್ ನಾರಂಗ್ ಪಾಲಾಗಿದ್ದರೆ, 2012ರ ಪ್ರಶಸ್ತಿ ವಿಜಯ್ ಕುಮಾರ್ ಗೆ ಸಂದಿತ್ತು.

ಕವಿತಾ ಚಾಹಲ್, ಕುಸ್ತಿಪಟು ಯೋಗೀಶ್ವರ್ದತ್ ಜೋತ್ಸ್ನಾ ಚಿನ್ನಪ್ಪ, ಸಾಬಾ ಅಂಜುಮ್, ಮೌಮಾದಾಸ್, ನೇಹಾರತಿ, ರಾಜಕುಮಾರಿ ರಾಥೋಡ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಿಲ್ಲುಗಾರ ಚೆಕ್ರೋವೋಲು ಸ್ವುರೋ ಮತ್ತಿತರರು.
ಟ್ರಾಪ್ ಶೂಟರ್ ರೊಂಜನ್ ಸೋಧಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರೆ. ಅರ್ಜುನ ಪ್ರಶಸ್ತಿಗೆ ವಿರಾಟ್ ಕೊಹ್ಲಿ(ಕ್ರಿಕೆಟ್), ಚೆಕ್ರೋವೊಲು ಸ್ವುರೊ(ಆರ್ಚರಿ) ರಂಜಿತ್ ಮಹೇಶ್ವರಿ(ಅಥ್ಲೆಟಿಕ್ಸ್), ಪಿ.ವಿ.ಸಿಂಧು(ಬ್ಯಾಡ್ಮಿಂಟನ್), ಕವಿತಾ ಚಹಾಲ್(ಬಾಕ್ಸಿಂಗ್), ರೂಪೇಶ್ ಶಾ(ಸ್ನೂಕರ್), ಗಗನ್ ಜೀತ್ ಭುಲ್ಲಾರ್(ಗಾಲ್ಫ್), ಸಾಬಾ ಅಂಜುಮ್(ಹಾಕಿ), ರಾಜಕುಮಾರಿ ರಾಥೋಡ್(ಶೂಟಿಂಗ್), ಜೋತ್ಸ್ನಾ ಚಿನ್ನಪ್ಪ(ಸ್ಕ್ಯಾಷ್), ಮೌಮಾದಾಸ್(ಟೇಬಲ್ ಟೆನಿಸ್) ನೇಹಾ ರಥಿ(ಕುಸ್ತಿ), ಧರ್ಮೇಂದ್ರ ದಲಾಲ್ (ಕುಸ್ತಿ), ಅಮಿತ್ ಕುಮಾರ್ ಸರೋಹಾ(ಪ್ಯಾರಾ ಸ್ಪೋರ್ಟ್ಸ್) ಇವರ ಹೆಸರು ಪ್ರಶಸ್ತಿಗೆ ಶಿಫಾರಸು ಗೊಂಡಿದೆ. (ಪಿಟಿಐ)
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications