ಮರಳ ಮೇಲೆ ಮಮತೆಯ ಕರೆಯೋಲೆ!
ಮೇಘಸ್ಫೋಟದಿಂದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರಾಖಂಡ್ ರಾಜ್ಯದ ಜನರಿಗೆ ಎಷ್ಟು ನೆರವು ನೀಡಿದರೂ ಸಾಕಾಗುವುದಿಲ್ಲ. ಒಡಿಶಾ ರಾಜ್ಯದ ಪುರಿ ಸಮುದ್ರ ಕಿನಾರೆಯಲ್ಲಿ ಕಲಾವಿದನೊಬ್ಬ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಮರಳಿನ ಮೇಲೆ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದ.
ರಾಜಸ್ಥಾನದ ಜೋಧ್ ಪುರದಲ್ಲಿ ರಾಜಸ್ವ ಪರೀಕ್ಷೆ ಬರೆಯಲೆಂದು ಅಭ್ಯರ್ಥಿಗಳು ರೈಲಿನ ಮೇಲೆ ಕುಳಿತು ಸವಾರಿ ಹೊರಟಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಹೋಗುವುದು ಖಂಡಿತ.
ಜಾರ್ಖಂಡ್ ರಾಜ್ಯದಲ್ಲಿ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚಿಕ್ಕ ಪುಟ್ಟ ಗ್ರಾಮದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಕುಮ್ಮಂಡಿ ಗ್ರಾಮದಲ್ಲಿ ಭದ್ರತಾ ಪಡೆಯವರು ಕಾರ್ಯವೈಖರಿ ಹೀಗಿತ್ತು.
ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ಕಶ್ಯಪ್, ಪಿ.ವಿ.ಸಿಂಧು ಮತ್ತು ಪಿ.ಗೋಪಿಚಂದ್ ಹೈದರಾಬಾದ್ ನಲ್ಲಿ ಕ್ಯಾಮಾರಾ ಕಣ್ಣಿಗೆ ಸೆರೆ ಸಿಕ್ಕರು. ಮುಂತಾದ ಚಿತ್ರಗಳು ಇಂದಿನ ಚಿತ್ರಸುದ್ದಿಗಳಲ್ಲಿ.

ಸಹಾಯ ಮಾಡಿ ಪ್ಲೀಸ್
ಉತ್ತರಾಖಂಡ್ ಪ್ರವಾಹಕ್ಕೆ ಸಿಲುಕಿದ ಜನರಿಗೆ ನೆರವು ನೀಡಿ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಒಡಿಶಾ ರಾಜ್ಯದ ಪುರಿ ಬೀಚ್ ನಲ್ಲಿ Help flood victims ಎಂದು ಕಲಾವಿದನೊಬ್ಬಮರಳಿನ ಮೇಲೆ ಚಿತ್ರ ಬಿಡಿಸಿರುವುದು ಹೀಗೆ.

ಜೀವದ ಪರೀಕ್ಷೆ
ರಾಜಸ್ಥಾನದ ಜೋಧ್ ಪುರದಲ್ಲಿ ರಾಜಸ್ವ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ರೈಲಿನ ಮೇಲೆ ಸಾಹಸ ಮಾಡಡಿಕೊಂಡು ಹೊರಟಿದ್ದು ಹೀಗೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಹೋಗುವುದು ಖಂಡಿತ. ಪರೀಕ್ಷೆ ಬರೆಯಲು ಜೀವದ ಪರೀಕ್ಷೆಯನ್ನು ಪಣಕ್ಕಿಟ್ಟಿದ್ದಾರೆ ವಿದ್ಯಾರ್ಥಿಗಳು.

ಭಾರತದ ಭರವಸೆಗಳು
ಭಾರತದ ಬ್ಯಾಡ್ಮಿಂಟ್ ನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ಕಶ್ಯಪ್, ಪಿ.ವಿ.ಸಿಂಧು ಮತ್ತು ಪಿ.ಗೋಪಿಚಂದ್ ಹೈದರಾಬಾದ್ ನಲ್ಲಿ ಆಲ್ ಇಂಡಿಯಾ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ಯಾಮರಾಗೆ ಒಟ್ಟಾಗಿ ಫೋನ್ ನೀಡಿದರು.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಮಾಂಕಟೋ ನಗರದ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಕಟ್ಟಲು ಆದೆಷ್ಟು ದಿನಗಳನ್ನು ತೆಗೆದುಕೊಂಡಿದ್ದರೋ? ಆದರೆ, ಅದನ್ನು ಕೆಲವೇ ನಿಮಿಷದಲ್ಲಿ ಧ್ವಂಸಗೊಳಿಸಲಾಗಿದೆ. ಪಾರ್ಕಿಂಗ್ ಪ್ರದೇಶಕ್ಕೆ ಜಾಗ ಕಲ್ಪಿಸಲು ಕಟ್ಟಡವನ್ನು ಸ್ಪೋಟಕ ಬಳಿಸಿ ಕೆಡವಿದ್ದು ಹೀಗೆ.

ಯವರಾಜನ ಸಾಂತ್ವನ
ಉತ್ತರಾಖಂಡದ ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ತೆರಳಿದ್ದ ಹೆಲಿಕಾಪ್ಟರ್ ಪತನಕ್ಕೀಡಾಗಿ ಮೃತಪಟ್ಟ ಅಮೇಥಿ ಜಿಲ್ಲೆಯ ಯೋಧ ಅಖೀಲೇಶ್ ಮನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ, ಸಾಂತ್ವನ ಹೇಳಿದರು.

ಗುಂಡಿಗೆ ಎದೆಯೊಡ್ಡಿ
ಜಾರ್ಖಂಡ್ ರಾಜ್ಯದ ಲೇಥಾರ್ ಜಿಲ್ಲೆಯಲ್ಲಿ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿ ನಂತರ ಪ್ರತಿ ಗ್ರಾಮದಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕುಮಾಂಡಿ ಗ್ರಾಮದಲ್ಲಿ ಭದ್ರತಾ ಪಡೆಯವರು ಮಾವೋವಾದಿಗಳಿಗಾಗಿ ಕಾಯುತ್ತಿದ್ದಾಗ ಕಂಡಿದ್ದು ಹೀಗೆ.

ಇವತ್ತು ಕೋಪ ಬೇಡಪ್ಪ
ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿ ಕ್ರಿಕೆಟ್ ಪಂದ್ಯದ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಭಾನುವಾರ ರಾತ್ರಿ ನಡೆಯಲಿದೆ. ಎಲ್ಲರ ಕಣ್ಣು ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಲ್ ಮೇಲೆ ಬಿದ್ದಿದೆ. ಇಂದು ಮಾತ್ರ ಕೋಪ ಮಾಡಿಕೊಂಡು, ಭಾರತೀಯ ಬೌಲರ್ ಗಳನ್ನು ದಂಡಿಸಬೇಡ ಎಂದು ಭಾರತೀಯರು ಆಶಿಸುತ್ತಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications