ಐಫೋನ್ ಬುಕ್ ಮಾಡಿದ್ರೆ ಸಿಕ್ಕಿದ್ದು ಆಪಲ್!
ಮೆಲ್ಬೋರ್ನ್, ಆ.5: 21 ವರ್ಷ ವಯಸ್ಸಿನ ಆಸ್ಟ್ರೇಲಿಯಾದ ಯುವತಿಗೆ ಎಲ್ಲರಂತೆ ಆಪಲ್ ಕಂಪನಿ ಉತ್ಪನ್ನಗಳ ಮೇಲೆ ಏನೋ ಮೋಹ. ಇತ್ತೀಚೆಗೆ ಆನ್ ಲೈನ್ ನಲ್ಲಿ ಒಳ್ಳೆ ಆಫರ್ ಇದ್ದದ್ದು ಕಂಡು ಖುಷಿಯಾಗಿದ್ದಾಳೆ. ಹಿಂದೂ ಮುಂದೂ ನೋಡದೆ ಆಪಲ್ ಐಫೋನ್ ಬುಕ್ ಮಾಡಿದ್ದಾಳೆ. ಆದರೆ, ಆಮೇಲೆ ಬೆಸ್ತು ಬಿದ್ದಿದ್ದಾಳೆ.
ಪದಬಂಧ ತುಂಬಿ ವಾಚ್ ಕೊಡುತ್ತೇವೆ, ಸುಡೋಕು ತುಂಬಿ ಕಳಿಸಿ ಕೆಮೆರಾ ಕಳಿಸುತ್ತೇವೆ ಎಂಬ ಜಾಹೀರಾತುಗಳ ತಲೆ ಮೇಲೆ ಹೊಡೆದಂತೆ ಈ ಪ್ರಕರಣ ನಡೆದಿದೆ. Gumtree ಎಂಬ ವೆಬ್ ತಾಣದಲ್ಲಿ ಇದ್ದ ಜಾಹೀರಾತು ನೋಡಿ ಮರುಳಾದ ಯುವತಿ ತಕ್ಷಣವೇ ಒಂದು ಐಫೋನ್ ಬೇಕು ಎಂದು ಬುಕ್ ಮಾಡಿದ್ದಾಳೆ. ನಂತರ ಒಂದು ಏಕೆ ? ಎರಡು ಇರಲಿ ಎಂದು ಇನ್ನೊಂದು ಬುಕ್ ಮಾಡಿದ್ದಾಳೆ.

ವೆಬ್ ಸೈಟ್ ನಲ್ಲಿ ಬುಕ್ ಮಾಡಿದ ಯುವತಿ ಆಕೆಗೆ 1200 ಡಾಲರ್ ನಷ್ಟು ದುಡ್ಡು ನೀಡಿದ್ದಾಳೆ. ಆಕೆ ತಕ್ಷಣವೇ ದೊಡ್ಡ ಬಾಕ್ಸ್ ಅನ್ನು ಯುವತಿಗೆ ನೀಡಿದ್ದಾಳೆ. ಬಾಕ್ಸಿನಲ್ಲಿ ಇರುವುದು ಐಫೋನ್ ಸ್ಮಾರ್ಟ್ ಫೋನ್ ಎಂದು ತಿಳಿದು ಖುಷಿ ಪಟ್ಟ ಯುವತಿ ಪರೀಕ್ಷಿಸದೆ ಆದನ್ನು ಮನೆಗೆ ತಂದಿದ್ದಾಳೆ.
ಆದರೆ, ಮನೆಗೆ ಬಂದು ನೋಡಿದರೆ ಬಾಕ್ಸಿನಲ್ಲಿ ಆಪಲ್ ಐಫೋನ್ ಬದಲು ಎರಡು ಆಪಲ್(ಸೇಬು ಹಣ್ಣು) ಇರುವುದನ್ನು ಕಂಡು ಯುವತಿ ಬೆಚ್ಚಿದ್ದಾಳೆ.
ಬ್ರಿಸ್ಬೇನ್ ನ ಅಪ್ಪರ್ ಮೌಂಟ್ ಗ್ರಾವಟ್ ನ ಕ್ರೈಂ ನಿಯಂತ್ರಕ ದಳದ ಹಿರಿಯ ಅಧಿಕಾರಿ ಜೆಸ್ ಹಾಪ್ ಕಿನ್ ಅವರು ಪ್ರಕರಣ ದಾಖಲಿಸಿಕೊಂಡು ಈ ರೀತಿ ವಂಚನೆ ಬಗ್ಗೆ ಎಚ್ಚರ ಇರುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಆನ್ ಲೈನ್ ಶಾಪಿಂಗ್ ಕ್ರೇಜ್ ಗೆ ಬಿದ್ದು ಬೆಸ್ತು ಬೀಳಬೇಡಿ ಎಂದು ಹೇಳಿದ್ದಾರೆ. ಸಾಮಾನ್ಯ ಪ್ರಜ್ಞೆ ಬಳಸಿ ವಸ್ತುಗಳನ್ನು ಖರೀದಿಸಿ ಎಂದಿದ್ದಾರೆ ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಬ್ ಸೈಟ್ ನಿರ್ವಾಹಕರು ನಾವು ಎಂದಿಗೂ ಗ್ರಾಹಕರನ್ನು ಈ ರೀತಿ ಭೇಟಿ ಮಾಡಿ ವಸ್ತುಗಳನ್ನು ನೀಡಿಲ್ಲ. ಇಲ್ಲಿ ಯಾರೋ ಮೋಸ ಮಾಡಿದ್ದಾರೆ. ನಾವು ಸುರಕ್ಷಿತ ವ್ಯವಹಾರವನ್ನು ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications