ಈ ಚೇಳು ಕಚ್ಚುವುದಿಲ್ಲ, ಕಚ್ಚಿದ್ರೆ ವಿಷ ಏರುವುದಿಲ್ಲ!
ಯಾದಗಿರಿ, ಆ. 12 : ನಾಗರ ಪಂಚಮಿ ಹಬ್ಬದಂದು ಮನೆಯಲ್ಲಿ ಪುಟ್ಟದಾಗಿ ಮಾಡಿದ ಮಣ್ಣಿನ ನಾಗಪ್ಪನಿಗೆ, ನಾಗರ ಕಲ್ಲಿಗೆ, ಹುತ್ತಕ್ಕೆ ಹಾಲನೆರೆದು, ನಮ್ಮ ಮೇಲೆ ನಿನ್ನ ಕೃಪೆ ಇರಲಪ್ಪ ಎಂದು ಬೇಡಿಕೊಳ್ಳುವವರೆ ಎಲ್ಲ. ವಿಸ್ಮಯವೆಂಬಂತೆ ಅಲ್ಲಲ್ಲಿ ಸಾಕ್ಷಾತ್ ನಾಗರಹಾವು ಕಾಣಿಸಿಕೊಂಡು ಜನರಲ್ಲಿ ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾಗರಹಾವು ಹಾಲು ಕುಡಿಯುವುದಿಲ್ಲ ಎಂದು ತಿಳಿದಿದ್ದರೂ ಹಾಲನೆರೆಯಲು ಮುಂದಾಗುತ್ತಾರೆ.
ಶ್ರಾವಣ ಮಾಸ ಶುಕ್ಲಪಕ್ಷದ ಪಂಚಮಿಯಂದು ನಾಗರಮೂರ್ತಿಗೆ ಹಾಲನೆರೆಯುವುದು ಸರ್ವೇಸಾಮಾನ್ಯ. ಆದರೆ ಅಂದಿನ ದಿನ ಜೀವಂತ ಚೇಳಿನ ಪೂಜೆ ಮಾಡುವುದನ್ನು, ಅವುಗಳ ಜೊತೆ ಸಂಭ್ರಮಿಸುವುದನ್ನು ನೀವು ನೋಡಿದ್ದಿರಾ? ಇಲ್ಲ ಅಲ್ಲವೆ? ಯಾಕೆಂದರೆ ಚೇಳು ಎಂದರೆ ನಾವು ಮಾರುದ್ದ ದೂರ ಜಿಗಿಯುತ್ತೇವೆ. ಆದರೆ, ಯಾದಗಿರಿಯ ಜನರು ಜೀವಂತ ಚೇಳಿನ ಜೊತೆ ಆಟವಾಡುವ ವಿಸ್ಮಯವನ್ನು ನೋಡಲೇಬೇಕು.
ಯಾದಗಿರಿ ತಾಲ್ಲೂಕಿನ ಕಂದಕೂರು ಗ್ರಾಮದ ಸುತ್ತಲೂ ಹಚ್ಚ ಹಸುರಿನ ಬೆಟ್ಟ-ಗುಡ್ಡ. ಆ ಬೆಟ್ಟದ ಮಧ್ಯೆ ಕೆಂಪು ಗುಡ್ಡ. ಅದರ ಮೇಲಿರುವುದೇ ಕೊಂಡಮಾಯಿ ದೇವಾಲಯ. ಅತೀ ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳು ಬರುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ. ತಮಾಷೆ ಅಂದ್ರೆ, ಬೇರೆ ದಿನಗಳಲ್ಲಿ ಇಲ್ಲಿ ಚೇಳುಗಳು ಇರುವುದಿಲ್ಲ.
ಚೇಳುಗಳನ್ನು ಕಂಡರೆ ಯಾರಿಗೆ ಭಯವಾಗುವುದಿಲ್ಲ ಹೇಳಿ? ಆದರೆ ಇಲ್ಲಿನ ಜನರಿಗೆ ಭಯವೆಂಬುದೇ ಇಲ್ಲ. ಆ ಚೇಳುಗಳನ್ನು ಆಟಿಕೆ ಸಾಮಾನುಗಳೇನೋ ಎಂಬಂತೆ ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಕೆಲವೊಬ್ಬರು ನಾಲಿಗೆ ಮೇಲೆ ಕೂಡ ಚೇಳನ್ನು ಹರಿಯಬಿಡುವುದನ್ನು ನೋಡಿ ಮೈ ಝುಂ ಅನ್ನದೆ ಇರದು. ಆದರೆ, ಇದೆಲ್ಲ ದೇವಿಯ ಕೃಪೆ ಎಂದು ನಾಗರಿಕರು ನಿರ್ಭೀತಿಯಿಂದ ವರ್ತಿಸುತ್ತಾರೆ. ಈ ವಿಸ್ಮಯದ ಸುದ್ದಿಚಿತ್ರ ಇಲ್ಲಿದೆ ನೋಡಿರಿ.

ಮೈ, ನಾಲಿಗೆ ಮೇಲೆ ವಿಷಕಾರಿ ಚೇಳು
ಕರ್ನಾಟಕ ಅಲ್ಲದೇ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಹೀಗೆ ಬಂದಂತಹ ಭಕ್ತಾದಿಗಳು ಚೇಳುಗಳನ್ನು ಪೂಜೆ ಮಾಡುವುದರ ಜೊತೆಗೆ ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಾರೆ. ಅಲ್ಲದೇ ಮೈ, ನಾಲಿಗೆ ಮೇಲೆ ವಿಷಕಾರಿ ಚೇಳುಗಳನ್ನು ಹರಿಸಿಕೊಂಡು ಸಂತಸ ಪಡುತ್ತಾರೆ.

ಎಲ್ಲ ಕೊಂಡಮಾಯಿ ದೇವಿ ಕೃಪೆ
ವಿಷಕಾರಿ ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ (ಹಳದಿ ಬಣ್ಣ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತೆ ಎಂಬುವುದು ಭಕ್ತರ ನಂಬಿಕೆ. ಹಾಗಾಗಿ ಇಲ್ಲಿನ ಭಕ್ತರಿಗೆ ಹೆದರಿಕೆ ಎನ್ನುವ ಮಾತೇ ಇಲ್ಲ.

ಕೆಂಪು ಗುಡ್ಡದಲ್ಲಿ ಮಾತ್ರ ಚೇಳುಗಳು
ಕಂದಕೂರು ಸುತ್ತಲಿನ ಈ ಗುಡ್ಡದ ಮೇಲಿರುವ ಯಾವುದೇ ಕಲ್ಲು ತೆಗೆದರೂ ಚೇಳುಗಳು ಕಾಣುತ್ತವೆ. ಸೂತ್ತಲೂ ಗುಡ್ಡಗಳು ಇದ್ದರೂ ಈ ಕೆಂಪು ಗುಡ್ಡದಲ್ಲಿ ಮಾತ್ರ ಚೇಳುಗಳು ದೊರೆಯುತ್ತವೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳ ಆರಾಧ್ಯ ಮಾಡುತ್ತಾರೆ.

ಮಕ್ಕಳಿಗೆ ಚೇಳುಗಳು ಕಚ್ಚುವುದಿಲ್ವಂತೆ
ಚಿಕ್ಕ ಮಕ್ಕಳು ಕೈಯಲ್ಲಿ ವಿಷಕಾರಿ ಚೇಳುಗಳನ್ನು ಹಿಡಿಯುತ್ತಾರೆ. ಆ ಮಕ್ಕಳಿಗೆ ಚೇಳುಗಳು ಕಚ್ಚುವುದಿಲ್ವಂತೆ. ಎಲ್ಲಾ ಕಡೆ ನಾಗರ ಪಂಚಮಿಯಂದು ಕಲ್ಲು ನಾಗಪ್ಪನಿಗೆ ಹಾಲೆರೆಯುತ್ತಾರೆ. ಆದರೆ ಕೊಂಡಮಾಯಿ ದೇವಸ್ಥಾನದಲ್ಲಿ ಮಾತ್ರ ಚೇಳುಗಳ ಮೂರ್ತಿಗೆ ವಿಶೇಷವಾದ ಪೂಜೆ ಮಾಡಿದ ಚೇಳುಗಳನ್ನು ಹಿಡಿದು ಸಂಭ್ರಮಿಸುತ್ತಾರೆ.

ಮಾನವ ಸ್ನೇಹಿ ಚೇಳುಗಳೇ ವಿಸ್ಮಯ
ಸಾಮಾನ್ಯವಾಗಿ ಕೆಂಪು ಮಣ್ಣು ಮತ್ತು ಬೆಟ್ಟಗಳಲ್ಲಿ ಚೇಳುಗಳು ಕಾಣ ಸಿಗುತ್ತವೆ. ಒಂದೇ ದಿನದಂದು ಇಷ್ಟೊಂದು ಆಗಾದ ಪ್ರಮಾಣದಲ್ಲಿ ದೇವಸ್ಥಾನದ ಸುತ್ತಲು ಸಿಗುವುದು ಅಚ್ಚರಿಯಾದರೆ, ವಿಷಜಂತು ಎನ್ನುವ ಚೇಳುಗಳು ಕಚ್ಚಿದರು ಇಲ್ಲಿ ವಿಷ ಎರುವುದಿಲ್ಲ ಜೊತೆಗೆ ಮಾನವ ಸ್ನೇಹಿಯಾಗಿ ವರ್ತಿಸುವುದು ನೋಡಿದರೆ, ವಿಸ್ಮಯವೇ ಸರಿ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications