ಮುಗಿಯದ ಆಧಾರ್ ನೋಂದಣಿ ರಗಳೆ: ಬೇಸತ್ತ ಜನ
ಉಡುಪಿ, ಜುಲೈ24: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್ ಗುರುತಿನ ಚೀಟಿ ರಗಳೆ ಮುಗಿದಿಲ್ಲ. ಕರ್ನಾಟಕ ಸೇರಿದಂತೆ ಆಧಾರ್ ನೋಂದಣಿ ಎಲ್ಲೂ ಸುಸೂತ್ರವಾಗಿ ನಡೆಯುತ್ತಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ.
ಇತ್ತೀಚೆಗೆ ತುಮಕೂರು, ಬೆಂಗಳೂರಿಗೆ ಭೇಟಿ ನೀಡಿದ್ದ Unique Identification Authority of India (UIDAI) ಅಧ್ಯಕ್ಷ ನಂದನ್ ನಿಲೇಕಣಿ ಅವರೇನೂ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಆಧಾರ್ ನೋಂದಣಿ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಆಧಾರ್ ಬಗ್ಗೆ ಜನ ನಿಜಕ್ಕೂ ಬೇಸರಗೊಂಡಿದ್ದಾರೆ.
ಇದು ಒಂದು ಉಡುಪಿಯ ಕಥೆಯಲ್ಲ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಕಥೆಯಾಗಿದೆ. ಸರಕಾರ ಸಮರೋಪಾದಿಯಲ್ಲಿ ಆಧಾರ್ ನೋಂದಣಿ ಕಾರ್ಯವನ್ನು ಮುಗಿಸುವುದು ಒಳಿತು.

ಅಂಚೆ ಕಚೇರಿ ಉದಾಸೀನತೆ
ಜಿಲ್ಲಾ ಮಟ್ಟದಲ್ಲಂತೂ ಆಧಾರ್ ನೋಂದಣಿ ಮಾಡಿಸುವುದು ದೊಡ್ಡ ರಗಳೆಯಾಗಿದೆ. ಉಡುಪಿಯಲ್ಲಿ ಜನ ಮುಗಿಬಿದ್ದು ನೋಂದಣಿ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರೆ ನೋಂದಣಿಯ ಹೊಣೆಹೊತ್ತ ಅಂಚೆ ಕಚೇರಿ ಉದಾಸೀನತೆ ತೋರುತ್ತಿದೆ.
ಉಡುಪಿಯ ಪ್ರಧಾನ ಅಂಚೆ ಕಚೇರಿ ಜೂನ್ 22ರಿಂದ ಆಯಾ ವಾರ್ಡುಗಳಲ್ಲಿ ಅರ್ಜಿ ವಿತರಿಸಿ, ಟೋಕನ್ ನೀಡುತ್ತಿದೆ. ಆದರೆ ಪ್ರತಿ ದಿನ ಕೇವಲ 50 ಅರ್ಜಿಗಳನ್ನಷ್ಟೇ ವಿತರಿಸಲಾರಂಭಿಸಿದೆ. ಇನ್ನು ನೋಂದಣಿ ಕೇಂದ್ರಗಳು ಜಿಲ್ಲೆಯಲ್ಲಿ ಕೇವಲ ಮೂರು ಕಡೆ ಇವೆ. ಉಡುಪಿ ಬಿಟ್ಟರೆ ಕುಂದಾಪುರ ಮತ್ತು ಬೈಂದೂರಿನಲ್ಲಿ ಮಾತ್ರ ಇದೆ.

ಜಿಲ್ಲೆಯಲ್ಲಿ 6 ಲಕ್ಷ ಮಂದಿ ಇದ್ದಾರೆ:
ತಮಾಷೆಯೆಂದರೆ ಜಿಲ್ಲೆಯಲ್ಲಿ ಇತ್ತೀಚೆಗೆ ರೇಷನ್ ಕಾರ್ಡ್ ನೋಂದಣಿ/ವಿತರಣೆಯೂ ಹೀಗೇ ನಡೆದಿತ್ತು. ಜಿಲ್ಲಾಡಳಿತದಿಂದ ಅದರಿಂದಲೂ ಪಾಠ ಕಲಿತಿಲ್ಲ. ದಿನಕ್ಕೆ 50 ಅರ್ಜಿಯಂತೆ ನೋಂದಣಿ ಮಾಡಿಸಿಕೊಳ್ಳುತ್ತಾ ಹೋದರೆ ಜಿಲ್ಲೆಯಲ್ಲಿ 6 ಲಕ್ಷ ಮಂದಿ ಇದ್ದಾರೆ. ಅವರಿಗೆಲ್ಲ ಆಧಾರ್ ಕಾರ್ಡು ಕೊಡುವುದಿರಲಿ, ಇವರು ನೋಂದಣಿ ಮಾಡಿಸಿಕೊಳ್ಳುವುದು ಯಾವಾಗ ಎಂದು ಜನ ಗರಂ ಆಗಿದ್ದಾರೆ.

ಜನರ ಕಷ್ಟ ಅಧಿಕಾರಿಗಳ ಕಿವಿ/ಕಣ್ಣಿಗೆ ಬಿದ್ದಿಲ್ಲ:
ಬೆಳಗ್ಗೆ 7 ಗಂಟೆಗೆ ಬಂದು ಕ್ಯೂ ನಿಂತ್ಕೋತೀವಿ. ಇಡೀ ದಿನ ಅದಕ್ಕೇ ಮೀಸಲಿಟ್ಟಿದ್ದೇವೆ. ಆದರೂ ಕೆಲಸ ಆಗುತ್ತಿಲ್ಲ. ಇಡೀ ಮನೆ ಮಂದಿಯೆಲ್ಲ ರಸ್ತೆ ಬದಿಯಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಅದೂ ಮಳೆ ಸುರಿಯುತ್ತಿದ್ದರೂ. ಆದರೂ ನಮ್ಮ ಕಷ್ಟ ನೋಡೋರು ಯಾರು ಇಲ್ಲ ಎಂದು ಜನ ಹತಾಶೆ ವ್ಯಕ್ತಪಡಿಸಿದ್ದಾರೆ.

ಆಗಬೇಕಿರುವುದೇನು?:
ಹೆಚ್ಚು ಅರ್ಜಿಗಳು, ಹೆಚ್ಚು ನೋಂದಣಿ ಕೇಂದ್ರಗಳು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ಈ ಕಾರ್ಯದಲ್ಲಿ ತೊಡಗಿಸಬೇಕು ಎಂದು ಜಿಲ್ಲೆಯ ಜನರೇನೋ ಬಯಸುತ್ತಿದ್ದಾರೆ. ಆದರೆ ಅದು ಅಧಿಕಾರಿಗಳ ಕಿವಿಗೆ/ ಕಣ್ಣಿಗೆ ಬಿದ್ದಿಲ್ಲ.
ಮಾಹಿತಿ: kannadigaworld.com
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications