ಚಿತ್ರಗಳಲ್ಲಿ: ಮೈಸೂರಿನ ಮಾನ್ಯ ಮತ್ತು ಮಕ್ಕಳು
ಬೆಂಗಳೂರು, ಜು. 30: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಕಂಡ ಹೆಣ್ಣು ಹುಲಿ ಮಾನ್ಯ ತನ್ನ 2 ತಿಂಗಳ ಮರಿಗಳೊಂದಿಗೆ ನಲಿವ ಚಿತ್ರ ನಿಮಗಾಗಿ ನೀಡುತ್ತಿದ್ದೇವೆ.
ಪ್ರಾಣಿ ಪ್ರೇಮಿಗಳಿಗೆ ವನ್ಯಪ್ರಾಣಿಗಳನ್ನು ಪೋಷಿಸಿದ ತೃಪ್ತಿ ದೊರಕಿಸಿಕೊಡುವ ಕಾರ್ಯಕ್ರಮವೊಂದನ್ನು ವಿಶ್ವವಿಖ್ಯಾತ ಮೈಸೂರು ಮೃಗಾಲಯ ಹಾಕಿಕೊಂಡಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರನ್ನೂ ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿರುವುದು ಎಲ್ಲರಿಗೂ ಗೊತ್ತೇ ಇದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದತ್ತು ಪಡೆದ ಅಮೂಲ್ಯ ಎಂಬ ಹುಲಿ ಸೇರಿದಂತೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ದರ್ಶನ್ ತೂಗುದೀಪ ಸೇರಿದಂತೆ ಹಲವಾರು ಗಣ್ಯರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ.
ಲಭ್ಯವಿರುವ ಸಂಪನ್ಮೂಲದಲ್ಲಿ ಪ್ರಾಣಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಕಷ್ಟ. ಹೀಗಾಗೇ ಸಾರ್ವಜನಿಕರಿಂದ ಪ್ರಾಣಿಗಳ ಪೋಷಣೆಗೆ ನೆರವು ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಕೊಳವೊಂದರಲ್ಲಿ ಆಡುತ್ತಿರುವ ಯುವಕರು, ನವದೆಹಲಿಯ ತಂಪು ಹವೆಯಲ್ಲಿ ಯುವತಿಯರ ಓಡಾಟ ಇದಕ್ಕೆ ತಕ್ಕಂತೆ ನಿಧಾನಗತಿ ವಾಹನಗಳ ಸಂಚಾರ, ಮುಂಬೈ ಕಾಲೇಜಿನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರವಾಹ ಪೀಡಿತ ರಾಜ್ಯಗಳಲ್ಲಿ ಯೋಧರಿಂದ ರಕ್ಷಣಾ ಕಾರ್ಯ, ಬಾರ್ಸಿಲೋನದ FINA ವಿಶ್ವ ಈಜು ಚಾಂಪಿಯನ್ ಶಿಪ್, ಅಲಹಾಬಾದಿನ ಗಂಗಾ ಯುಮುನಾ ಸಂಗಮದಲ್ಲಿ ಭಕ್ತರ ಪೂಜೆ ಇವೆ ಮುಂತಾದ ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿವೆ ನೋಡಿ...

ಮೈಸೂರು ಮೃಗಾಲಯ ಹುಲಿ
ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಕಂಡ ಹೆಣ್ಣು ಹುಲಿ ಮಾನ್ಯ ತನ್ನ 2 ತಿಂಗಳ ಮರಿಗಳೊಂದಿಗೆ

ಹಂಗೇರಿಯ ಈಜುಗಾರ್ತಿ
ಬಾರ್ಸಿಲೋನ, ಸ್ಪೇನ್: ಹಂಗೇರಿಯ ಈಜುಪಟು ಕಂಟಿಕಾ ಹೊಸಾಜು ಅವರು ಮಹಿಳೆಯ 200ಮೀ ನಲ್ಲಿ ಚಿನ್ನ ಗೆದ್ದಿದ್ದಾರೆ. FINA ವಿಶ್ವ ಸ್ಮಿಮ್ಮಿಂಗ್ ಚಾಂಪಿಯನ್ ಶಿಪ್ ಚಿತ್ರ

ಕೊಳದಲ್ಲಿ ಮಜಾ
ಶ್ರೀನಗರ: ಕೊಳವೊಂದರಲ್ಲಿ ಆಡುತ್ತಿರುವ ಯುವಕರು,

ದೆಹಲಿಯ ಹವೆ
ನವದೆಹಲಿಯ ತಂಪು ಹವೆಯಲ್ಲಿ ಯುವತಿಯರ ಓಡಾಟ

ಜಮ್ಮುನಲ್ಲಿ ಯೋಧರಿಂದ ರಕ್ಷಣೆ
ಜಮ್ಮುವಿನ ತಾವಿ ನದಿಯ ಪ್ರವಾಹ ಪೀಡಿತ ಗುಜ್ಜಾರ್ ಹಾಗೂ ಅವರ ಮಕ್ಕಳನ್ನು ರಕ್ಷಿಸಿದ ಯೋಧರು

ಕಲಾಂ ಕೈಲಿ ಪಿಟೀಲು
ಮುಂಬೈನ ಕಾಲೇಜಿನ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ

ಜೈರಾಮ್ ರಮೇಶ್
ರಾಂಚಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ

ಇಮ್ರಾನ್- ಸೋನಮ್
ಮುಂಬೈ: ಸ್ಟಾರ್ ಡಸ್ಟ್ ಮ್ಯಾಗಜೀನ್ ಕವರ್ ನೊಂದಿಗೆ ನಟ ಇಮ್ರಾನ್ ಹಾಗೂ ಸೋನಮ್ ಕಪೂರ್












Click it and Unblock the Notifications