ಚಿತ್ರಗಳಲ್ಲಿ: ತ್ರಿವರ್ಣ ಧ್ವಜ ಹಿಡಿದ ಭವಿಷ್ಯ ನಾಗರಿಕರು
ಬೆಂಗಳೂರು, ಆ.4: ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಪಶ್ಚಿಮ ಬಂಗಾಳದ ಚಿಣ್ಣರು ಈಗಾಗಲೇ ತಯಾರಿ ನಡೆಸಿದ್ದಾರೆ. ತ್ರಿವರ್ನ ಧ್ವಜ ಹಿಡಿದು 'ಸ್ವತಂತ್ರ' ವಾಗಿ ಓಟ ನಡೆಸಿದ್ದಾರೆ. ಬಲೂರ್ ಘಾಟ್ ಪ್ರದೇಶದಲ್ಲಿ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಸಾಗಿದ ದೃಶ್ಯ ಇಲ್ಲಿದೆ ನೋಡಿ
ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕಾಗಿ ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅವರು ಪ್ರಚಾರ ಪ್ರವಾಸದಲ್ಲಿ ತೊಡಗಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ಹತ್ತಿ ದಕ್ಷಿಣ ಭಾರತ ಕಡೆ ಸಾಗುವ ನಾಯಕನ ಕಥೆ ಬಗ್ಗೆ ಎಲ್ಲೆಡೆ ಕ್ರೇಜ್ ಹುಟ್ಟಿಸಲಾಗುತ್ತಿದೆ. ಚೆನ್ನೈನಲ್ಲಿ ಪ್ರಚಾರ ಕಾರ್ಯ ಮುಗಿಸಿಕೊಂಡು ಈ ಜೋಡಿ ಈಗ ಜಲಂಧರ್ ನಲ್ಲಿ ಪಂಜಾಬಿ ಸಾಂಪ್ರದಾಯಿಕ ಶೈಲಿಯಲ್ಲಿ ನರ್ತಿಸಿದೆ.
ಆಡಿ ಪೆರುಕ್ಕು ಅಂಗವಾಗಿ ತಿರುವಾಯೂರಿನಲ್ಲಿ ಕಾವೇರಿ ನದಿಗೆ ಪೂಜೆ, ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ ಅವರು ಪಕ್ಷದ ಚಿನ್ಹೆ ಹಿಡಿದುಕೊಂಡು ಪ್ರದರ್ಶನ ನಡೆಸಿದ್ದು ಹೇಗೆ, ರಂಜಾನ್ ಪ್ರಾರ್ಥನೆ, ಅಮೃತ ಸರ್ ನಲ್ಲಿ ತೀಜ್ ಹಬ್ಬದ ನೃತ್ಯ, ಅಸ್ಸಾಂನಲ್ಲಿ ಬುಡಕಟ್ಟು ಜನಾಂಗಗಳ ಪ್ರತಿಭಟನೆ, ಬೆಂಗಳೂರಿನ ರೂಪದರ್ಶಿಗಳ ಚಿತ್ರ, ತಿರುಪತಿಯಲ್ಲಿ ತೆಲುಗು 'ತಲ್ಲಿ' ಗೆ ಪೂಜೆ ಇನ್ನಿತರ ಚಿತ್ರಗಳನ್ನು ಇಲ್ಲಿ ನೋಡಿ. ಕಳೆದ ವಾರದ ಪ್ರಮುಖ ಸುದ್ದಿಗಳ ಚಿತ್ರಣ ನಿರೀಕ್ಷಿಸಿ..

ಬಂಗಾಳದ ಬಾಲಕ, ಬಾಲಕಿಯರು
ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಪಶ್ಚಿಮ ಬಂಗಾಳದ ಚಿಣ್ಣರು ಈಗಾಗಲೇ ತಯಾರಿ ನಡೆಸಿದ್ದಾರೆ. ತ್ರಿವರ್ನ ಧ್ವಜ ಹಿಡಿದು 'ಸ್ವತಂತ್ರ' ವಾಗಿ ಓಟ ನಡೆಸಿದ್ದಾರೆ. ಬಲೂರ್ ಘಾಟ್ ಪ್ರದೇಶದಲ್ಲಿ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಸಾಗಿದ ದೃಶ್ಯ

ಆಡಿ ಪೆರುಕ್ಕು ಆಚರಣೆ
ತಿರುವಾಯೂರು: ತಂಜಾವೂರು ಜಿಲ್ಲೆ ತಿರುವಾಯೂರುವಿನಲ್ಲಿ 'ಆಡಿ ಪೆರುಕ್ಕು' ಆಚರಣೆ ಅಂಗವಾಗಿ ಕಾವೇರಿ ನದಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು. PTI Photo by R Senthil Kumar

ನವದೆಹಲಿಯಲ್ಲಿ ರಂಜಾನ್
ಮುಸ್ಲಿಂ ಭಕ್ತಾದಿಗಳು ಜಮಿಯಾ ಮಸೀದಿಯಲ್ಲಿ ಜುಮಾತ್ ಉಲ್ ವಿದಾ ಅಂಗವಾಗಿ ಶುಕ್ರವಾರ ಸಲ್ಲಿಸಿದ ಪ್ರಾರ್ಥನೆ ಸಂದರ್ಭದಲ್ಲಿ ಕಂಡ ದೃಶ್ಯ

ಚೆನ್ನೈನಲ್ಲಿ ಎಕ್ಸ್ ಪ್ರೆಸ್ ಪ್ರಚಾರ
ಚೆನ್ನೈ: ಹೋಟೆಲ್ ಚೋಳದಲ್ಲಿ ಸೀರೆಯುಟ್ಟು ಲುಂಗಿ ಡ್ಯಾನ್ಸ್ ಮಾಡಿದ ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ

ಜಲಂಧರ್ ನಲ್ಲಿ ಚೆನ್ನೈ ಎಕ್ಸ್ ಪ್ರೆಸ್
ಚೆನ್ನೈನಲ್ಲಿ ಪ್ರಚಾರ ಕಾರ್ಯ ಮುಗಿಸಿಕೊಂಡು ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಈಗ ಜಲಂಧರ್ ನಲ್ಲಿ ಪಂಜಾಬಿ ಸಾಂಪ್ರದಾಯಿಕ ಶೈಲಿಯಲ್ಲಿ ನರ್ತಿಸಿದೆ.

ದಕ್ಷಿಣಮೂರ್ತಿ ವಿಧಿವಶ
ಶಾಸ್ತ್ರೀಯ ಸಂಗೀತಗಾರ ವಿ ದಕ್ಷಿಣಮೂರ್ತಿ ಅವರು ಚೆನ್ನೈನಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಜರ್ಮನಿಯಲ್ಲಿ ಕಂಡ ಮಿಂಚು
ಜರ್ಮನಿಯ ಗೊಯಿಲ್ರಿಟ್ಜ್(Goerlitz) ನಗರ ಮೇಲೆ ಕಂಡ ಮಿಂಚು












Click it and Unblock the Notifications