ಚಿತ್ರಗಳಲ್ಲಿ: ರಂಜಾನ್ ಸಾಮೂಹಿಕ ನಮಾಜ್
ಬೆಂಗಳೂರು, ಆ.2: ಪವಿತ್ರ ರಂಜಾನ್ ಅಂಗವಾಗಿ ಜಮಾತ್ ಉಲ್ ವಿದಾ ಆಚರಣೆಗಾಗಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಹೈದರಾಬಾದ್, ಶ್ರೀನಗರದ ಜಾಮೀಯಾ ಮಸೀದಿ, ಲಕ್ನೋದಲ್ಲಿ ಶುಕ್ರವಾರದ ರಂಜಾನ್ ಪ್ರಾರ್ಥನೆ ಚಿತ್ರ ನಿಮಗಾಗಿ ಇಲ್ಲಿದೆ
ಸಂಸತ್ತಿನಲ್ಲಿ ಕಿತ್ತಾಟ ನಡೆಸುವುದು ಭಾರತದಲ್ಲಷ್ಟೇ ಅಲ್ಲ ದೂರದ ತೈಪೆಯಲ್ಲೂ ನಡೆಯುತ್ತದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ಕೈ ಕೈ ಮಿಲಾಯಿಸಿ ಶುಕ್ರವಾರ ಪರಸ್ಪರ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಒಬ್ಬರ ಮುಖಕ್ಕೆ ಮತ್ತೊಬ್ಬರು ನೀರು ಎಸೆದಿದ್ದಾರೆ. ನಾಲ್ಕನೇ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಸದನದ ಒಪ್ಪಿಗೆ ಪಡೆಯುವ ಈ ಕಾಳಗ ನಡೆದಿದೆ.
ಸಿಬಿಐನಿಂದ ಕ್ಲೀನ್ ಚಿಟ್ ಪಡೆದ ಉತ್ತರ ಪ್ರದೇಶ ಶಾಸಕ ರಾಜಾ ಭಯ್ಯಾ, ಭಾರತ ಹಲವೆಡೆ ಮುಂದುವರೆದ ಪ್ರವಾಹ ಪರಿಸ್ಥಿತಿ , ಕರ್ನೂಲ್ ನಲ್ಲಿ ರಾಜೀವ್ ಗಾಂಧಿ ಪ್ರತಿಮೆ ತಲೆ ಒಡೆಯಲು ಸಜ್ಜಾದ ಪ್ರತಿಭಟನಾಕಾರರು, ಬಾಲಿವುಡ್ ಜಗತ್ತಿನ ಕೆಲವು ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿದೆ ತಪ್ಪದೇ ನೋಡಿ

ಜೈಪುರದಲ್ಲಿ ಪ್ರಾರ್ಥನೆ
ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವೇಳೆ ಪಹರೆ ಕಾಯುತ್ತಿರುವ ಪೊಲೀಸ್

ಹೈದರಾಬಾದಿನಲ್ಲಿ ಪ್ರಾರ್ಥನೆ
ಹೈದರಾಬಾದ್: ರಂಜಾನ್ ಮಾಸದ ಕೊನೆ ಶುಕ್ರವಾರ ವಿಶೇಷ ನಮಾಜ್ ಸಲ್ಲಿಸಲಾಯಿತು

ಶ್ರೀನಗರದಲ್ಲಿ ಪ್ರಾರ್ಥನೆ
ಶ್ರೀನಗರ : ರಂಜಾನ್ ಮಾಸದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ತೈಪೆಯಲ್ಲಿ ಹೊಯ್ ಕೈ
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ಕೈ ಕೈ ಮಿಲಾಯಿಸಿ ಶುಕ್ರವಾರ ಪರಸ್ಪರ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ.

ರಾಜೀವ್ ಪ್ರತಿಮೆ ಧ್ವಂಸ
ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ರಾಯಲಸೀಮೆಯಲ್ಲಿ ನಡೆಸಿದ ಬಂದ್ ವೇಳೆ ಕರ್ನೂಲ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರತಿಮೆ ಧ್ವಂಸಗೊಳಿಸಲಾಯಿತು.












Click it and Unblock the Notifications