ಎರಡು ರೈಲು ಅಪಘಾತಗಳಿಗೆ ಇಬ್ಬರು ಬಲಿ

ಅಜ್ಜಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಟ್ರೈನಿನ ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಜಲೀಲ್ ತೈಲಂಗಡಿ ಅವರ ಪುತ್ರ, 8 ವರ್ಷದ ಜೋಹರ್ ಮೃತಪಟ್ಟ ಬಾಲಕ. ಆತ ಪಾಲಕುಣ್ಣು ಗ್ರೀನ್ ವುಡ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ. ಜೋಹರ್ ತನ್ನ ಅಜ್ಜಿಯ ಮನೆಗೆ ತೆರಳಿದ್ದಾಗ ಈ ದುರಂತ ನಡೆದಿದೆ.
ಮತ್ತೊಂದು ಪ್ರಕರಣದಲ್ಲಿ ಇದೇ ಶಾಲೆಯ ಉದ್ಯೋಗಿಯ ಮೇಲೆ ಬೇರೊಂದು ಟ್ರೈನು ರೈಲ್ವೆ ಕ್ರಾಸಿಂಗ್ ಬಳಿ ಹತ್ತಿದ ಪರಿಣಾಮ ಆಖೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಚಿತ್ರಾ (44) ಎಂದು ಗುರುತಿಸಲಾಗಿದೆ. ಚಿತ್ರಾ, ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಈ ಅವಘಡ ನಡೆದಿದೆ. ಶವಪರೀಕ್ಷೆಯ ಬಳಿಕ ಮೃತ ದೇಹಗಳನ್ನು ಪೊಲೀಸರು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
ಮತ್ತೊಂದು ಆಕಸ್ಮಿಕದಲ್ಲಿ ಮೊಹಮದ್ ಇರ್ಶಾದ್ ಎಂಬ 13 ವರ್ಷದ ಬಾಲಕ ಚಲಿಸುತ್ತಿದ್ದ ಬಸ್ಸಿನಿಂದ ಜಾರಿಬಿದ್ದು ತೀವ್ರವಾಗಿ ಗಾಯಗೊಂಡ. ಬಳಿಕ, ಮಂಗಳೂರು ಆಸ್ಪತ್ರೆಯಲ್ಲಿ ಅಸುನೀಗಿದ. ಜುಲೈ 22ರಂದು ಈ ದುರ್ಘಟನೆ ಸಂಭವಿಸಿತ್ತು. ಸರಕಾರಿ ಬಸ್ಸಿನಲ್ಲಿ ಶಾಲೆಯಿಂದ ವಾಪಸಾಗುತ್ತಿದ್ದಾಗ ಸಮತೋಲನ ತಪ್ಪಿದ ಇರ್ಶಾದ್ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ. ಆದರೆ 1 ವಾರದ ಬಳಿಕ ಚೇತರಿಕೆ ಕಾಣದೆ ಮೃತಪಟ್ಟ.












Click it and Unblock the Notifications