ಕಾರ್ಪೊರೇಟ್ ಉದ್ಯೋಗಿಗಳಿಗೆ ಉಚಿತ ಆರೋಗ್ಯ ಶಿಬಿರ

ಹೌದು ಎಂದಾದರೆ, ತಕ್ಷಣವೇ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ನಿಮ್ಮ ನೋವಿಗೆ ಪರಿಹಾರ ಕಂಡುಕೊಳ್ಳಿ. ಡಾ. ಪ್ರಶಾಂತ್ ಎಸ್. ಆಚಾರ್ಯ ಮತ್ತು ಅವರ ತಂಡದವರು ಕಾರ್ಪೊರೇಟ್ ಉದ್ಯೋಗಿಗಳಿಗಾಗಿ ಉಚಿತವಾಗಿ ಸ್ಪೈನ್ ಚೆಕಪ್ ಕ್ಯಾಂಪ್ ನಡೆಸುತ್ತಿದ್ದಾರೆ. ಜುಲೈ 19, 20 ಮತ್ತು 21ರಂದು ಬೆಂಗಳೂರಿನ ಇಂದಿರಾನಗರದಲ್ಲಿ ಈ ಕ್ಯಾಂಪ್ ನಡೆಯಲಿದೆ.
ಡಾ.ಪ್ರಶಾಂತ್ ಎಸ್. ಆಚಾರ್ಯ ಅವರು ಈ ವರೆಗೆ ಸುಮಾರು 1,500 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಾರಿಯ ಕ್ಯಾಂಪ್ನಲ್ಲಿ ಡಾ.ಆಚಾರ್ಯ ಅವರು ದೀರ್ಘಕಾಲದ ಬೆನ್ನುನೋವು, ಸ್ಪಾಂಡಿಲೈಟಿಸ್ ಸೇರಿದಂತೆ ಡಿಸ್ಕ್ಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ ಮತ್ತು ಸೂಕ್ತ ಪರಿಹಾರ ಹೇಳಲಿದ್ದಾರೆ.
ಡಾ.ಪ್ರಶಾಂತ್ ಎಸ್. ಆಚಾರ್ಯ ಪ್ರಕಾರ, ಇತ್ತೀಚೆಗೆ 20-30 ವರ್ಷ ವಯಸ್ಸಿನವರಲ್ಲಿ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜನರ ಜೀವನಶೈಲಿ ಅದರಲ್ಲೂ ಪ್ರಮುಖವಾಗಿ ಕಾರ್ಪೋರೇಟ್ ಉದ್ಯೋಗಿಗಳ ಕೆಲಸದ ವೈಖರಿಯಿಂದಾಗಿ ಈ ಹೆಚ್ಚಳ ಕಂಡುಬಂದಿದೆ. ಇದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಈ ಕ್ಯಾಂಪ್ನಿಂದ ಕಾರ್ಪೋರೇಟ್ ಉದ್ಯೋಗಿಗಳು ಬೆನ್ನುನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಈ ಕ್ಯಾಂಪ್ನ ವಿಭಿನ್ನ ಶೈಲಿಯಲ್ಲಿ ನಡೆಸಲು ಪ್ಲಾನ್ ಮಾಡಲಾಗಿದೆ. ಕ್ಯಾಂಪ್ಗೆ ಬರಲು ಇಚ್ಚಿಸುವವರು ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರನ್ನೂ 20 ನಿಮಿಷಗಳಷ್ಟು ಕಾಲ ತಪಾಸಣೆ ಮಾಡಲಾಗುವುದು. ಈ 20 ನಿಮಿಷದಲ್ಲಿ ಬೆನ್ನು, ಕತ್ತು ಮತ್ತು ಭುಜದ ತಪಾಸಣೆ ಮಾಡಲಾಗುವುದು.
ಅಪಾಯಿಂಟ್ಮೆಂಟ್ಗಾಗಿ ಕರೆಮಾಡಿ ಅರ್ಥ್ ಆಯುರ್ವೇದಿಕ್ ಆಸ್ಪತ್ರೆ, ಇಂದಿರಾನಗರ 080-25288630 ಅಥವಾ 25254654.
ವಿಳಾಸ : ಅರ್ಥ್ ಆಯುರ್ವೇದಿಕ್ ಆಸ್ಪತ್ರೆ, 13ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಎಚ್ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು.












Click it and Unblock the Notifications