ಕಡಲಿನಲ್ಲಿ ಕೊಚ್ಚಿಹೋದ ಬಸವನಗುಡಿಯ ವಿಪ್ರೊ ಟೆಕ್ಕಿ

ಎರಡು ವರ್ಷದ ಹಿಂದೆ ಲಂಡನ್ಗೆ
ಬಸವನಗುಡಿಯ ಹಳೆ ವೆಟರ್ನರಿ ಆಸ್ಪತ್ರೆ ಸಮೀಪ ವಾಸವಿರುವ ನರಸಿಂಹಯ್ಯ ಹಾಗೂ ಸಂಧ್ಯಾ ದಂಪತಿಯ ಹಿರಿಯ ಮಗ ಜೈಪ್ರಕಾಶ್, ಬೆಂಗಳೂರಿನಲ್ಲೇ ಸ್ನಾತಕೋತ್ತರ ಪದವಿ ಪಡೆದು ಎಚ್ಎಎಲ್ ನಲ್ಲಿ ನೌಕರಿ ಸೇರಿದ್ದರು. ಸಾಫ್ಟ್ ವೇರ್ ಕಡೆಗೆ ಆಕರ್ಷಿತರಾಗಿದ್ದ ಜೈಶಂಕರ್ಗೆ 2007 ರಲ್ಲಿ ಸಿಸ್ಟಂ ಮ್ಯಾನೇಜರ್ ಆಗಿ ವಿಪ್ರೋದಲ್ಲಿ ಉದ್ಯೋಗ ದೊರೆಯಿತು. ಇದೇ ಸಂದರ್ಭದಲ್ಲಿ ಅವರಿಗೆ ಅನುಪಮಾ ಜತೆ ಮದುವೆಯಾಗಿತ್ತು. ಉದ್ಯೋಗದಲ್ಲಿ ಬಡ್ತಿ ದೊರೆತು ಎರಡು ವರ್ಷದ ಹಿಂದೆ ಲಂಡನ್ಗೆ ತೆರಳಿದ್ದರು.
ಜು. 6ರಂದು ಏನಾಯಿತೆಂದರೆ
41 ವರ್ಷದ ಜೈಪ್ರಕಾಶ್ ಲಂಡನಿನ ವಿಪ್ರೊ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು. ಜು. 6ರಂದು ಪತ್ನಿ ಅನುಪಮಾ ಮತ್ತು ನಾಲ್ಕು ವರ್ಷದ ಪುತ್ರಿ ಸೃಷ್ಟಿ ಜತೆ ಸ್ವೀಡನ್ಗೆ ತೆರಳಿದ್ದರು. ಇಲ್ಲಿಯ Grisslinge ನಿರ್ಜನ ಕಡಲಕಿನಾರೆಯಲ್ಲಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದೈತ್ಯ ಅಲೆಯೊಂದು ಅಪ್ಪಳಿಸಿದೆ.
ಕ್ಷಣಾರ್ಧದಲ್ಲಿ ಜೈಪ್ರಕಾಶ್, ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಅನುಪಮಾ ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ, ಸುತ್ತಮುತ್ತ ಯಾರೂ ಇರಲಿಲ್ಲ. ಶಾಕ್ನಿಂದ ಅನುಪಮಾ ಪಜ್ಞೆ ತಪ್ಪಿದರು. ಈ ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಸೃಷ್ಟಿ ಅಮ್ಮನ ಪಕ್ಕದಲ್ಲೇ ಅಳುತ್ತಾ ಕುಳಿತಿದ್ದಳು.
ಸ್ಟಾಕ್ ಹೋಮ್ ಆಸ್ಪತ್ರೆಗೆ ದಾಖಲು
ಕೆಲ ಹೊತ್ತಿನ ಬಳಿಕ ತಾಯಿ ಮತ್ತು ಮಗುವನ್ನು ಗಮನಿಸಿದ ಸ್ಥಳೀಯರು, ಕೂಡಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅನುಪಮಾ ಅವರನ್ನು ಸ್ಟಾಕ್ ಹೋಮ್ ಆಸ್ಪತ್ರೆಗೆ ದಾಖಲು ಮಾಡಿದರೂ, ಅವರಿಗೆ ಪ್ರಜ್ಞೆ ಬಂದಿರಲಿಲ್ಲ. ಸೃಷ್ಟಿಗೆ ಭಾಷೆ ತಿಳಿಯದ ಕಾರಣ ಮತ್ತು ಜೈಪ್ರಕಾಶ್ ಅವರ ಮೃತದೇಹ ಸಹ ಪತ್ತೆಯಾಗದ ಕಾರಣ ಜೈಪ್ರಕಾಶ್ ಕೊಚ್ಚಿಹೋದ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ.
ಈ ಸಂದರ್ಭದಲ್ಲಿ ಸೃಷ್ಟಿಯನ್ನು ಸ್ಥಳೀಯ ಡೇಕೇರ್ ಸೆಂಟರ್ನಲ್ಲಿ ಇರಿಸಲಾಗಿತ್ತು. ಇತ್ತ, ಜೈಪ್ರಕಾಶ್ ಕಚೇರಿಗೆ ಗೈರುಹಾಜರಾಗಿದ್ದರಿಂದ ಅಲ್ಲಿನ ವಿಪ್ರೊ ಸಂಸ್ಥೆ ಸಹೋದ್ಯೋಗಿಗಳು ಬೆಂಗಳೂರಿನಲ್ಲಿರುವ ಜೈಪ್ರಕಾಶ್ ಸಹೋದರರೊಬ್ಬರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.
ಆರು ದಿನಗಳ ನಂತರ
ಸಮುದ್ರ ಪಾಲಾಗಿದ್ದ ಜೈಪ್ರಕಾಶ್ ಶವ ಆರು ದಿನಗಳ ನಂತರ ದಡಕ್ಕೆ ತೇಲಿಬಂದಿದೆ. ಇದನ್ನು ಕಂಡ ಪೊಲೀಸರು, ಅಪರಿಚಿತ ಭಾರತೀಯನ ಶವ ಸಿಕ್ಕಿದೆ ಎಂದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜತೆಗೆ ಸುತ್ತಲಿನ ದೇಶದ ಸಾಫ್ಟ್ವೇರ್ ಕಂಪನಿಗಳಿಗೂ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನು ಗಮನಿಸಿದ ಲಂಡನಿನ ವಿಪ್ರೊ ಅಧಿಕಾರಿಗಳು ಜೈಪ್ರಕಾಶ್ ಅವರನ್ನು ಗುರುತು ಹಿಡಿದು ಸ್ವೀಡನ್ ಆಡಳಿತಕ್ಕೆ ಮಾಹಿತಿ ನೀಡಿದ್ದಲ್ಲದೇ, ಬೆಂಗಳೂರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಜೈಪ್ರಕಾಶ್ ಅವರ ತಮ್ಮ ರವಿಕಿರಣ್ ಸ್ವೀಡನ್ಗೆ ತೆರಳಿ, ಸೋದರನ ಶವವನ್ನು ಗುರುತು ಹಿಡಿದರು. ಜತೆಗೆ, ಅಲ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಪಮಾ ಅವರನ್ನೂ ಪೊಲೀಸರ ಸಹಾಯದಿಂದ ಪತ್ತೆ ಮಾಡಿದ್ದಾರೆ. ಆ ವೇಳೆಗೆ ಅನುಪಮಾಗೂ ಪ್ರಜ್ಞೆ ಮರುಕಳಿಸಿ ದುರಂತದ ಬಗ್ಗೆ ವಿವರ ನೀಡಿದ್ದಾರೆ. ಬಳಿಕ ಡೇಕೇರ್ನಲ್ಲಿದ್ದ ಸೃಷ್ಟಿಯನ್ನು ಪೊಲೀಸರು ಪೋಷಕರ ವಶಕ್ಕೆ ಒಪ್ಪಿಸಿದರು. ಎಲ್ಲರೂ ಒಟ್ಟಾಗಿ ಜೈಶಂಕರ್ ಅವರ ಶವವನ್ನು ಲಂಡನ್ಗೆ ತಂದರು.
ಜು. 17ರಂದು ಅಂತ್ಯಕ್ರಿಯೆ
ಲಂಡನ್ ನಿಯಮದ ಪ್ರಕಾರ ಶವ ಸಂಸ್ಕಾರಕ್ಕೂ ದಿನ ನಿಗದಿ ಮಾಡಲಾಗುತ್ತದೆ. ಆದರೆ. ಅವರು ನೀಡಿದ ದಿನಾಂಕ ಮಂಗಳವಾರ ಬಂದ ಕಾರಣ ಕುಟುಂಬ ಅಂತ್ಯಸಂಸ್ಕಾರ ಮಾಡುವುದಕ್ಕೆ ಒಪ್ಪದೇ ಮರುದಿನ ಅಂದರೆ ಜು. 17 ರಂದು ಅಂತ್ಯಕ್ರಿಯೆ ವಿಧಾನ ಪೂರೈಸಿದೆ. ವಿಪರ್ಯಾಸವೆಂದರೆ ಶವ ಸಂಸ್ಕಾರಕ್ಕೆ ಜಾಗವನ್ನೂ ಸಹ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಅದರಂತೆ ರವಿಕಿರಣ್ ಅವರು ಎಲ್ಲ ನಿಯಮಗಳನ್ನು ಪಾಲಿಸಿ ಶವ ಸಂಸ್ಕಾರ ನೆರವೇರಿಸಿ, ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಪೋಷಕರಿಗೆ ಕರೆ ಮಾಡಿ ಜೈಪ್ರಕಾಶ್ ಮೃತಪಟ್ಟಿರುವ ಕುರಿತು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ದಿಗ್ಭ್ರಾಂತರಾಗಿದ್ದಾರೆ. ಜೈಪ್ರಕಾಶ್ ಅವರ ಬಸವನಗುಡಿಯ ಮನೆಯಲ್ಲಿ ಶೋಕ ಮಡುಗಟ್ಟಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications