ಮಗನ ಆಕಸ್ಮಿಕ ಸಾವು, ಪತ್ನಿಯ ಹತ್ಯೆಗೈದ ಪತಿರಾಯ

ಆಗ್ರಾ ಸಮೀಪದ ಪತ್ಸಾಲ್ ಗ್ರಾಮದಲ್ಲಿ 8 ವರ್ಷದ ಕಂದ ತನ್ನ ತಾಯಿಯ ಜತೆ ಊರಿನ ಹೊರಗಡೆಯಿದ್ದ ದೇವಸ್ಥಾನಕ್ಕೆಂದು ನಡೆದುಹೋಗುತ್ತಿದ್ದ. ಸಮೀಪದಲ್ಲೇ ಹರಿಯುತ್ತಿದ್ದ ನೀರಿನ ಕಾಲುವೆ ಕಂಡಿದ್ದಾನೆ. ನೀರಲ್ಲಿ ಆಡುವ ಮನಸಾಗಿ, ಅಮ್ಮನತ್ತ ಆಸೆಗಣ್ಣುಗಳಿಂದ ನೋಡಿದ್ದಾನೆ. ಸರಿ ಮಗ ಆಸೆ ಪಡ್ತಿದ್ದಾನಲ್ಲಾ ಎಂದು ಅಮ್ಮ ಅವನ ಕೈಬಿಟ್ಟಿದ್ದಾಳೆ. ಅಷ್ಟೇ...
ನೀರಿಗಿಳಿದ ಮಗ ಕಾಲುವೆಯಲ್ಲಿ ನೀರಿನ ಸೆಳೆತ ಜೋರಾಗಿ ಅಮ್ಮನ ಕೈತಪ್ಪಿದ್ದಾನೆ. ನೋಡ ನೋಡುತ್ತಿದ್ದಂತೆ ಅಮ್ಮನ ಕಣ್ಣೆದುರೇ ನೀರಿನಲ್ಲಿ ಮುಳಗಲಾರಂಭಿಸಿದ್ದಾನೆ. ತಾಯಿ ಕರುಳು ಕಂದನ ರಕ್ಷಣೆಗಾಗಿ ಜೋರಾಗಿ ಕಿರುಚಿದೆ. ಆದರೆ ಬಟಾಬಯಲಿನಲ್ಲಿ ಯಾರೂ ಇರಲಿಲ್ಲ.
ಆನಂತರ ಯಾರೋ ಬಂದರು ಅನ್ನಿ. ಮಗುವನ್ನು ನೀರಿನಿಂದ ಹೊರಹಾಕಿ, ಆಸ್ಪತ್ರೆಗೂ ಸೇರಿಸಿದ್ದಾರೆ. ಆದರೆ ಮಗು ನೀರಿನಲ್ಲಿ ಉಸಿರುಗಟ್ಟಿ ಸತ್ತಿದೆ ಎಂದು ಡಾಕ್ಟರು ಹೇಳಿದ್ದಾರೆ. ಇತ್ತ ವಿಷಯ ತಿಳಿದು ಆಸ್ಪತ್ರೆಗೆ ಒಡೋಡಿ ಬಂದ ಅಪ್ಪನಿಗೆ ಮಗನ ಶವವನ್ನು ನೋಡಿ ಆಘಾತವಾಗಿದೆ.
ಮಗನ ಶವದೊಂದಿಗೆ ಮನೆಗೆ ಹೋದವನೆ ಮನೆ ಮುಂದೆ ಪುತ್ರನನ್ನು ಮಲಗಿಸಿ, ಒಳಹೋಗಿದ್ದಾನೆ. ಮಗನ (ಸೌರಭ್) ಶವ ನೋಡಲು ಹೊರಬಂದ ಪತ್ನಿಯನ್ನು (ಸುನೀತಾ ದೇವಿ) ಕಂಡು ಆತನಲ್ಲಿ ಆಕ್ರೋಶ ಹೆಚ್ಚಾಗಿದೆ. ತನ್ನ ಮುದ್ದಾದ ಮಗನ ಸಾವಿಗೆ ಇವಳೂ/ಇವಳ ನಿರ್ಲಕ್ಷ್ಯವೇ ಕಾರಣವೆಂದು ನಿರ್ಧರಿಸಿದ ಪತಿರಾಯ (ಮುಕೇಶ್), ಮನೆಯೊಳಗಿಂದ ಪಿಸ್ತೂಲು ತಂದು ನೇರವಾಗಿ ಪತ್ನಿಗೆ ಗುಂಡಿಟ್ಟು ಆಕೆಯನ್ನೂ ಪುತ್ರನ ಜತೆ ಪರಲೋಕಕ್ಕೆ ಕಳಿಸಿಕೊಟ್ಟಿದ್ದಾನೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications